Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ

Latest

ನಿರ್ಭಯಾ ಪ್ರಕರಣದ ಬಾಲಾಪರಾಧಿ ಈಗ ಎಲ್ಲಿದ್ದಾನೆ, ಏನು ಮಾಡ್ತಿದ್ದಾನೆ? ಈ ಸುದ್ದಿ ಓದಿ

Public TV
Last updated: May 7, 2017 4:16 pm
Public TV
Share
3 Min Read
nirbhaya
SHARE

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ 2012ರ ನಿರ್ಭಯಾ ಗ್ಯಾಂಗ್ ರೇಪ್ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ವಿಧಿಸಿ ಸುಪ್ರೀಂ ಕೋರ್ಟ್ ಶುಕ್ರವಾರದಂದು ತೀರ್ಪು ಪ್ರಕಟಿಸಿದೆ. ಆದ್ರೆ ದೇಶದಾದ್ಯಂತ ಆಕ್ರೋಶ ಭುಗಿಲೇಳಲು ಕಾರಣವಾಗಿದ್ದ ಈ ಪ್ರಕರಣದಲ್ಲಿ ಮತ್ತೊಬ್ಬ ಬಾಲಾಪರಾಧಿ ಭಾಗಿಯಾಗಿದ್ದ. ಯುವತಿಯ ಕರುಳನ್ನೇ ಕಿತ್ತುಹಾಕಿದ್ದ ಎಂದು ಈತನ ಮೇಲೆ ಆರೋಪವಿತ್ತು. ಮೂರು ವರ್ಷಗಳ ಕಾಲ ಬಾಲಮಂದಿರದಲ್ಲಿ ಕಳೆದ ಈಗ ನಂತರ ಡಿಸೆಂಬರ್ 2015ರಲ್ಲಿ ಬಿಡುಗಡೆಯಾಗಿದ್ದು ಈಗ ಈತನನ್ನು ಸರ್ಕಾರೇತರ ಸಂಸ್ಥೆಯೊಂದು ನೋಡಿಕೊಳ್ಳುತ್ತಿದೆ.

convicts nirbhaya case

ಆಗ ಬಾಲಾಪರಾಧಿಯಾಗಿದ್ದವನಿಗೆ ಈಗ 23 ವರ್ಷ ವಯಸ್ಸು. ಸಣ್ಣ ಹೋಟೆಲ್‍ವೊಂದರಲ್ಲಿ ಆತ ಈಗ ಅಡುಗೆ ಮಾಡುವ ಕೆಲಸಕ್ಕೆ ಸೇರಿದ್ದಾನೆಂದು ಎನ್‍ಜಿಓದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯಲ್ಲಿ ಬಾಲಾಪರಾಧಿಗಳ ವೀಕ್ಷಣಾಲಯದಲ್ಲಿದ್ದಾಗ ಈತ ಅಡುಗೆ ಮಾಡುವುದನ್ನು ಕಲಿತಿದ್ದ ಎನ್ನಲಾಗಿದೆ.

ಇದನ್ನೂ ಓದಿ: ನಿರ್ಭಯಾ ಗ್ಯಾಂಗ್‍ರೇಪ್: ಅಪರಾಧಿಗಳಿಗೆ ಗಲ್ಲು ಕಾಯಂ

ಆತ ಈಗ ಹೊಸ ಜೀವನ ನಡೆಸುತ್ತಿದ್ದಾನೆ. ಆತನ ಹೆಸರೂ ಕೂಡ ಈಗ ಬದಲಾಗಿದೆ ಎಂದು ಎನ್‍ಜಿಓ ಅಧಿಕಾರಿ ಹೇಳಿದ್ದಾರೆ.

ಇಡೀ ದೇಶವನ್ನೇ ಸ್ತಬ್ಧವಾಗಿಸಿ, ಯುವಕ ಯುವತಿಯರು ರಸ್ತೆಗಿಳಿದು ಪ್ರತಿಭಟನೆ ಮಾಡುವಂತೆ ಮಾಡಿದ್ದ ಈ ಪ್ರಕರಣದಲ್ಲಿ ಅತ್ಯಂತ ಕ್ರೂರವಾಗಿ ವರ್ತಸಿದವನು ಎಂದೇ ಆರೋಪಿಸಲಾಗಿದ್ದ ಬಾಲಾಪರಾಧಿಗೆ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಅಂದ್ರೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಯಾವುದೇ ಮಾಹಿತಿ ಇಲ್ಲವಂತೆ.

nirbhaya case 2

ಆತ ಹೊಸ ಜೀವನ ಪ್ರಾರಂಭಿಸಬೇಕು ಎನ್ನುವ ಸಲುವಾಗಿ, ಜನರು ಆತನನ್ನು ಪತ್ತೆ ಹಚ್ಚಬಾರದೆಂದು ನಾವು ರಾಷ್ಟ್ರರಾಜಧಾನಿಯಿಂದ ಆತನನ್ನು ದೂರ ಕಳಿಸಬೇಕಾಯ್ತು. ಆತನೀಗ ದಕ್ಷಿಣ ಕರಾವಳಿಯಲ್ಲಿ ಎಲ್ಲೋ ಅಡುಗೆ ಕೆಲಸ ಮಾಡಿಕೊಂಡಿದ್ದಾನೆ. ಆತನಿಗೆ ಕೆಲಸ ಕೊಟ್ಟಿರುವ ಮಾಲೀಕನಿಗೂ ಅವನ ನಿಜವಾದ ಹೆಸರು ಹಾಗೂ ಪೂರ್ವಾಪರಗಳ ಬಗ್ಗೆ ಗೊತ್ತಿಲ್ಲ. ಆತನನ್ನು ಯಾರೂ ಪತ್ತೆ ಹಚ್ಚಬಾರದು ಎಂಬ ಕಾರಣಕ್ಕೆ ನಾವು ಆತನನ್ನ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಬಾಲಾಪರಾಧಿಗಳ ನ್ಯಾಯ ಮಂಡಳಿಯು ಈತನ ವಿಚಾರಣೆ ನಡೆಸುವ ಸಂದರ್ಭದಲ್ಲಿ ಹಾಜರಿದ್ದ ಎನ್‍ಜಿಓದ ಅಧಿಕಾರಿ ಮಾಧ್ಯಮಗಳನ್ನ ದೂರಿದ್ದಾರೆ. ಯಾವುದೇ ಆಧಾರವಿಲ್ಲದೆ ಈ ಅಪ್ರಾಪ್ತನನ್ನು ಮೃಗದಂತೆ ಚಿತ್ರಿಸಿದ್ರು ಎಂದು ಆರೋಪ ಮಾಡಿದ್ದಾರೆ.

ಈ ಬಾಲಾಪರಾಧಿಯು ಪ್ರಕರಣದಲ್ಲಿ ಭಾಗಿಯಾಗಿದ್ದು ನಿಜ. ಆದ್ರೆ ಇಡೀ ಪ್ರಕರಣದಲ್ಲಿ ಈತನಿಂದಲೇ ಹೆಚ್ಚಿನ ಹಾನಿಯಾಗಿದ್ದು, ಈತನೇ ಕ್ರೂರವಾಗಿ ವರ್ತಿಸಿದ್ದು ಎಂಬುದಕ್ಕೆ ಯಾವುದೇ ಸಾಕ್ಷಿ ಆಧಾರಗಳಿಲ್ಲ ಎಂದು 2013ರಲ್ಲಿ ಬಾಲಾಪರಾಧಿಗಳ ನ್ಯಾಯ ಮಂಡಳಿ ಹೇಳಿತ್ತು ಎಂದು ವರದಿಯಾಗಿದೆ.

ಬಾಲಾಪರಾಧಿಗಳ ನ್ಯಾಯ ಮಂಡಳಿ ಅಥವಾ ಕೋರ್ಟ್‍ಗಳ ಆಹ್ವಾನದ ಮೇಲೆ ಬಾಲಾಪರಾಧಿಗಳ ಕೌನ್ಸೆಲಿಂಗ್ ಮಡುವ ಹೆಚ್‍ಎಕ್ಯೂ ಸೆಂಟರ್ ಆಫ್ ಚೈಲ್ಡ್ ರೈಟ್ಸ್ ನ ಇನಾಕ್ಷಿ ಗಂಗೂಲಿ ಈ ಬಗ್ಗೆ ಹೇಳಿಕೆ ನೀಡಿದ್ದು, ಈ ಪ್ರಕರಣದ ತನಿಖಾಧಿಕಾರಿಗಳೂ ಕೂಡ ಅಪರಾಧಿಯು ಅತ್ಯಂತ ಕ್ರೂರಿ ಎಂದು ತೋರಿಸಲು ಯಾವುದೇ ಸಾಕ್ಷಿಯಿಲ್ಲ ಎಂದು ದಾಖಲಿಸಿರುವುದಾಗಿ ತಿಳಿಸಿದ್ದಾರೆ.

nirbhaya case

2013ರಲ್ಲಿ ಜೈಲಿನ ಸೆಲ್‍ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ ಅಪರಾಧಿ ರಾಮ್ ಸಿಂಗ್ ಬಳಿ ಈ ಬಾಲಾಪರಾಧಿ ಸ್ವಲ್ಪ ಕಾಲ ಕೆಲಸ ಮಾಡಿದ್ದ. ರಾಮ್ ಸಿಂಗ್ ಆತನಿಗೆ 8 ಸಾವಿರ ರೂ. ಹಣ ಕೊಡಬೇಕಿತ್ತು. ಹಣ ಕೊಡುವಂತೆ ಬಾಲಾಪರಾಧಿ ಪದೇ ಪದೇ ಕೇಳುತ್ತಲೇ ಇದ್ದ. ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದ ರಾತ್ರಿ ಆತ ಹಣವನ್ನು ಪಡೆಯಲು ಹೋಗಿದ್ದರಿಂದ ಈ ಕೃತ್ಯದ ಭಾಗವಾದ ಎಂದು ಎನ್‍ಜಿಓ ಅಧಿಕಾರಿ ಹೇಳಿದ್ದಾರೆ.

ಅತ್ಯಂತ ಬಡ ಕುಟುಂಬದವನಾದ ಈತ ಸಣ್ಣವನಿರುವಾಗಲೇ ಉತ್ತರಪ್ರದೇಶದ ತನ್ನ ಗ್ರಾಮವನ್ನು ಬಿಟ್ಟು ದೆಹಲಿಗೆ ಓಡಿಬಂದಿದ್ದ ಎಂದು ವರದಿಯಾಗಿದೆ.

ಕಾಯ್ದೆಗೆ ತಿದ್ದುಪಡಿ: ಈ ಪ್ರಕರಣದ ಬಳಿಕ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆದು ಬಾಲಾಪರಾಧಿಯನ್ನು ಅಪರಾಧಿಯನ್ನಾಗಿಸಬೇಕೆಂಬ ಕೂಗು ಎದ್ದಿತ್ತು. ಇದಾದ ಬಳಿಕ ಕೇಂದ್ರ ಸರ್ಕಾರ ಬಾಲಾಪರಾಧ ಕಾಯ್ದೆಗೆ ತಿದ್ದುಪಡಿ ತಂದಿದ್ದು ಹದಿನಾರರಿಂದ ಹದಿನೆಂಟು ವರ್ಷದ ಮಧ್ಯೆ ಇರುವವರು ಕ್ರೂರ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಂಡರೆ ಅವರನ್ನು ವಯಸ್ಕರು ಎಂದೇ ಈಗ ಪರಿಗಣಿಸಲಾಗುತ್ತದೆ.

nirbhaya protest

TAGGED:delhigang rapeJuvenilenirbhayaPublic TVSupreme Courtಗ್ಯಾಂಗ್ ರೇಪ್ದೆಹಲಿನಿರ್ಭಯಾಪಬ್ಲಿಕ್ ಟಿವಿಬಾಲಾಪರಾಧಿಸುಪ್ರೀಂ ಕೋರ್ಟ್
Share This Article
Facebook Whatsapp Whatsapp Telegram

Cinema news

Rashmika Mandanna Vijay Devarakonda
ಫೆ.2 ಕ್ಕೆ ರಶ್ಮಿಕಾ-ವಿಜಯ್ ಮದುವೆ? ಫೇಕ್ ನ್ಯೂಸ್ ಶುರುವಾಗಿದ್ದು ಎಲ್ಲಿಂದ?
Cinema Latest Top Stories
Actress Jayamala
ಫಿಲ್ಮ್ ಚೇಂಬರ್ ನೂತನ ಅಧ್ಯಕ್ಷೆಯಾಗಿ ಹಿರಿಯ ನಟಿ ಜಯಮಾಲಾ ಪದಗ್ರಹಣ
Cinema Latest Sandalwood Top Stories
Pushpa Arunkumar
ಸೈಟ್‌ ವಿಚಾರಕ್ಕೆ ಜಟಾಪಟಿ – ಕೆಡವಿದ್ದ ಕಾಂಪೌಂಡ್‌ ಕಟ್ಟಿಸಲು ಮುಂದಾದ ಯಶ್‌ ತಾಯಿ
Cinema Districts Hassan Karnataka Latest Sandalwood States Top Stories
Ram Charan
ಅವಳಿ ಮಕ್ಕಳಿಗೆ ಜನ್ಮ ನೀಡಿದ ರಾಮ್‌ಚರಣ್ ಪತ್ನಿ ಉಪಾಸನಾ
Bollywood Cinema Latest Top Stories

You Might Also Like

gas leak fire accident in kanakapura three dies
Crime

ಗ್ಯಾಸ್ ಸೋರಿಕೆಯಾಗಿ ಅಗ್ನಿ ಅವಘಡ – ಒಂದೇ ಕುಟುಂಬದ ಮೂವರು ದುರ್ಮರಣ

Public TV
By Public TV
16 minutes ago
Nepali
Bengaluru City

18 ಕೋಟಿ ದರೋಡೆ ಕೇಸ್‌ | ಮನೆ ಕೆಲಸಕ್ಕೆ ಸೇರಿ ಸಂಚು – ಕೆಲಸ ಬಿಟ್ಟು ದರೋಡೆ ಮಾಡಿದ್ದ ನೇಪಾಳಿ ಗ್ಯಾಂಗ್‌!

Public TV
By Public TV
19 minutes ago
CJ Roy
Bengaluru City

ಪಿಸ್ತೂಲ್‌ನಿಂದ ಶೂಟ್ ಮಾಡಿದ್ರೂ ಯಾರಿಗೂ ಗೊತ್ತಾಗಿಲ್ಲ ಯಾಕೆ? – ಚರ್ಚೆಗೆ ಗ್ರಾಸವಾಗಿದ್ದ ಪ್ರಶ್ನೆಗೆ ಸಿಕ್ತು ಉತ್ತರ

Public TV
By Public TV
20 minutes ago
Pakistan Cricket Team
Cricket

ಭಾರತದ ವಿರುದ್ಧ ಪಂದ್ಯವಾಡದೇ ಇದ್ದರೆ ಪಾಕಿಗೆ 200 ಕೋಟಿ ನಷ್ಟ

Public TV
By Public TV
2 hours ago
CPI video of fighting for arrest of Davangere riot accused goes viral
Crime

ʻಕೈʼ ಮುಖಂಡನ ಮಕ್ಕಳಿಂದ ಪೊಲೀಸರ ಮೇಲೆ ಹಲ್ಲೆ ಕೇಸ್ -‌ ಬಂಧನಕ್ಕೆ ಹೋರಾಡಿದ್ದ ಲೇಡಿ ಸಿಪಿಐ ವಿಡಿಯೋ ವೈರಲ್‌

Public TV
By Public TV
3 hours ago
Groom stabbed in Kollegal Bride lover arrested murder plot
Chamarajanagar

ಕೊಳ್ಳೇಗಾಲದಲ್ಲಿ ವರನಿಗೆ ಚಾಕು ಇರಿತ – ಹತ್ಯೆಗೆ ಸುಪಾರಿ ಕೊಟ್ಟಿದ್ದೇ ವಧು!

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?