ರಾಮೇಶ್ವರಂ ಬಾಂಬ್ ಬ್ಲಾಸ್ಟ್‌ ತನಿಖೆಗಿಳಿದ ಎನ್ಐಎ – ಸಿಸಿಬಿಯಿಂದ ತನಿಖಾ ಫೈಲ್ NIAಗೆ ಹಸ್ತಾಂತರ

Public TV
2 Min Read
the rameshwaram cafe

ಬೆಂಗಳೂರು: ಬಾಂಬ್ ಸ್ಫೋಟಗೊಂಡ ಸ್ಥಳದಲ್ಲಿ ನೆಲ ಹಾಸಿನ ಟೈಲ್ಸ್ ಛಿದ್ರ ಛಿಧ್ರವಾಗಿದ್ದು, 20 ಮೀಟರ್ ದೂರದಲ್ಲಿದ್ದ ಗ್ಲಾಸ್‌ಗಳು ಪುಡಿ ಪುಡಿಯಾಗಿವೆ. ಸಿಸಿಬಿ ಹಾಗೂ ಎನ್‌ಐಎ ಕ್ರೈಂ ಸೀನ್‌ಗಾಗಿ ಹೋಟೆಲ್ ಸೀಜ್ ತೆರವುಗೊಳಿಸಲಾಗಿದ್ದು, ಕ್ಲೀನಿಂಗ್ ಕಾರ್ಯ ಆರಂಭವಾಗಿದೆ. ಇಂದಿನಿಂದ ಅಧಿಕೃತವಾಗಿ ಎನ್‌ಐಎ ತನಿಖೆ ಆರಂಭಿಸಿದೆ.

ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ (Rameshwaram Cafe) ಪ್ರಕರಣದ ತನಿಖೆ ಅಧಿಕೃತವಾಗಿ ಇಂದು (ಮಂಗಳವಾರ) ಎನ್ಐಎ ಹೆಗಲೇರಿದೆ. ಬಾಂಬ್ ಸ್ಪೋಟ ಸಂಬಂಧ ನಿನ್ನೆ ಎಫ್ಐಆರ್ ದಾಖಲು ಮಾಡಿದ್ದ ಎನ್ಐಎ (NIA) ಅಧಿಕಾರಿಗಳು ಇಂದು ಸಿಸಿಬಿಯಿಂದ ಕೇಸ್ ಫೈಲ್ ಪಡೆದು ತನಿಖೆಗೆ ಇಳಿದಿದ್ದಾರೆ. ಸ್ಪೋಟ ನಡೆದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಗೆ ಎನ್ಐಎಯ ಮೂವರು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳೀಯ ಪೊಲೀಸರಿಂದ ಘಟನೆಯ ಮಾಹಿತಿ ಪಡೆದರು. ಇದನ್ನೂ ಓದಿ: ಬಸ್‌ ನಿಲ್ದಾಣದಲ್ಲೇ ಟೈಮರ್‌ ಫಿಕ್ಸ್‌ – ಕೊನೆಯ 10 ನಿಮಿಷದ ಕಂಪ್ಲೀಟ್‌ ವರದಿ ಓದಿ

NIA 2

ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆದ ಸ್ಥಳ, ಕ್ಯಾಷ್ ಕೌಂಟರ್, ಆರೋಪಿ ಬಂದು ಹೋದ ಮಾರ್ಗ ಹಾಗೂ ಸಿಸಿಟಿವಿಗಳನ್ನ ಪರಿಶೀಲನೆ ನಡೆಸಿದರು. ಬಳಿಕ ಕೆಲ ಹೊತ್ತು ಪ್ರಕರಣದ ಬಗ್ಗೆ ಹೊಟೇಲ್‌ನಲ್ಲಿ ಚರ್ಚೆ ನಡೆಸಿದ ಮೂವರು ಅಧಿಕಾರಿಗಳು, ಹೆಚ್ಎಎಲ್ ಪೊಲೀಸರಿಂದ ಕೆಲವು ಮಾಹಿತಿಗಳನ್ನ ಸಂಗ್ರಹಿಸಿದರು. ಇನ್ನೂ ಸ್ಪೋಟದ ಬಗ್ಗೆ ಸಿಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದು, ಇಂದು ತಮ್ಮ ಬಳಿಯಿದ್ದ ಕೇಸ್ ಫೈಲ್ ಸೇರಿದಂತೆ ಟೆಕ್ನಿಕಲ್ ಎವಿಡೆನ್ಸ್, ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸಂಪೂರ್ಣ ಮಾಹಿತಿಯನ್ನ ಎನ್ಐಎ ಅಧಿಕಾರಿಗಳ ಜೊತೆ ವಿನಿಮಯ ಮಾಡಿಕೊಂಡಿದ್ದಾರೆ. ಈ ಮೂಲಕ ಬಾಂಬ್ ಸ್ಪೋಟದ ಸಂಪೂರ್ಣ ತನಿಖೆ ಎನ್ಐಎ ಹೆಗಲೇರಿದೆ.

ಬಾಂಬ್ ಸ್ಫೋಟದ ನಂತರ ರಾಮೇಶ್ವರಂ ಕೆಫೆಯನ್ನ ಪೊಲೀಸರು ತಮ್ಮ ಸುಪರ್ದಿಗೆ ಪಡೆದಿದ್ದರು. ಕ್ರೈಂ ಸೀನ್ ಹಾಳಾಗಬಾರದು ಎವಿಡೆನ್ಸ್ ನಾಶವಾಗಬಾರದು ಅಂತಾ ಹೋಟೆಲ್‌ನ ಒಳಗೆ ಯಾರನ್ನೂ ಬಿಟ್ಟಿರಲಿಲ್ಲ. ಇದೀಗ ಸ್ಪೋಟಕ್ಕೆ ಸಂಬಂಧಿಸಿದಂತೆ ತನಿಖೆ, ಪರಿಶೀಲನೆ, ಎವಿಡೆನ್ಸ್ ಸಂಗ್ರಹ, ಸ್ಪೋಟದ ಸ್ಯಾಂಪಲ್ ಸಂಗ್ರಹ ಕಾರ್ಯ ಮುಗಿದಿದ್ದು, ಇಂದು ಪೊಲೀಸರು ಹೋಟೆಲನ್ನು ಮಾಲೀಕರಿಗೆ ಹಸ್ತಾಂತರ ಮಾಡಿದರು. ಹೋಟೆಲ್‌ ಹಸ್ತಾಂತರವಾಗುತ್ತಿದ್ದಂತ್ತೆ, ಸಿಬ್ಬಂದಿ ಸ್ವಚ್ಚತಾ ಕಾರ್ಯ ಆರಂಭಿಸಿದರು. ಅಲ್ಲದೇ ಇದೇ ಶುಕ್ರವಾರ ಶಿವರಾತ್ರಿಯಂದು ಹೊಟೇಲ್ ಮತ್ತೆ ಆರಂಭವಾಗಲಿದ್ದು, ಕೆಲವು ದುರಸ್ತಿ ಕಾರ್ಯಗಳನ್ನ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಾಂಬ್ ಬ್ಲಾಸ್ಟ್ ಗಾಯಾಳುಗಳಿಗೆ ಸರ್ಕಾರದಿಂದ ಚಿಕಿತ್ಸಾ ವೆಚ್ಚ – ಭರವಸೆ ಕೊಟ್ಟು ಸರ್ಕಾರ ಸೈಲೆಂಟ್

rameshwaram cafe blast case new cctv shows bengaluru blast suspect getting off bus near rameshwaram cafe 1

ಕೆಫೆಯಲ್ಲಿ ಬಾಂಬ್ ಇಡಲಾಗಿದ್ದ ವಿಡಿಯೋ ಹೊರ ಬಂದಿದ್ದು, ಸ್ಪೋಟ ತೀವ್ರತೆಗೆ ಕಬ್ಬಿಣದ ಪಿಲ್ಲರ್ ಕಿತ್ತು ಬಂದಿದೆ. ನೆಲದ ಟೈಲ್ಸ್ ಕೂಡ ಛಿದ್ರವಾಗಿರುವುದು ಕಂಡು ಬಂದಿದೆ. 20 ಮೀಟರ್ ದೂರದಲ್ಲಿದ್ದ ಗ್ಲಾಸ್ ಪುಡಿಪುಡಿಯಾಗಿದೆ. ಡಸ್ಟ್ ಬಿನ್ ಹಿಂಭಾಗದಲ್ಲಿ ಮರವೊಂದರ ಪಕ್ಕದಲ್ಲಿ ಬ್ಯಾಗ್ ಇಟ್ಟಿದ್ರಿಂದ ಗ್ರಾಹಕರು ಹಾಗೂ ಸಿಬ್ಬಂದಿ ಗಮನಿಸಿರಲಿಲ್ಲ. ಸ್ಫೋಟದ ತೀವ್ರತೆಗೆ ಹೋಟೆಲ್ ಹಾಳಾಗಿದ್ದು, ರಿನೋವೇಷನ್ ಕೆಲಸ ಸಹ ಆರಂಭಿಸಲಾಗಿದೆ.

ಈವರೆಗಿನ ತನಿಖಾ ಬೆಳವಣಿಗೆಯ ಕೇಸ್ ಫೈಲ್ ಎನ್‌ಐಎಗೆ ವರ್ಗಾವಣೆಯಾಗಿದ್ದು, ಎನ್‌ಐಐ ಅಧಿಕಾರಿಗಳು ತಮ್ಮ ನೆಟ್‌ವರ್ಕ್ ಮೂಲಕ ಶಂಕಿತ ಉಗ್ರನಿಗಾಗಿ ಹುಟುಕಾಟ ಆರಂಭಿಸಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಬ್ಲಾಸ್ಟ್‌ – ಎನ್‌ಐಎಗೆ ಕೇಸ್‌ ವರ್ಗಾವಣೆ

Share This Article