ಕಾರವಾರ: ರಸ್ತೆಯೇ ಇಲ್ಲದೇ ಶವವನ್ನು ಬೊಂಬಿಗೆ ಕಟ್ಟಿ ಗ್ರಾಮಸ್ಥರು ಸಾಗಾಟ ಮಾಡಿದ ಪ್ರಸಂಗವೊಂದು ಉತ್ತರ ಕನ್ನಡ (Uttara Kannada) ದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲೂಕಿನ ಬೆರಡಿ ಗ್ರಾಮದಲ್ಲಿ ಘಟನೆ. ಬೆರಡಿ ಗ್ರಾಮದ ಹೊರವಲಯದಲ್ಲಿ ಮರಗಳಿಗೆ ಬೆಂಕಿ (Fire) ತಗುಲಿದ್ದಾಗ ದಾಮೋದರ ನೇಮು ನಾಯ್ಕ (68) ಸಿಲುಕಿ ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದೆ. ಇವರ ಶವ ಸಾಗಾಟ ಮಾಡಲು ಗ್ರಾಮಕ್ಕೆ ರಸ್ತೆ ಸಂಪರ್ಕವಿಲ್ಲದ ಹಿನ್ನೆಲೆಯಲ್ಲಿ ಬಿದರಿನ ಬೊಂಬಿಗೆ ಕಟ್ಟಿ ಗ್ರಾಮಸ್ಥರು ಹೊತ್ತು ಸಾಗಿದರು. ಸುಮಾರು 8 ಕಿ.ಮೀ ವರಗೆ ಹೀಗೆ ಮೃತದೇಹ ಹೊತ್ತು ಸಾಗಿದ್ದಾರೆ. ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರ; ವೀಡಿಯೋ ಲೀಕ್ ಮಾಡೋದಾಗಿ ಬೆದರಿಕೆ ಹಾಕಿದ್ದ IAS ಅಧಿಕಾರಿ, ಮಾಜಿ ಶಾಸಕ ವಿರುದ್ಧ ಕೇಸ್
ಅಂಕೋಲ ತಾಲೂಕು ಆಸ್ಪತ್ರೆಯಿಂದ ಶವ ಪರೀಕ್ಷೆ ಕೊಂಡೊಯ್ದು ಮೃತದೇಹ ಹೊತ್ತುಕೊಂಡು ಮರಳಿ ಗ್ರಾಮಕ್ಕೆ ತಂದಿದ್ದಾರೆ.
ಈ ಘಟನೆ ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k