ಮುಂಬೈ: ರಾಜೀನಾಮೆ ನೀಡಿ ಸೊಫಿಟೆಲ್ ಹೋಟೆಲ್ ನಲ್ಲಿರುವ ಅತೃಪ್ತ ಶಾಸಕರು ಸುದ್ದಿಗೋಷ್ಠಿ ಮೂಲಕ ಸಿಎಂ ಅವರಿಗೆ ಖಡಕ್ ಸಂದೇಶವನ್ನು ರವಾನಿಸಿದ್ದಾರೆ.
ನಾವೆಲ್ಲ 13 ಶಾಸಕರು ಒಟ್ಟಾಗಿದ್ದೇವೆ. 10 ಶಾಸಕರು ಮುಂಬೈ ಹೋಟೆಲ್ ನಲ್ಲಿದ್ದೇವೆ. ರಾಜೀನಾಮೆಯನ್ನು ಹಿಂಪಡೆಯುವ ಮಾತು ಬರಲ್ಲ. ಈಗಾಗಲೇ ರಾಜೀನಾಮೆ ನೀಡಿದ್ದರಿಂದ ಶಾಸಕಾಂಗ ಸಭೆಗೆ ಹಾಜರಾಗುವದಿಲ್ಲ. ನಾವು ಸಿಎಂ ಬದಲಾವಣೆ ಮಾಡಿ, ಇವರನ್ನೇ ಮುಖ್ಯಮಂತ್ರಿ ಮಾಡಬೇಕೆಂದು ಬೇಡಿಕೆಯನ್ನು ಯಾರ ಮುಂದೆಯೂ ಇಟ್ಟಿಲ್ಲ ಎಂದು ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಸಂದೇಶವನ್ನು ರಾಜ್ಯ ನಾಯಕರಿಗೆ ರವಾನಿಸಿದರು.
ಹೋಟೆಲ್ ಮುಂಭಾಗದಲ್ಲಿ ಬಂದ 10 ಶಾಸಕರ ಪರವಾಗಿ ಎಸ್.ಟಿ.ಸೋಮಶೇಖರ್ ಮಾತನಾಡಿ, ನಮ್ಮ ನಿರ್ಧಾರ ಅಚಲವಾಗಿದೆ. ಶಾಸಕ ಸ್ಥಾನವೇ ಬೇಡ ಎಂದು ರಾಜೀನಾಮೆ ನೀಡಿದ್ದರಿಂದ ಶಾಸಕಾಂಗ ಸಭೆಗೆ ಹೋಗಲ್ಲ. ರಾಮಲಿಂಗಾ ರೆಡ್ಡಿ, ಮುನಿರತ್ನ ಮತ್ತು ಆನಂದ್ ಸಿಂಗ್ ಬಂದು ನಾಳೆ ನಮ್ಮನ್ನು ಸೇರಿಕೊಳ್ಳಲಿದ್ದಾರೆ. ರಾಜೀನಾಮೆ ಹಿಂಪಡೆದು ಬೆಂಗಳೂರಿಗೆ ಬರುತ್ತಾರೆ ಎಂಬ ಮಾಹಿತಿ ಮಾಧ್ಯಮಗಳ ಮೂಲಕ ಗೊತ್ತಾಗಿದೆ. ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲು ಮಾಧ್ಯಮಗಳ ಜೊತೆ ಮಾತನಾಡುತ್ತಿದ್ದೇವೆ ಎಂದರು.
ಸೋಮಶೇಖರ್ ಹೇಳಿರೋದು ನೂರಕ್ಕೆ ನೂರರಷ್ಟು ಸತ್ಯ. 13 ಶಾಸಕರು ರಾಜೀನಾಮೆಯನ್ನು ಹಿಂಪಡೆಯುವ ಪ್ರಶ್ನೆ ಬರಲ್ಲ. ಯಾರು ನಮ್ಮ ಹೆಜ್ಜೆಯನ್ನು ಹಿಂದೆ ಇಡಲ್ಲ ಎಂದು ಶಾಸಕ ಬಿ.ಸಿ.ಪಾಟೀಲ್ ತಿಳಿಸಿದರು.
Karnataka Congress MLA ST Somashekar outside Sofitel hotel in Mumbai: We 13 MLAs submitted resignation to the Speaker & informed Governor. We all are together. No question of going back to Bengaluru & withdrawing the resignations. pic.twitter.com/0ae0ttAlgo
— ANI (@ANI) July 7, 2019