Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪೊಲೀಸರು ಹಿಡಿದುಕೊಟ್ಟ ಗೋವುಗಳ ರೋದನ ಕೇಳದಾಯಿತೇ ಮಂಗಳೂರಿನ ಗೋ ಭಕ್ತರಿಗೆ !
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Dakshina Kannada | ಪೊಲೀಸರು ಹಿಡಿದುಕೊಟ್ಟ ಗೋವುಗಳ ರೋದನ ಕೇಳದಾಯಿತೇ ಮಂಗಳೂರಿನ ಗೋ ಭಕ್ತರಿಗೆ !

Dakshina Kannada

ಪೊಲೀಸರು ಹಿಡಿದುಕೊಟ್ಟ ಗೋವುಗಳ ರೋದನ ಕೇಳದಾಯಿತೇ ಮಂಗಳೂರಿನ ಗೋ ಭಕ್ತರಿಗೆ !

Public TV
Last updated: December 20, 2018 12:55 pm
Public TV
Share
3 Min Read
MNG GOVU RESCUE 4
SHARE

-ಕಸಾಯಿಗಳ ಕೈಯಿಂದ ಪೊಲೀಸರು ರಕ್ಷಿಸಿದ್ರೂ ಗೋವುಗಳನ್ನು ಸಾಕಲ್ಲ ಎಂದ ಗೋಶಾಲೆಗಳು !
-ಫಂಡ್ ಇಲ್ಲವೆಂದು ಗೋವಿನ ಸಾಕಣೆಗೆ ನಿರಾಕರಿಸಿದ ಬಜರಂಗದಳ, ವಿಹಿಂಪ ಮುಖಂಡರು !

ಮಂಗಳೂರು: ಕರಾವಳಿಯಲ್ಲಿ ಗೋ ಕಳ್ಳತನ, ಗೋಹತ್ಯೆ ವಿಚಾರದಲ್ಲಿ ಗಲಾಟೆ ನಡೆದಿದ್ದನ್ನು ಕೇಳಿದ್ದೇವೆ. ಹಟ್ಟಿಗೆ ನುಗ್ಗಿ ಗೋವುಗಳನ್ನು ಕದ್ದೊಯ್ದ ವಿಚಾರ ಹಿಂದೂ – ಮುಸ್ಲಿಮರ ಮಧ್ಯೆ ಹಿಂಸೆಗೆ ಕಾರಣವಾಗಿದ್ದನ್ನು ಕಂಡಿದ್ದೇವೆ. ಪೊಲೀಸರು ಗೋ ಹಂತಕರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲವೆಂದು ಹಿಂದೂ ಸಂಘಟನೆಗಳು ಬೀದಿ ರಂಪ ಮಾಡಿದ್ದನ್ನೂ ಸಹ ನೋಡಿದ್ದೇವೆ. ಗೋರಕ್ಷಣೆಯ ವಿಚಾರದಲ್ಲಿ ರಂಪಾಟಕ್ಕೆ ವೇದಿಕೆಯಾಗಿರುವ ಹಿಂದೂ ಸಂಘಟನೆಗಳ ಶಕ್ತಿ ಕೇಂದ್ರ ಮಂಗಳೂರಿನಲ್ಲಿ ತದ್ವಿರುದ್ಧ ಘಟನೆಯೊಂದು ನಡೆದಿದ್ದು, ಸಂಘಟನೆಗಳ ಮಾನವನ್ನೇ ಹರಾಜಾಗುವಂತೆ ಮಾಡಿದೆ.

MNG GOVU RESCUE 1

ಮಂಗಳೂರಿನ ಸಿಸಿಬಿ ಪೊಲೀಸರು ಸೋಮವಾರ ರಾತ್ರಿ ಗಸ್ತಿನಲ್ಲಿದ್ದಾಗ, 10 ಚಕ್ರದ ಕಂಟೇನರ್ ಲಾರಿಯೊಂದು ಅನುಮಾನಾಸ್ಪದ ನೆಲೆಯಲ್ಲಿ ತೆರಳುತ್ತಿದ್ದುದು ಕಂಡುಬಂದಿತ್ತು. ಸುರತ್ಕಲ್ ನಿಂದ ಫಾಲೋ ಮಾಡುತ್ತಾ ಬಂದ ಪೊಲೀಸರು, ಪಂಪ್ ವೆಲ್ ವೃತ್ತದಲ್ಲಿ ಲಾರಿಯನ್ನು ಅಡ್ಡಗಟ್ಟಿದಾಗ, ಮುಚ್ಚಿದ ಕಂಟೇನರ್ ನಲ್ಲಿ ಗೋವುಗಳನ್ನು ತುಂಬಿಕೊಂಡಿದ್ದು ಗಮನಕ್ಕೆ ಬಂದಿದೆ. 24 ದೊಡ್ಡ ಗಾತ್ರದ ಹೈಬ್ರಿಡ್ ತಳಿಯ ಹೋರಿಗಳು ಮತ್ತು ಏಳು ಎಮ್ಮೆಗಳನ್ನು ಒಂದೇ ಲಾರಿಯಲ್ಲಿ ತುಂಬಿಸಲಾಗಿತ್ತು. ಯಾವುದೇ ದಾಖಲೆ ಪತ್ರಗಳಿಲ್ಲದೆ, ಉಸಿರುಕಟ್ಟಿದ ಸ್ಥಿತಿಯಲ್ಲಿ ಸಾಗಿಸುತ್ತಿದ್ದ ಕಾರಣ, ಗೋವುಗಳನ್ನು ಪೊಲೀಸರೇ ರಕ್ಷಣೆ ಮಾಡಿದ್ದರು.

ಹುಬ್ಬಳ್ಳಿಯಿಂದ ಮಂಗಳೂರಿನ ಮೂಲಕ ಕೇರಳಕ್ಕೆ ಸಾಗಿಸಲ್ಪಡುತ್ತಿದ್ದ ಗೋವುಗಳು ಪೊಲೀಸರ ಕಾರ್ಯಾಚರಣೆಯಿಂದ ಬದುಕುಳಿದಿದ್ದವು. ಲಾರಿಯಲ್ಲಿದ್ದ ಇಬ್ಬರು ಮತ್ತು ಲಾರಿಗೆ ಬೆಂಗಾವಲಾಗಿ ಬರುತ್ತಿದ್ದ ಇನ್ನೋವಾ ಕಾರಿನಲ್ಲಿದ್ದ ಇಬ್ಬರನ್ನು ಬಂಧಿಸಿದ್ದ ಸಿಸಿಬಿ ಪೊಲೀಸರು, ಬಳಿಕ ಪ್ರಕರಣವನ್ನು ಮಂಗಳೂರಿನ ನಗರ ಠಾಣೆಗೆ ವರ್ಗಾಯಿಸಿದ್ದರು. ಆದರೆ, ವಶಕ್ಕೆ ಪಡೆದ ಗೋವುಗಳನ್ನು ಸಲಹುವುದು ಪೊಲೀಸರಿಗೆ ಸವಾಲಾಗಿತ್ತು. ಹೀಗಾಗಿ ಮಂಗಳೂರಿನ ಗೋಶಾಲೆಗಳಲ್ಲಿ ಗೋವುಗಳನ್ನು ತಾತ್ಕಾಲಿಕ ನೆಲೆಯಲ್ಲಿ ಇರಿಸಿಕೊಳ್ಳಲು ಪೊಲೀಸರು ಮನವಿ ಮಾಡಿದ್ದರು. ಆದರೆ, ದೊಡ್ಡ ಗಾತ್ರದ ಎತ್ತು ಮತ್ತು ಎಮ್ಮೆಗಳಾಗಿದ್ದರಿಂದ ಅವುಗಳ ಪಾಲನೆಗೆ ಗೋಶಾಲೆಗಳು ನಿರಾಕರಿಸಿದ್ದವು.

MNG GOVU RESCUE 2

ಗೋವುಗಳನ್ನು ಪೊಲೀಸ್ ಠಾಣೆಯಲ್ಲಿ ಕಟ್ಟಿಹಾಕಲು ಸಾಧ್ಯವಿಲ್ಲದ ಕಾರಣ ಕೊನೆಗೆ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಶೆಟ್ಟಿಗೆ ಪೊಲೀಸರು ಮನವಿ ಮಾಡಿದ್ದಾರೆ. ಪ್ರಕಾಶ್ ಶೆಟ್ಟಿ ಮರುದಿನ ತನ್ನ ಬಜ್ಪೆ ಬಳಿಯ ಕೆಂಜಾರಿನ ಎಸ್ಟೇಟಿಗೆ ಕೊಂಡೊಯ್ದು ಗೋವುಗಳಿಗೆ ನೀರು, ಮೇವಿನ ವ್ಯವಸ್ಥೆ ಮಾಡಿದ್ದಾರೆ. ಆದರೆ, ಇಲ್ಲಿ ಪ್ರಶ್ನೆ ಇರುವುದು ಗೋ ಹತ್ಯೆ ವಿಚಾರದಲ್ಲಿ ಬೀದಿ ರಂಪ ಮಾಡುವ ಹಿಂದೂ ಸಂಘಟನೆಗಳದ್ದು.

ಗೋ ಕಳ್ಳರನ್ನು ಪೊಲೀಸರು ಹಿಡಿಯಲ್ಲವೆಂದು ಆರೋಪಿಸಿ ಪ್ರತಿಭಟನೆ ಮಾಡುವ ಬಜರಂಗದಳ, ವಿಶ್ವ ಹಿಂದೂ ಪರಿಷತ್ತಿನ ಮುಖಂಡರಿಗೆ, ಪೊಲೀಸರು ಹಿಡಿದು ಕೊಟ್ಟ ಗೋವುಗಳನ್ನು ಸಲಹುವುದಕ್ಕೆ ಸಾಧ್ಯವಿಲ್ಲವೇ? ಅಲ್ಲದೆ, ಮಂಗಳೂರಿನಲ್ಲಿ ಹಿಂದೂ ಸಂಘಟನೆಗಳಿಗೆ ಸೇರಿದ ಬಹಳಷ್ಟು ಗೋಶಾಲೆಗಳಿವೆ. ಗೋವುಗಳನ್ನು ಸಲಹಲು ಸರ್ಕಾರಿ ಫಂಡ್ ಇಲ್ಲವೆನ್ನುವ ಈ ಗೋಶಾಲೆಗಳಿಗೆ ಇತ್ತೀಚೆಗಷ್ಟೆ ಸರ್ಕಾರದ ಅನುದಾನ ಲಭಿಸಿದ್ದನ್ನು ನೆನಪಿಸಬೇಕು.

MNG GOVU RESCUE 5

ಮಂಗಳೂರು ನಗರ ಹೊರವಲಯದ ಪಜೀರಿನಲ್ಲಿರುವ ವಿಶ್ವ ಹಿಂದೂ ಪರಿಷತ್ತಿನ ಮುಖಂಡರಿಗೆ ಸೇರಿದ ಗೋಶಾಲೆಗೆ 12 ಲಕ್ಷ ರೂ. ಸೇರಿದಂತೆ ಮಂಗಳೂರಿನ ವಿವಿಧ ಗೋಶಾಲೆಗಳಿಗೆ ಇತ್ತೀಚೆಗಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ 25 ಲಕ್ಷ ರೂ.ಗಳ ಚೆಕ್ ವಿತರಿಸಿದ್ದರು. ಆದರೆ, ಈಗ ಗೋವುಗಳ ಪಾಲನೆಗೆ ಮಾತ್ರ ಗೋಶಾಲೆಗಳಿಗೆ ಫಂಡ್ ಇಲ್ಲವೆಂದು ಹಿಂದೂ ಸಂಘಟನೆಗಳು ನೆಪ ಹೇಳುತ್ತಿರುವುದು ಮೂರು ಮುಕ್ಕಾಲಿನ ಮರ್ಯಾದೆಯನ್ನೂ ಕಳಕೊಂಡಂತಾಗಿದೆ.

ವಿಶೇಷ ಅಂದರೆ, ಬಹುತೇಕ ಗೋಶಾಲೆಗಳಿಗೆ ಸರ್ಕಾರದ ಗೋಮಾಳ ಭೂಮಿಯನ್ನು ಉಚಿತವಾಗಿ ಕೊಡಲಾಗಿದೆ. ಗೋವುಗಳ ಪಾಲನೆಯ ಉದ್ದೇಶದಿಂದಲೇ ಪಜೀರು ಗೋಶಾಲೆಗೆ ಹತ್ತು ಎಕರೆ ಗೋಮಾಳ ಭೂಮಿಯನ್ನು ನೀಡಲಾಗಿತ್ತು ಅನ್ನೋದನ್ನು ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಶೆಟ್ಟಿ ಹೇಳುತ್ತಾರೆ. ಅಲ್ಲದೆ, ಪಜೀರು ಗೋಶಾಲೆ ವಿಶ್ವ ಹಿಂದು ಪರಿಷತ್ತಿನ ಮುಖಂಡರಿಗೆ ಸೇರಿದ್ದರೂ, ಗೋವುಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಗೋವಿನ ವಿಚಾರದಲ್ಲಿ ಬೀದಿ ರಾಜಕೀಯ ಮಾಡುವ ಸಂಘಟನೆಗಳ ಮುಖವಾಡವನ್ನೇ ಕಳಚುವಂತೆ ಮಾಡಿದೆ.

MNG GOVU RESCUE 6

ಎರಡು ತಿಂಗಳ ಹಿಂದೆ ಮಂಗಳೂರಿನ ಸ್ಮಾರ್ಟ್ ಸಿಟಿಯ ಅನುದಾನದಡಿ 15 ಕೋಟಿ ಮೊತ್ತವನ್ನು ಕುದ್ರೋಳಿ ಕಸಾಯಿಖಾನೆಗೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಸಾಯಿಖಾನೆಗೆ ಹಣ ನೀಡುತ್ತಾರೆ, ಗೋಶಾಲೆಗೆ ಅನುದಾನ ನೀಡಲ್ಲ ಅನ್ನುವ ಆರೋಪವನ್ನು ಹಿಂದೂ ಸಂಘಟನೆಗಳು ಮಾಡಿದ್ದವು. ಅಲ್ಲದೆ, ಕುದ್ರೋಳಿ ಕಸಾಯಿಖಾನೆಗೆ ಅನುದಾನ ನೀಡದಂತೆ ಪ್ರತಿಭಟನೆಯನ್ನೂ ನಡೆಸಿದ್ದವು. ಇದೇ ವಿಚಾರ ಮಂಗಳೂರಿನ ಸಂಸದ ನಳಿನ್ ಕುಮಾರ್ ಮತ್ತು ಸಚಿವ ಯು.ಟಿ.ಖಾದರ್ ನಡುವೆ ಕೆಸರೆರಚಾಟಕ್ಕೂ ಕಾರಣವಾಗಿತ್ತು.

ದೊಡ್ಡ ಗಾತ್ರದ ಹೋರಿಗಳನ್ನು ದೇವಸ್ಥಾನಗಳಲ್ಲಿ ಸಾಕಲು ಅವಕಾಶ ಇದ್ದರೂ, ಈ ಕೆಲಸವನ್ನು ಸಂಘಟನೆಗಳು ಮಾಡಲು ತಯಾರಿಲ್ಲ. ಮಂಗಳೂರಿನ ಗೋರಕ್ಷಕರು ಈಗೆಲ್ಲಿದ್ದಾರೆ ಅನ್ನೋ ಪ್ರಶ್ನೆಯನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

TAGGED:BhajarangadalaGoshaleGovuMangalurupolicePublic TVRescueVishwa Hindu Parishadಗೋವುಗೋಶಾಲೆಪಬ್ಲಿಕ್ ಟಿವಿಪೊಲೀಸರುಭಜರಂಗಳದಳಮಂಗಳೂರುರಕ್ಷಣೆವಿಶ್ವ ಹಿಂದೂ ಪರಿಷತ್
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda 1
ರಶ್ಮಿಕಾ, ವಿಜಯ್ ಮದುವೆಗೆ ಫೋನ್ ಬ್ಯಾನ್ – ವಿಡಿಯೋ ಚಿತ್ರೀಕರಣ ತಂಡದಿಂದಲೂ NDAಗೆ ಸಹಿ
Bollywood Cinema Latest Main Post
Rajanivasa
ʻರಾಜನಿವಾಸʼದಲ್ಲಿ ʻಕಾಂತಾರʼದ ಝಲಕ್‌ – ಕುತೂಹಲ ಹೆಚ್ಚಿಸಿದ ಟ್ರೇಲರ್‌!
Cinema Latest Sandalwood
salman khan salim khan
ಸಲ್ಮಾನ್‌ ಖಾನ್‌ ತಂದೆ ಸಲೀಂ ಖಾನ್‌ ಆಸ್ಪತ್ರೆಗೆ ದಾಖಲು
Bollywood Cinema Latest Main Post
Mobile video recording
ಬೆಂಗಳೂರು | ನಟಿಯ ಖಾಸಗಿ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್‌ – ಸ್ನೇಹಿತೆಗೆ ಕಳಿಸಿ ಹಣಕ್ಕೆ ಡಿಮ್ಯಾಂಡ್‌
Cinema Crime Karnataka Latest Sandalwood Top Stories

You Might Also Like

accident death
Bengaluru City

ಬೆಂಗಳೂರು| ಹುಟ್ಟುಹಬ್ಬದ ದಿನವೇ ಯುವಕ ಅಪಘಾತದಲ್ಲಿ ಸಾವು

Public TV
By Public TV
1 hour ago
hassan murder
Crime

ಸಾರಿಗೆ ಇಲಾಖೆ ನೌಕರನ ಬರ್ಬರ ಹತ್ಯೆ ಕೇಸ್ – 10 ಮಂದಿ ವಿರುದ್ಧ ಎಫ್‌ಐಆರ್

Public TV
By Public TV
2 hours ago
Kalaburagi Woman In Coma
Crime

ಹಲ್ಲಿನ ಸಮಸ್ಯೆಗೆ ಹೋದ ಮಹಿಳೆ ಕೋಮಾಗೆ; ಸಾವು-ಬದುಕಿನ ಮಧ್ಯೆ ಹೋರಾಟ

Public TV
By Public TV
2 hours ago
Ravi waters
Latest

ಪಾಕಿಸ್ತಾನಕ್ಕೆ ರಾವಿ ನದಿ ನೀರು ಹರಿವು ತಡೆಯಲು ಮುಂದಾದ ಭಾರತ – ನದಿಗೆ ಅಡ್ಡಲಾಗಿ ಡ್ಯಾಂ ಸಿದ್ಧ

Public TV
By Public TV
2 hours ago
BMW buried
Latest

ಮಗನ ಸಾವಿನ ನೋವಿನಲ್ಲಿ 6 ಕೋಟಿ ಮೌಲ್ಯದ BMW ಕಾರನ್ನ ಸಮಾಧಿ ಮಾಡಿದ ತಂದೆ

Public TV
By Public TV
3 hours ago
GBA Election
Bengaluru City

ಜಿಬಿಎ ಚುನಾವಣೆಗೆ ಭರ್ಜರಿ ಸಿದ್ಧತೆ – 369 ಕ್ಷೇತಕ್ಕೆ 900 ಆಕಾಂಕ್ಷಿಗಳಿಂದ ಅರ್ಜಿ ಸಲ್ಲಿಕೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?