ಸಾರಿಗೆ ಸಚಿವರ ಸ್ವಕ್ಷೇತ್ರದಲ್ಲೇ ಬಸ್‍ಗಾಗಿ ವಿದ್ಯಾರ್ಥಿಗಳ ಪರದಾಟ- ಡಿಸಿ ವಾಸ್ತವ್ಯ ಹೂಡಿದ್ರೂ ಬಗೆಹರಿಯದ ಸಮಸ್ಯೆ

Public TV
1 Min Read
chitradurga no bus

ಚಿತ್ರದುರ್ಗ: ವಿದ್ಯಾರ್ಥಿಗಳು ಬಸ್ ಗಾಗಿ ಪರದಾಡುವ ಪರಿಸ್ಥಿತಿ ಸಾರಿಗೆ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಮೊಳಕಾಲ್ಮೂರು ಕ್ಷೇತ್ರದ ಕಣಕುಪ್ಪೆ ಗ್ರಾಮದಲ್ಲಿ ನಿರ್ಮಾಣವಾಗಿದೆ.

chitradurga no bus 2 1

ಕಳೆದ ಹಲವು ವರ್ಷಗಳಿಂದಲೂ ಬಸ್ ಗಳಿಲ್ಲದೆ ಜನರು ನಾಲ್ಕಾರು ಕಿ.ಮೀ. ನಡೆಯುವ ದುಸ್ಥಿತಿ ಇದೆ. ಆದರೆ ಈವರೆಗೆ ಸಾರಿಗೆ ಬಸ್ ಈ ಗ್ರಾಮದತ್ತ ಧಾವಿಸಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳು ನಿತ್ಯ ವಿದ್ಯಾಭ್ಯಾಸಕ್ಕೆ ತೆರಳಲು ಬಸ್ ಗಾಗಿ ಪರದಾಡುತ್ತ, ಸಿಕ್ಕ ಸಿಕ್ಕ ವಾಹನ ಏರಿ ಸಾಗಲು ಹರಸಾಹಸಪಡುವಂತಾಗಿದೆ. ವಿದ್ಯಾರ್ಥಿಗಳು ಆಟೋಗಳ ಟಾಪ್ ಮೇಲೆ ಕುಳಿತು ಪ್ರಯಾಣ ಮಾಡುತ್ತಿದ್ದಾರೆ. ಇದನ್ನೂ ಓದಿ: ಜ್ವರದಿಂದ ಬಳಲುತ್ತಿದ್ದ 14ರ ಬಾಲಕಿ ಸಾವು- ದಾವಣಗೆರೆಯಲ್ಲಿ ಹೆಚ್ಚಾಗುತ್ತಿದೆ ಡೆಂಘೀ

chitradurga no bus 2 2

ಕಳೆದ ವರ್ಷ ಫೆಬ್ರವರಿ 20ರಂದು ಚಿತ್ರದುರ್ಗ ಡಿಸಿ ಕವಿತಾ ಮನ್ನಿಕೇರಿ ಗ್ರಾಮ ವಾಸ್ತವ್ಯ ಹೂಡಿದ್ದರು. ಆಗ ಡಿಸಿ ಸೂಚನೆ ಮೇರೆಗೆ ಕೆಲ ದಿನ ಮಾತ್ರ ಬಸ್ ಸಂಚಾರ ನಡೆಸಿದ್ದು, ಇದೀಗ ಶಾಲಾ, ಕಾಲೇಜು ಆರಂಭವಾದರೂ ಗ್ರಾಮಕ್ಕೆ ಬಸ್ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ನಗರಪ್ರದೇಶಗಳಿಗೆ ಬರಲು ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ, ಸಾರಿಗೆ ಸಚಿವರು ಹಾಗೂ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *