ಮಧ್ಯರಾತ್ರಿ ಓಡಿ ಮನೆ ಸೇರೋ ಯುವಕನಿಗೆ 2.5 ಲಕ್ಷದ ಚೆಕ್ ನೀಡಿದ ಶಾಪರ್ಸ್ ಸ್ಟಾಪ್

Public TV
2 Min Read
PRADEEP MEHRA CHECK

ನೊಯ್ಡಾ: ಸೇನೆ ಸೇರುವ ಉದ್ದೇಶದಿಂದ ಕೆಲಸ ಮುಗಿಸಿ ಪ್ರತಿದಿನ ರಾತ್ರಿ ಓಡಿ ಮನೆ ಸೇರುತ್ತಿದ್ದ ಯುವಕನಿಗೆ ಇದೀಗ ಶಾಪರ್ಸ್ ಸ್ಟಾಪ್ 2.5 ಲಕ್ಷದ ಚೆಕ್ ನೀಡಿದೆ.

ಹೌದು. ಪ್ರದೀಪ್ ಮೆಹ್ರಾ ತಾಯಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದು, ದೆಹಲಿಯ ಆಸ್ಪತ್ರೆಯೊಂದರಲ್ಲಿ ಕಳೆದ 2 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿಚಾರ ತಿಳಿದ ಶಾಪರ್ಸ್ ಸ್ಟಾಪ್, ಪ್ರದೀಪ್‍ಗೆ 2.5 ಲಕ್ಷ ರೂ ಚೆಕ್ ನೀಡಿದೆ. ಈ ಮೂಲಕ ಪ್ರದೀಪ್ ಕನಸು ನನಸು ಮಾಡಲು ಹಾಗೂ ತಾಯಿಗೆ ಚಿಕಿತ್ಸೆ ನೀಡಲು ಸಹಾಯವಾದಂತಾಗಿದೆ.

ಚಲನಚಿತ್ರ ನಿರ್ಮಾಪಕ ವಿನೋದ್ ಕಪ್ರಿ, ಪ್ರದೀಪ್ ರಾತ್ರಿ ಓಡುತ್ತಿರುವ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಅಲ್ಲದೆ ಪ್ರದೀಪ್ ಗೆ ಸಹಾಯದ ಮಹಾಪೂರವೇ ಹರಿದಬಂತು. ಇದೀಗ ವಿನೋದ್ ಅವರು ಪ್ರದೀಪ್‍ಗೆ ಚೆಕ್ ನೀಡಿರುವ ಫೋಟೋಗಳನ್ನು ಕೂಡ ತಮ್ಮ ಟ್ವಿಟ್ಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ಮಧ್ಯರಾತ್ರಿಯ ಓಟಗಾರ ಪ್ರದೀಪ್ ಮೆಹ್ರಾ, ನಿಮ್ಮೆಲ್ಲರ ಪ್ರೀತಿ ಹಾಗೂ ಸಹಕಾರ ಕಂಡು ತುಂಬಾ ಖುಷಿಯಾಗಿದ್ದಾರೆ. ಅಲ್ಲದೆ ತಾಯಿಯ ಚಿಕಿತ್ಸೆ ಹಾಗೂ ಕನಸು ನನಸು ಮಾಡುವ ಸಲುವಾಗಿ ನಿನ್ನೆ ಅವರಿಗೆ ಶಾಪರ್ಸ್ ಸ್ಟಾಪ್ ಕಡೆಯಿಂದ 2.5 ಲಕ್ಷದ ಚೆಕ್ ನೀಡಲಾಗಿದೆ. ದೇವರು ಒಳ್ಳೆದು ಮಾಡಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಮೃತಪಟ್ಟ ಮುದ್ದಿನ ಶ್ವಾನದ ಸವಿನೆನಪಿಗಾಗಿ ದೇಗುಲ ನಿರ್ಮಾಣ

pradeep mehra 1

ಪ್ರದೀಪ್ ವೀಡಿಯೋ ವೈರಲ್: ರಾತ್ರಿ ವೇಳೆ ಓಡಿಕೊಂಡು ಹೋಗುತ್ತಿದ್ದ ಪ್ರದೀಪ್ ಮೆಹ್ರಾನನ್ನು ನೋಡಿದ ಚಿತ್ರನಿರ್ಮಾಪಕ ವಿನೋದ್ ಕಪ್ರಿ ವೀಡಿಯೋವನ್ನು ಮಾಡಿದ್ದರು. ಈ ವೇಳೆ ಕಪ್ರಿಯವರು ಯುವಕನ ಬಳಿ, ಮನೆಗೆ ಬಿಡುವುದಾಗಿ ಹೇಳಿದ್ದರು. ಅದಕ್ಕೆ ಇಲ್ಲ ನನ್ನ ಅಭ್ಯಾಸ ತಪ್ಪಿ ಹೋಗುತ್ತದೆ. ನಾನು ಫಿಟ್ ಆಗಿರಲು ಓಡುವುದು ನನಗೆ ಅವಶ್ಯಕ ಎಂದು ಹೇಳಿದ್ದರು. ಇದನ್ನೂ ಓದಿ: ಸೇನೆಗೆ ತಯಾರಿ – ಕೆಲಸ ಮುಗಿಸಿ ಪ್ರತಿದಿನ 10 ಕಿಮೀ ಓಡಿಕೊಂಡೇ ಮನೆಗೆ ಹೋಗ್ತಾನೆ!

ಅಲ್ಲದೆ ಓಡುತ್ತಲೇ ಕಪ್ರಿ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದ ಪ್ರದೀಪ್, ಸದ್ಯ ನಾನು ನನ್ನ ಅಣ್ಣನೊಂದಿಗೆ ಇದ್ದೇನೆ. ತಾಯಿಗೆ ಹುಷಾರಿಲ್ಲ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದಿದ್ದರು. ಊಟ ಆಗಿದೆಯಾ ಎಂದು ಕೇಳಿದ್ದಕ್ಕೆ, ಇಲ್ಲ ಈಗ ನಾನು ಮನೆಗೆ ಹೋಗಿ ಅಡುಗೆ ಮಾಡಬೇಕು. ಆಗ ಕಪ್ರಿಯವರು, ಬಾ ನನ್ನೊಂದಿಗೆ ಊಟ ಮಾಡು ಎಂದಿದ್ದಕ್ಕೆ ಇಲ್ಲ ನಾನು ಹಾಗೆ ಮಾಡಿದರೆ ಮನೆಯಲ್ಲಿರುವ ನನ್ನ ಅಣ್ಣ ಹಸಿದುಕೊಂಡೇ ಇರಬೇಕಾಗುತ್ತದೆ ಎಂದು ಹೇಳಿದ್ದರು. ಯಾಕೆ ಅವರು ಅಡುಗೆ ಮಾಡುವುದಿಲ್ಲವಾ ಎಂದು ಕಪ್ರಿ ಮರು ಪ್ರಶ್ನೆ ಹಾಕಿದಾಗ, ಇಲ್ಲ ಅವರಿಗೆ ಈಗ ರಾತ್ರಿ ಡ್ಯೂಟಿ ಇದೆ. ನಾನು ಹೋಗಿ ಅಡುಗೆ ಮಾಡಬೇಕು ಎಂದು ಹೇಳಿದ್ದರು.

pradeep

ಈ ವೀಡಿಯೋವನ್ನು ಕಪ್ರಿಯವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಶೇರ್ ಮಾಡಿಕೊಂಡಿದ್ದರು. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಅಲ್ಲದೆ ಉತ್ತರಾಖಂಡದ ಅಲ್ಮೋರಾದ ಯುವಕ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದರು. ಸೇನೆಯ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಬಾಲಿವುಡ್ ಸೆಲೆಬ್ರಿಟಿಗಳು ಪ್ರದೀಪ್ ಅವರನ್ನು ‘ಶುದ್ಧ ಚಿನ್ನ’ ಎಂದು ಶ್ಲಾಘಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *