ಶರಣಾದ ನಕ್ಸಲರಿಗೆ ಜ.30ರ ವರೆಗೆ ನ್ಯಾಯಾಂಗ ಬಂಧನ

Public TV
1 Min Read
Naxal 033

– ಪರಪ್ಪನ ಅಗ್ರಹಾರ ಜೈಲಿಗೆ ಆರೋಪಿಗಳು

ಬೆಂಗಳೂರು: ಶಸ್ತ್ರಾಸ್ತ್ರ ತ್ಯಜಿಸಿ ಶರಣಾದ 6 ಮಂದಿ ನಕ್ಸಲರಿಗೆ (Naxals) ಜ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಎನ್‌ಐಎ ಕೋರ್ಟ್ (NIA Court) ಆದೇಶ ಹೊರಡಿಸಿದೆ.

ಬುಧವಾರ ಸಿಎಂ ಮುಂದೆ ನಕ್ಸಲರ ಶರಣಾಗತಿ ಪ್ರಕ್ರಿಯೆ ನಡೆಯಿತು. ಮಹಿಳಾ ಸಾಂತ್ವನ ಕೇಂದ್ರದಿಂದ ಶರಣಾದ ನಕ್ಸಲರನ್ನು ಮಡಿವಾಳ ಎಫ್‌ಎಸ್‌ಎಲ್‌ಗೆ ಗುರುವಾರ ಪೊಲೀಸರು ಕರೆತಂದರು. ಡೈರಿ ಸರ್ಕಲ್ ಬಳಿಯ ಮಹಿಳಾ ಸಾಂತ್ವನ ಕೇಂದ್ರದಲ್ಲಿ ನಾಲ್ವರು ಮಹಿಳೆಯರು ಮತ್ತು ಮತ್ತಿಬ್ಬರು ಪುರುಷರನ್ನ ಮಡಿವಾಳದ ಎಫ್‌ಎಸ್‌ಎಲ್ ಸ್ಪೆಷಲ್ ಸೆಲ್‌ನಲ್ಲಿ ಇರಿಸಲಾಗಿತ್ತು. ಬಳಿಕ ಎಲ್ಲರನ್ನೂ ಅಲ್ಲಿಂದ ಮೆಡಿಕಲ್ ಪರೀಕ್ಷೆಗೆ ಕರೆದೊಯ್ಯಲಾಯಿತು. ಇದನ್ನೂ ಓದಿ: ನಕ್ಸಲರ ಶರಣಾಗತಿ ಬಗ್ಗೆ ಸರ್ಕಾರದ ವಿರುದ್ಧ ಯತ್ನಾಳ್ ಕಿಡಿ

naxals siddaramaiah

ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರೆಪ್ಪ ಅರೋಲಿ, ವಸಂತ ಟಿ.ಎನ್, ಜಿಶಾ ಎಲ್ಲರನ್ನೂ ಎನ್‌ಐಎ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು. ಕೋರ್ಟ್‌ಗೆ ಹಾಜರು ಪಡಿಸುವ ಮೊದಲು ನಕ್ಸಲ್ ನಿಗ್ರಹ ದಳ ಆರೋಪಿಗಳಿಂದ ಹೇಳಿಕೆ ದಾಖಲಿಸಿಕೊಂಡಿತು. ಶಸ್ತ್ರಾಸ್ತ್ರಗಳ ಬಗ್ಗೆಯೂ ಸಾಕ್ಷ್ಯ ಕಲೆ ಹಾಕಿತು.

ಕೊನೆಗೆ ನಕ್ಸಲರನ್ನು ಕೋರ್ಟ್‌ಗೆ ಚಿಕ್ಕಮಗಳೂರು ಪೊಲೀಸರು ಹಾಜರುಪಡಿಸಿದರು. ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ ಎನ್‌ಐಎ ಕೋರ್ಟ್‌ನ ನ್ಯಾಯಾಧೀಶ ಗಂಗಾಧರ್ ಅವರ ಮುಂದೆ ಎಲ್ಲರನ್ನೂ ಹಾಜರುಪಡಿಸಲಾಯಿತು. ಇದನ್ನೂ ಓದಿ: ನಕ್ಸಲ್ ಶರಣಾಗತಿ – ಮುಂಡಗಾರು ಲತಾ ಟೀಂನ ರವೀಂದ್ರ ಮಿಸ್ಸಿಂಗ್?

ನ್ಯಾಯಾಧೀಶರ ಮುಂದೆ ಒಬ್ಬೊಬ್ಬರಾಗಿ ತಮ್ಮ ಕುರಿತು ನಕ್ಸಲರು ಮಾಹಿತಿ ನೀಡಿದರು. ಕೋರ್ಟ್ನಲ್ಲಿ ನಕ್ಸಲರಿಂದ ವಕಾಲತು ಪ್ರತಿಗೆ ವಕೀಲರು ಸಹಿ ಪಡೆದರು. ತಮ್ಮ ಕೇಸ್ ನಡೆಸಲು ನಕ್ಸಲರು ವಕೀಲರನ್ನು ನೇಮಕ ಮಾಡಿಕೊಂಡರು. ಅಂತಿಮವಾಗಿ ಕೋರ್ಟ್ ಎಲ್ಲ ನಕ್ಸಲರಿಗೂ ಜ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದೆ.

Share This Article