ಬೆಂಗಳೂರು: ಅಯೋಗ್ಯ ಚಿತ್ರದ ಸಕ್ಸಸ್ ನಂತರ ನೀನಾಸಂ ಸತೀಶ್ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಈ ನಡುವೆ ರಿಲೀಸ್ ಆಗಿದ್ದ ಚಂಬಲ್ ಸಹ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಹಾಗೆಯೇ ನಟನೆಯೊಂದಿಗೆ ತಾವೇ ನಿರ್ದೇಶನಕ್ಕೂ ಮುಂದಾಗಿದ್ದರು. ಈಗ ಅವರು ಮತ್ತೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಹೌದು. ಸತೀಶ್ ಈಗ ಬ್ರಹ್ಮಚಾರಿ ಹೆಸರಿನ ಚಿತ್ರವನ್ನು ಒಪ್ಪಿಕೊಂಡಿದ್ದು, ಅವರಿಲ್ಲಿ ಬ್ರಹ್ಮಚಾರಿಯಾಗಿ ನಟಿಸುತ್ತಿದ್ದಾರೆ. ಉದಯ್ ಮೆಹ್ತಾ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇನ್ನು ಬ್ರಹ್ಮಚಾರಿ ಅಂತ ಟೈಟಲ್ ಇಟ್ಟಿರುವ ಚಿತ್ರತಂಡ 100 ಪರ್ಸೆಂಟ್ ವರ್ಜಿನ್ ಎನ್ನುವ ಸಬ್ ಟೈಟಲ್ ಇಟ್ಟಿದೆ. ಈಗಾಗಲೇ ಬಾಂಬೆ ಮಿಠಾಯಿ ಮತ್ತು ಡಬಲ್ ಇಂಜಿನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ ‘ಬ್ರಹ್ಮಚಾರಿ’ ಹೆಸರಿನ ಮೂರನೇ ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಅಂದ ಹಾಗೆ ಈ ಹಿಂದೆ ಕೇಳಿ ಬಂದಿರುವಂತೆ ಈ ಚಿತ್ರವು ಲವ್ ಇನ್ ಮಂಡ್ಯ ಚಿತ್ರದ ಮುಂದುವರಿದ ಭಾಗ ಎನ್ನಲಾಗುತ್ತಿದ್ದು, ಆದರೆ ಅದನ್ನು ಚಿತ್ರ ತಂಡ ಅಲ್ಲಗಳೆದಿದೆ. ಇದೊಂದು ಪಕ್ಕಾ ಕಾಮಿಡಿ ಎಂಟರ್ಟೇನ್ ಮೆಂಟ್ ಚಿತ್ರ ಎಂದಿದ್ದಾರೆ. ಯುಗಾದಿ ಹಬ್ಬಕ್ಕೆ ಬ್ರಹ್ಮಚಾರಿ ಸೆಟ್ಟೇರಲಿದೆ.
ನನ್ನ ಮುಂದಿನ ಚಿತ್ರ ಬ್ರಹ್ಮಚಾರಿ….
ಲವ್ ಇನ್ ಮಂಡ್ಯ ನಿರ್ಮಾಪಕ, ಉದಯ್ ಮೆಹ್ತಾ ಅವರ ಜೊತೆ.. pic.twitter.com/DwK9IO8whl
— Sathish Ninasam (@SathishNinasam) April 2, 2019
ಲವ್ ಇನ್ ಮಂಡ್ಯ" ನಂತರ ಮತ್ತೆ ನಮ್ಮ ಜೋಡಿ , ನಿರ್ಮಾಪಕ ಉದಯ್ ಮೆಹ್ತಾ ಅವರ ಜೊತೆಗೆ, ಅತಿಶೀಘ್ರದಲ್ಲೇ ಚಿತ್ರೀಕರಣ ಪ್ರಾರಂಭ… pic.twitter.com/daVDqtJCNH
— Sathish Ninasam (@SathishNinasam) March 28, 2019