ರಾಯಚೂರು: ಜಿಲ್ಲೆಯ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ರಾತ್ರಿ ಕೆಲಸ ಜೋರಾಗಿ ನಡೆದಿದೆ. ಮಧ್ಯರಾತ್ರಿಯೂ ಕಚೇರಿಯಲ್ಲಿ ಕುಳಿತು ಅಧಿಕಾರಿಗಳು ಹಾಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಆರ್ಥಿಕ ವರ್ಷದ ಅಂತ್ಯದ ಹಿನ್ನೆಲೆ ಮಾರ್ಚ್ ತಿಂಗಳು ರಾತ್ರಿಯಿಡೀ ಕೆಲಸ ಮಾಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮಧ್ಯರಾತ್ರಿ ಬಿಲ್ ಬರೆಯುವುದರಲ್ಲಿ ಸಿಬ್ಬಂದಿ ಹಾಗೂ ಅಧಿಕಾರಿಗಳು ನಿರತರಾಗಿರುವುದರಿಂದ ಸಾರ್ವಜನಿಕರಲ್ಲಿ ಗೋಲ್ಮಾಲ್ ಶಂಕೆ ಹುಟ್ಟಿದೆ. ವಾರ್ಷಿಕ ಅಂತ್ಯದ ಮಾರ್ಚ್ ತಿಂಗಳಲ್ಲಿ ಮಾತ್ರ ಹಗಲು ರಾತ್ರಿ ಇಲಾಖೆಯವರು ಕೆಲಸ ಮಾಡುತ್ತಾರೆ. ಹಗಲಿಗಿಂತ ರಾತ್ರಿಯೇ ಹೆಚ್ಚು ಕೆಲಸ ಮಾಡುವ ಸಿಬ್ಬಂದಿ ಹಾಗೂ ಅಧಿಕಾರಿಗಳು ಇನ್ನುಳಿದ ದಿನಗಳಲ್ಲಿ ಕೈಗೆ ಸಿಗುವುದಿಲ್ಲ. ಇದನ್ನೂ ಓದಿ: ತಾಯಿ ಮಲಗಿದ್ದಾಳೆ ಎಂದು 4 ದಿನ ಶವದೊಂದಿಗೆ ಕಾಲ ಕಳೆದ ಬಾಲಕ..!
ರಾತ್ರಿ 12ರ ವರೆಗೂ ಕಚೇರಿಯಲ್ಲೇ ಕುಳಿತ ಸಿಬ್ಬಂದಿ ಮಾಧ್ಯಮಗಳ ಕ್ಯಾಮೆರಾ ಕಂಡ ತಕ್ಷಣ ಮನೆಗೆ ಹೊರಟು ಹೋದ ಘಟನೆ ನಡೆದಿದೆ. ಕಚೇರಿ ಸಮಯದಲ್ಲಿ ಕೆಲಸ ಮಾಡಬೇಕಾದ ಸಿಬ್ಬಂದಿ ಮಧ್ಯರಾತ್ರಿವರೆಗೆ ಕಚೇರಿಯಲ್ಲಿ ಏನು ಮಾಡುತ್ತಾರೆ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ: ಮಾಜಿ ರಾಷ್ಟ್ರಪತಿ ಮೊಮ್ಮಗನ ಮದುವೆ ಮಾಡಿದ ಮಹಿಳಾ ಖಾಜಿ