ವೈಯಕ್ತಿಕ ಟೀಕೆಯಿಂದ ನನ್ನ ಇಲ್ಲಿಂದ ಓಡಿಸಲು ಸಾಧ್ಯವಿಲ್ಲ: ಸುಮಲತಾ

Public TV
1 Min Read
mys sumalatha 3

ಮೈಸೂರು: ಮಂಡ್ಯ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಸುಮಲತಾ ಅಂಬರೀಶ್ ಚುನಾವಣಾ ಸ್ಪರ್ಧೆಗಾಗಿ ಚಾಮುಂಡಿ ಮೊರೆ ಹೋಗಿದ್ದಾರೆ.

ಸುಮಲತಾ ಅಂಬರೀಶ್ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, “ವೈಯಕ್ತಿಕ ಟೀಕೆಯಿಂದ ನನ್ನ ಇಲ್ಲಿಂದ ಓಡಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

MYS SUMALATHA 1

ಅಂಬರೀಶ್ ಅವರು ತನ್ನ ಕುಟುಂಬದವರನ್ನು ರಾಜಕಾರಣಕ್ಕೆ ತರಬೇಕೆಂದು ಬಯಸಿರಲಿಲ್ಲ. ಅವರು ಇದ್ದಿದ್ದರೆ ನಾನು ರಾಜಕಾರಣಕ್ಕೆ ಬರುವ ಪ್ರಶ್ನೆಯೇ ಇರುತ್ತಿರಲಿಲ್ಲ. ವೈಯಕ್ತಿಕ ಟೀಕೆಯಿಂದ ನನ್ನ ಇಲ್ಲಿಂದ ಓಡಿಸಲು ಸಾಧ್ಯವಿಲ್ಲ. ಕೆಲವರ ವೈಯಕ್ತಿಕ ಟೀಕೆಯಿಂದ ನಾನು ಗಟ್ಟಿಯಾಗುತ್ತಿದ್ದೇನೆ. ಅಲ್ಲದೇ ವೈಯಕ್ತಿಕ ಟೀಕೆಗಳು ನೋವು ತಂದಿವೆ ಎಂದು ಹೇಳಿದ್ದಾರೆ.

mys sumalatha 2

ಟೀಕೆ ಮಾಡುವುದನ್ನು ನಾನು ನಿರೀಕ್ಷಿಸಿದ್ದೆ. ಆದರೆ ತೀರಾ ಹತ್ತಿರದವರು ವೈಯಕ್ತಿಯವಾಗಿ ಟೀಕಿಸಿದ್ದಾಗ ಸಹಜವಾಗಿ ನೋವಾಗುತ್ತದೆ. ಕಾಂಗ್ರೆಸ್ ಟಿಕೆಟ್ ಕೊಡುವ ಲಕ್ಷಣಗಳು ಕ್ಷೀಣಿಸಿರುವುದು ಸತ್ಯ. ಆದರೆ ಜನ ಟಿಕೆಟ್ ಕೊಟ್ಟಾಗಿದೆ. ಸ್ಪರ್ಧೆ ಮಾಡುವುದು ಖಚಿತವಾಗಿದೆ ಎಂದು ಸುಮಲತಾ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *