ಹೊಸ ತೆರಿಗೆ ಪದ್ಧತಿ ಕಡ್ಡಾಯವೂ ಅಲ್ಲ – ತೆರಿಗೆ ಪಾವತಿದಾರರಿಗೆ ಎರಡು ಆಯ್ಕೆ ಕೊಟ್ಟ ನಮೋ ಸರ್ಕಾರ

Public TV
4 Min Read
Nirmala Sitharaman

ನವದೆಹಲಿ: ಇದು ಜನಸಾಮಾನ್ಯರ ಬಜೆಟ್ ಎನ್ನುತ್ತಾ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಯವ್ಯಯ ಮಂಡಿಸಿದ್ದಾರೆ. 2 ಗಂಟೆ 40 ನಿಮಿಷಗಳ ಸುದೀರ್ಘ ಬಜೆಟ್ ಭಾಷಣದಲ್ಲಿ ಮೇಲ್ನೋಟಕ್ಕೆ ಹಲವು ವರಗಳನ್ನು ಘೋಷಣೆ ಮಾಡಿದರು. ಆದರೆ ಎಲ್ಲಾ ಮುಗಿದ ಮೇಲೆ ಬಜೆಟ್ ಆಳಕ್ಕೆ ಇಳಿದಾಗ ಅಸಲಿಯತ್ತು ಬಯಲಾಯ್ತು. ಮಧ್ಯಮವರ್ಗಕ್ಕೆ ಸೀತಮ್ಮ ವರಗಳನ್ನು ಕೊಟ್ಟಂತೆ ಕೊಟ್ಟು ಹಾಗೆಯೇ ಕಸಿದುಕೊಂಡಿದ್ದಾರೆ. ಇದ್ದುದರಲ್ಲಿ ಕೃಷಿ ಮತ್ತು ಗ್ರಾಮೀಣಾ ಭಾಗಕ್ಕೆ ಹೆಚ್ಚು ಒತ್ತು ನೀಡಿದ್ದಾರೆ.

Nirmala Sitharaman 1

ವಿತ್ತಿಯ ಕೊರತೆ ನೀಗಿಸಲು ಸರ್ಕಾರಿ ಸ್ವಾಮ್ಯದ ಎಲ್‍ಐಸಿಯಂತಹ ಕಂಪನಿಗಳಲ್ಲಿ ಹೂಡಿಕೆ ಹಿಂತೆಗೆತಕ್ಕೆ ಅವಕಾಶ ನೀಡಿದೆ. ಏರಿಕೆ ಕಾಣುತ್ತಿರುವ ಬಂಗಾರ, ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ ಮಾಡುವ ಯಾವುದೇ ಮುನ್ಸೂಚನೆ ನೀಡಿಲ್ಲ. ರಿಯಲ್ ಎಸ್ಟೇಟ್, ಆಟೋ ಮೊಬೈಲ್ ರಂಗಕ್ಕೆ ಹೆಚ್ಚು ಒತ್ತು ನೀಡಿಲ್ಲ. ಭಾಷಣದ ಮಧ್ಯೆ ಹಲವು ಬಾರಿ ತಮಿಳುಕವಿ ತಿರುವಳ್ಳುವರ್, ಅವ್ವಯ್ಯಾರ್, ಕವಿರತ್ನ ಕಾಳಿದಾಸನ ಶ್ಲೋಕ, ಕವಿತೆ, ಶಾಯಿರಿಗಳನ್ನು ಉಲ್ಲೇಖಿಸಿದ ನಿರ್ಮಲಾ ಕವಿ ಹೃದಯಿಯೂ ಆದರು. ಮೋದಿಯ ಆಡಳಿತವನ್ನು ಹೊಗಳಿ ಅಟ್ಟಕ್ಕೆ ಏರಿಸಿದರು.

Nirmala Sitharaman Budget

ಆದಾಯ ತೆರಿಗೆಯಲ್ಲಿ ಹಳೆ ಪದ್ಧತಿಯನ್ನು ಮುಂದುವರೆಸುತ್ತಲೇ, ಹೊಸ ವಿಧಾನವನ್ನು ಪರಿಚಯ ಮಾಡಿರೋ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಿರೋ ನಿಮಗೆ ಬಿಟ್ಟಿದ್ದು ಎಂದಿದ್ದಾರೆ. ಹೊಸ ತೆರಿಗೆ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವುದು ಐಚ್ಛಿಕ ಎಂದಿದ್ದಾರೆ. ತೆರಿಗೆ ವಿನಾಯಿತಿಗಳನ್ನು ಹೊಂದಬೇಕೋ ಅಥವಾ ಬೇಡವೋ? ಎನ್ನುವುದು ವೇತನದಾರನ ನಿರ್ಣಯದ ಮೇಲೆ ಅವಲಂಬಿತವಾಗಿರುತ್ತದೆ. ಹೊಸ ಆದಾಯ ತೆರಿಗೆ ವಿಧಾನವನ್ನು ನೀವು ಬಯಸಿದಲ್ಲಿ 80 ಸಿ ಅಡಿ ಬರುವ ವಿನಾಯಿತಿಗಳು ನಿಮಗೆ ಸಿಗಲ್ಲ.

Nirmala Sitharaman 2

ಆದಾಯ ತೆರಿಗೆ ಲೆಕ್ಕಾಚಾರ ಹೇಗೆ?
* 2.5 ಲಕ್ಷದಿಂದ 5 ಲಕ್ಷದವರೆಗೆ ಶೇ.5 ತೆರಿಗೆ
* 5 ಲಕ್ಷ ರೂ.ಯಿಂದ 7.5 ಲಕ್ಷ ರೂ.ವರೆಗೆ ತೆರಿಗೆ ಶೇ.20ರ ಬದಲಾಗಿ ಶೇ.10 ಅನ್ವಯವಾಗುವುದು
* 7.5 ಲಕ್ಷ ನಿಂದ 10 ಲಕ್ಷವರೆಗೆ ಶೇ.20ರ ಬದಲಾಗಿ ಶೇ.15 ಅನ್ವಯ
* 10 ಲಕ್ಷದಿಂದ 12.5 ಲಕ್ಷಕ್ಕೆ ತೆರಿಗೆ ಶೇ.30ರ ಬದಲಾಗಿ ಶೇ.20 ಅನ್ವಯ
* 12.5 ಲಕ್ಷದಿಂದ 15 ಲಕ್ಷದವರೆಗೆ ಶೇ.30ರ ಬದಲಾಗಿ ಶೇ. 25 ಅನ್ವಯ
* 15 ಲಕ್ಷಕ್ಕಿಂತ ಅಧಿಕ ಆದಾಯಕ್ಕೆ ಶೇ.30 ಅನ್ವಯ
* ಹೊಸ ತೆರಿಗೆಯಿಂದಾಗಿ 15 ಲಕ್ಷ ಅಧಿಕ ಆದಾಯ ಹೊಂದಿದ ತೆರಿಗೆದಾರನಿಗೆ 78 ಸಾವಿರ ರೂ. ಲಾಭವಾಗಲಿದೆ
* ಹೊಸ ವ್ಯವಸ್ಥೆಯಲ್ಲಿ ವಿವಿಧ 70 ಕಡಿತಗಳನ್ನು ತೆಗೆದು ಹಾಕಲಾಗಿದೆ. ಒಂದು ವೇಳೆ ತೆರಿಗೆದಾರ ಬಯಸಿದ್ರೆ ಹಳೆಯ ವ್ಯವಸ್ಥೆಯ ಲಾಭ ಪಡೆಯಬಹುದು.
* ಡೈರೆಕ್ಟ್ ಟ್ಯಾಕ್ಸ್ (ನೇರ ತೆರಿಗೆ) ಹೊಂದಿರುವ ವಿವಾದಗಳನ್ನು ಶಮನಗೊಳಿಸುವದಕ್ಕಾಗಿ `ವಿವಾದ ಸೇ ವಿಶ್ವಾಸ್ ಯೋಜನೆ’ಯಲ್ಲಿ ಬಡ್ಡಿ ಮತ್ತು ದಂಡದಿಂದ ವಿನಾಯ್ತಿ

* ಕಂಪನಿಯ ಡಿವಿಡೆಂಟ್ ಮೇಲಿನ ಲಾಭಾಂಶ ತೆರಿಗೆ ಕಂಪನಿಗಳ ಬದಲಾಗಿ ಶೇರುದಾರನಿಗೆ ಅನ್ವಯವಾಗಲಿದೆ. ಲಾಭಾಂಶ ತೆರಿಗೆಯನ್ನು ಶೇರುದಾರ ಪಾವತಿಸೋದು.
* ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸುವ ಅರ್ಜಿದಾರನಿಗೆ ಕಡಿಮೆ ಸಮಯದಲ್ಲಿ ಪ್ಯಾನ್ ಕಾರ್ಡ್ ನೀಡಲಾಗುವುದು.

80 ಸಿ ಶಾಕ್: ಹೊಸ ತೆರಿಗೆ ಪದ್ಧತಿಯನ್ನು ನೀವು ಆಯ್ಕೆ ಮಾಡಿಕೊಂಡ್ರೆ ನಿಮಗೆ 80 ಸಿ ಅನ್ವಯ ಸಿಗಬೇಕಾದ ಯಾವುದೇ ವಿನಾಯಿತಿಗಳು ಸಿಗಲ್ಲ. ಯಾವುದಕ್ಕೆ ತೆರಿಗೆ ವಿನಾಯಿತಿ ಸಿಗಲ್ಲ ಎಂಬುವುದು ಈ ಕೆಳಗಿನಂತಿದೆ.

* ಮನೆ ಬಾಡಿಗೆ ಭತ್ಯೆಗೆ ತೆರಿಗೆ ವಿನಾಯಿತಿ ಇರಲ್ಲ.
* ಟಿಎ, ಡಿಎಗಳಿಗೆ ತೆರಿಗೆ ವಿನಾಯಿತಿ ಇರಲ್ಲ.
* ವಿಕಲಚೇತನರಿಗೆ ಸಿಗುತ್ತಿದ್ದ ತೆರಿಗೆ ವಿನಾಯಿತಿ ಇರಲ್ಲ.
* 50 ಸಾವಿರ ರೂ. ಸ್ಟಾಂಡರ್ಡ್ ಡಿಡಕ್ಷನ್‍ಗೆ ತೆರಿಗೆ ವಿನಾಯಿತಿ ಇರಲ್ಲ.
* ಕುಟುಂಬ ಪಿಂಚಣಿ ಅಡಿ 15 ಸಾವಿರ ಡಿಡಕ್ಷನ್‍ಗೆ ಅವಕಾಶ ಇರಲ್ಲ.
* ಜೀವವಿಮೆಗೆ ತೆರಿಗೆ ವಿನಾಯಿತಿ ಇರಲ್ಲ.
* ಸುಕನ್ಯ ಸಮೃದ್ಧಿ ಯೋಜನೆ ತೆರಿಗೆ ವಿನಾಯಿತಿ ಇರಲ್ಲ.
* ಪಿಪಿಎಫ್‍ಗೆ ತೆರಿಗೆ ವಿನಾಯಿತಿ ಇರಲ್ಲ.
* ಈಕ್ವಿಟಿ ಲಿಂಕ್ಡ್ ಉಳಿತಾಯ ಯೋಜನೆಗೆ ತೆರಿಗೆ ವಿನಾಯಿತಿ ಇರಲ್ಲ.
* ನಿಶ್ಚಿತ ಠೇವಣಿಗೆ ತೆರಿಗೆ ವಿನಾಯಿತಿ ಇರಲ್ಲ.
* ಹಿರಿಯ ನಾಗರಿಕರ ಉಳಿತಾಯಕ್ಕೆ ತೆರಿಗೆ ವಿನಾಯಿತಿ ಇರಲ್ಲ.
* ಮನೆ ಸಾಲಗಳಿಗೆ ತೆರಿಗೆ ವಿನಾಯಿತಿ ಇರಲ್ಲ.
* ಸಂಸ್ಥೆಗಳಿಗೆ ನೀಡುವ ಡೊನೇಷನ್‍ಗೆ ತೆರಿಗೆ ವಿನಾಯಿತಿ ಇರಲ್ಲ.

ಯಾವುದೆಲ್ಲ ಏರಿಕೆ?
* ಪೆಟ್ರೋಲ್, ಡೀಸೆಲ್, ಚಿನ್ನ ದರ ಏರಿಕೆಯಾಗಲಿದೆ
* ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ದುಪ್ಪಟ್ಟಾಗಿದೆ.
* ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳ ಮೇಲೆನ ತೆರಿಗೆ ಏರಿಕೆ ಮಾಡಲಾಗಿದೆ.
* ಚೀನಾ ಸೆರಾಮಿಕ್, ಜೇಡಿ ಮಣ್ಣಿನಿಂದ ತಯಾರಿಸಿದ ಗೃಹ ಉಪಯೋಗಿ ವಸ್ತುಗಳ ಮೇಲಿನ ತೆರಿಗೆ ಏರಿಕೆಯಾಗಿದೆ.
* ಗೃಹ ಉಪಯೋಗಿ ವಸ್ತುಗಳ ಮೇಲಿನ ಜಿಎಸ್‍ಟಿ ಶೇ.10ರಿಂದ ಶೆ. 20ರಷ್ಟು ಏರಿಕೆಯಾಗಿದೆ.
* ಪಿಂಗಾಣಿ ಕಪ್, ಮಗ್, ತಾಮ್ರ, ಸ್ಟೀಲ್ ಪಾತ್ರೆಗಳ ಮೇಲಿನ ತೆರಿಗೆ ಏರಿಕೆಯಾಗಿದೆ.
* ವಾಣಿಜ್ಯ ವಾಹನಗಳ ಬಿಡಿ ಭಾಗಗಳ ಮೇಲಿನ ತೆರಿಗೆ ಹಾಗೂ ವಾಣಿಜ್ಯ ವಾಹನಗಳ ಮೇಲಿನ ತೆರಿಗೆಯಲ್ಲಿ ಏರಿಕೆ.
* ಆಟೋ, ಬೈಕ್, ಕಾರು ದುಬಾರಿ
* ಚಪ್ಪಲಿ, ಫರ್ನಿಚರ್ ದುಬಾರಿ
* ಪೀಠೋಪಕರಣಗಳು ಹಾಗೂ ಗೃಹೋಪಯೋಗಿ ವಸ್ತುಗಳ ದರ ಏರಿಕೆಯಾಗಿದೆ
* ಕೆನೆ ತೆಗೆದ ಹಾಲಿನ ಉತ್ಪನ್ನಗಳು ಇನ್ಮುಂದೆ ಮತ್ತಷ್ಟು ತುಟ್ಟಿಯಾಗಲಿವೆ
* ಸಕ್ಕರೆ ಬೆಲೆ ಏರಿಕೆಯಾಗಿದೆ
* ಸೋಯಾ ಫೈಬರ್ ಉತ್ಪನ್ನಗಳ ದರ ಏರಿಕೆಯಾಗಿದೆ
* ವೈದ್ಯಕೀಯ ಸಲಕರಣೆಗಳ ಮೇಲಿನ ತೆರಿಗೆ ಏರಿಕೆ ಆಗಿರೋದ್ರಿಂದ ಆಸ್ಪತ್ರೆ ಖರ್ಚು ಹೆಚ್ಚಲಿದೆ.

ಇಳಿಕೆ ಕಂಡಿದ್ದು ಯಾವುದು?:
* ನ್ಯೂಸ್ ಪ್ರಿಂಟ್‍ಗಳ ದರ ಇಳಿಕೆ
* ಹಗುರ ಕೋಟೆಡ್ ಕಾಗಗದ ದರ ಇಳಿಕೆ

Share This Article
Leave a Comment

Leave a Reply

Your email address will not be published. Required fields are marked *