ಬೆಂಗಳೂರು: ಮದುವೆಯಾಗಿ ಇನ್ನು ಒಂದು ತಿಂಗಳು ಕಳೆದಿಲ್ಲ, ಆಗಲೇ ನವವಿವಾಹಿತೆ ಸಾವಿನ ಮನೆಯ ಬಾಗಿಲು ತಟ್ಟಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ (Bagalgunte) ಬುಧವಾರ ಸಂಜೆ ನಡೆದಿದೆ.
ಮದ್ದೂರು ಮೂಲದ ಐಶ್ವರ್ಯ ಸಿಕೆ ಮೃತ ನವವಿವಾಹಿತೆ. ಐಶ್ವರ್ಯ ನ.27ರಂದು ಬೆಂಗಳೂರು ಮಲ್ಲಸಂದ್ರದ ಲಿಖಿತ್ ಸಿಂಹ ಜೊತೆಗೆ ಹಸಮಣೆ ಏರಿದ್ದಳು. ಮದುವೆಯಾಗಿದ್ದಾಗಿನಿಂದ ಗಂಡ ಹೆಂಡತಿ ಅತ್ತೆಯ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಐಶ್ವರ್ಯ ಪತಿ ನಿಮ್ಮ ಮಗಳನ್ನ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಎನ್ನುತ್ತಿದ್ದನಂತೆ. ಬುಧವಾರ ಬೆಳಗ್ಗೆಯಷ್ಟೇ ಮೃತಳ ಪೋಷಕರು ಗಂಡನ ಮನೆಗೆ ಬಂದು ರಾಜಿ ಸಂಧಾನ ಮಾಡಿಸಿ ಊರಿನ ಕಡೆಗೆ ಹೊರಟಿದ್ದರು. ಇತ್ತ ಪೋಷಕರು ಊರು ಸೇರುತ್ತಿದ್ದಂತೆ ಐಶ್ವರ್ಯ ನೇಣು ಹಾಕಿಕೊಂಡು ಸತ್ತಿದ್ದಾಳೆ ಎಂದು ಗಂಡನ ಮನೆಯವರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೈಸೂರು | ಅನಾರೋಗ್ಯದಿಂದ ಬಳಲುತ್ತಿದ್ದ ಐದು ವರ್ಷದ ತಾಯಮ್ಮ ಹುಲಿ ಸಾವು
ಗಂಡನ ಮನೆಯವರೇ ಕೊಲೆ ಮಾಡಿದ್ದಾರೆಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಗೆ ಮೃತಳ ಪೋಷಕರು ದೂರು ನೀಡಿದ್ದಾರೆ. ಇದನ್ನೂ ಓದಿ: ಕಾರ್ಯಕರ್ತನಾಗಿ ಕಸ ಗುಡಿಸಿ, ಅಧ್ಯಕ್ಷನಾಗಿ ಪಕ್ಷದ ಬಾವುಟ ಕಟ್ಟಿ, ಎಲ್ಲ ಕೆಲಸ ಮಾಡಿದ್ದೇನೆ: ಡಿಕೆಶಿ

