– 23 ಬಾರಿ ಜೈಲಿನ ನಿಯಮ ಉಲ್ಲಂಘನೆ
ನವದೆಹಲಿ: 2012ರ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ದೋಷಿಗಳು ಕಳೆದ 7 ವರ್ಷದಿಂದ ಜೈಲಿನಲ್ಲಿದ್ದು, ಅಲ್ಲಿ ಬರೋಬ್ಬರಿ 1,37,000 ರೂ. ಹಣವನ್ನು ಸಂಪಾದಿಸಿದ್ದಾರೆ.
ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಅಪರಾಧಿಗಳಾದ ಅಕ್ಷಯ್ ಠಾಕುರ್ ಸಿಂಗ್, ಪವನ್ ಗುಪ್ತಾ, ವಿನಯ್ ಶರ್ಮಾ ಕಳೆದ 7 ವರ್ಷದ ಜೈಲು ವಾಸದಲ್ಲಿ 1,37,000 ರೂ. ಹಣವನ್ನು ಸಂಪಾದಿಸಿದ್ದಾರೆ. ಈ 7 ವರ್ಷದಲ್ಲಿ ಮುಕೇಶ್ ಜೈಲಿನಲ್ಲಿ ಯಾವುದೇ ಕೆಲಸ ಮಾಡಲು ನಿರಾಕರಿಸಿದ ಕಾರಣಕ್ಕೆ ಅತ ಯಾವುದೇ ಹಣವನ್ನು ಸಂಪಾದಿಸಿಲ್ಲ. ಆದರೆ ಅಕ್ಷಯ್ 69 ಸಾವಿರ ರೂ., ವಿನಯ್ 39 ಸಾವಿರ ರೂ. ಹಾಗೂ ಪವನ್ 29 ಸಾವಿರ ರೂ. ಹಣವನ್ನು ಜೈಲಿನಲ್ಲಿ ಕೆಲಸ ಮಾಡಿ ಸಂಪಾದಿಸಿದ್ದಾರೆ. ಇದನ್ನೂ ಓದಿ: ನಿರ್ಭಯಾ ಕೇಸ್ – ಕಾಮುಕರ ಗಲ್ಲು ಶಿಕ್ಷೆ ಮುಂದೂಡಿಕೆ?
ಅಷ್ಟೇ ಅಲ್ಲದೆ ಈ ನಾಲ್ವರು ದೋಷಿಗಳು ಸುಮಾರು 23 ಬಾರಿ ಜೈಲಿನ ನಿಯಮವನ್ನು ಉಲ್ಲಂಘಿಸಿದ್ದಾರೆ. ನಿಯಮ ಉಲ್ಲಂಘನೆ ಮಾಡಿದಕ್ಕೆ ವಿನಯ್ 11 ಬಾರಿ, ಅಕ್ಷಯ್ 1 ಬಾರಿ, ಮುಕೇಶ್ 3 ಬಾರಿ ಹಾಗೂ ಪವನ್ಗೆ 8 ಬಾರಿ ಶಿಕ್ಷೆ ಕೂಡ ನೀಡಲಾಗಿದೆ.