ನಿಖಿಲ್‍ಗೆ ಇನ್ನೂ ವಯಸ್ಸಿದೆ, ಅತಿರೇಕದ ವರ್ತನೆ ಸರಿಯಲ್ಲ: ಸುಮಲತಾ

Public TV
2 Min Read
sumalatha nikil

ಮಂಡ್ಯ: ನಟ ಯಶ್ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅವರು ಆಡಿದ ಮಾತಿಗೆ ಸುಮಲತಾ ಅಂಬರೀಶ್ ಆಕ್ರೋಶ ವ್ಯಕ್ತಪಡಿಸಿದ್ದು, ನಿಖಿಲ್‍ಗೆ ಇನ್ನೂ ವಯಸ್ಸಿದೆ. ಅವರ ಅತಿರೇಕದ ವರ್ತನೆ ಸರಿಯಲ್ಲ ಎಂದು ಕಿಡಿಕಾರಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಿಖಿಲ್ ಕುಮಾರಸ್ವಾಮಿ ಕೂಡ ಫಿಲಂ ಇಂಡಸ್ಟ್ರಿಯಲ್ಲಿದ್ದಾರೆ. ಅದೇ ಇಂಡಸ್ಟ್ರಿಯಲ್ಲಿ ಬೆಳೆದಿರೊ ಒಬ್ಬ ನಟನ ಬಗ್ಗೆ ಮಾತಾಡೋದು ಸರಿಯಲ್ಲ. ಹಿರಿಯ ನಟರಿಗೆ ಕಿಂಚಿತ್ತೂ ಗೌರವ ನೀಡದೆ ಮಾತನಾಡಿರುವುದು ಅವರ ಅಹಂಕಾರವನ್ನ ಸೂಚಿಸುತ್ತದೆ. ವೈಯಕ್ತಿಕ ಟೀಕೆ ಬೇಕಾಗಿರಲಿಲ್ಲ. ಹೀಗೆ ನಾವು ಅವರ ಬಗ್ಗೆ ಮಾತನಾಡೋಕೆ ಹೊರಟರೆ ಏನಾಗಬಹುದು. ಅವರಿಗೆ ಇನ್ನೂ ವಯಸ್ಸಿದೆ, ಅತಿರೇಕದ ವರ್ತನೆ ಸರಿಯಲ್ಲ ಎಂದು ಗರಂ ಆದ್ರು.

SUMALATHA

ಇಂದು ಶ್ರೀರಂಗಪಟ್ಟಣದ ಕಾಳೇನಹಳ್ಳಿಯಲ್ಲಿ ಸುಮಲತಾ ಅವರು ಪ್ರಚಾರ ನಡೆಸುತ್ತಿದ್ದು, ಜನರ ಬಳಿ ತಮಿಳಿನಲ್ಲೂ ಮಾತನಾಡಿ ಪ್ರಚಾರ ಮಾಡಿದರು. ಇಂದು ಮಧ್ಯಾಹ್ನದ ತನಕ ಶ್ರೀರಂಗಪಟ್ಟಣದಲ್ಲಿ ಪ್ರಚಾರ ಮಾಡ್ತೀವಿ. ಬಳಿಕ ಮಧ್ಯಾಹ್ನದ ಮೇಲೆ ಪಾಂಡವಪುರದಲ್ಲಿ ಪ್ರಚಾರ ಮಾಡ್ತೀವಿ. ಪಾಂಡವಪುರದಲ್ಲಿ ನಟ ದರ್ಶನ್ ಪ್ರಚಾರಕ್ಕೆ ಸೇರಿಕೊಳ್ಳುತ್ತಾರೆ ಎಂದು ತಿಳಿಸಿದರು.

ಬಳಿಕ ಟಿಎಂ ಹೊಸೂರಿನಲ್ಲಿ ಪ್ರಚಾರ ಮಾಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸಂದೇಶ ಹೋಗ್ಬೇಕಾಗಿದೆ, ಅವರನ್ನ ನಾನು ಬ್ಲೇಮ್ ಮಾಡೋದಿಲ್ಲ. ಅವರಿಗೆ ಏನ್ ಕಷ್ಟ ಇತ್ತೊ ಏನೊ ಎಂದು ತಮ್ಮ ಪ್ರತಿ ಸ್ಪರ್ಧಿ ಟಿಎಂ ಹೊಸೂರಿನ ಸುಮಲತಾ ಅವರ ಬಗ್ಗೆ ಮಾತನಾಡಿದರು.

nikil yash

ನಿಖಿಲ್ ಹೇಳಿದ್ದೇನು?
ಪಾಪ ಏಸಿಯಲ್ಲಿ ಕುಳಿತುಕೊಂಡು ಛತ್ರಿ ಹಿಡ್ಕೊಂಡು ಓಡಾಡುವವರಿಗೆ ಬಿಸಿಲಿನಲ್ಲಿ ಓಡಾಡೋದು ಕಷ್ಟ ಆಗ್ತಿರಬಹುದೆಂದು ಕುಮಾರಣ್ಣ ಹೇಳಿದ್ದರು. ಅದಕ್ಕೆ ಯಶ್, ದರ್ಶನ್ ಹಾಗೂ ಸುಮಲತಾ ಅವರು ಪ್ರತಿಕ್ರಿಯೆ ನೀಡಿದ್ದರು. ಈ ಬಗ್ಗೆ ಒಂದು ಮಾತು ಹೇಳೋಕೆ ಇಷ್ಟಪಡುತ್ತೀನಿ, ದೊಡ್ಡ ಮನುಷ್ಯ ಮಹಾನುಭಾವ ನಮ್ಮ ತಾತ ದೇವೇಗೌಡರು ಪ್ರಧಾನಿಯಾದಾಗ ನಾವು ಕತ್ರಿಗುಪ್ಪೆಯಲ್ಲಿ ಬಾಡಿಗೆ ಮನೆಯಲ್ಲಿದ್ದವರು. ಆಗ ನಮ್ಮ ತಾಯಿ 5 ಸಾವಿರ ರೂಪಾಯಿನಲ್ಲಿ ಮನೆ ನಿಭಾಯಿಸುತ್ತಿದ್ದರು. ಆದರೆ ಇವತ್ತು ಬಾಡಿಗೆ ಕೊಡದೇ ಇದ್ದವರು ಇಷ್ಟೆಲ್ಲಾ ಮಾತನಾಡುತ್ತಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಹಿರಿಮಗನೋ ಕಿರಿ ಮಗನೋ ಗೊತ್ತಿಲ್ಲ. ಬಾಡಿಗೆ ಮನೆಯವರಿಗೆ ಬಾಡಿಗೆ ಕೊಡದೇ ಇದ್ದವರು ಇವತ್ತು ನನ್ನ ಯೋಗ್ಯತೆ ಬಗ್ಗೆ ಮಾತನಾಡ್ತಾರೆ ಎಂದು ಬಹಿರಂಗವಾಗಿ ಯಶ್‍ಗೆ ನಿಖಿಲ್ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *