ಮನೆಗೆ ಕರೆಸಿ ನವಜೋಡಿಯನ್ನು ಹತ್ಯೆ ಮಾಡಿದ ನವವಧು ಪೋಷಕರು

Public TV
1 Min Read
lover

ಚೆನ್ನೈ: ಹೊಸದಾಗಿ ಜೀವನ ನಡೆಸಬೇಕಾಗಿದ್ದ ನವಜೋಡಿಯನ್ನು ನವವಧು ಸಹೋದರ ಮತ್ತು ಪೋಷಕರು ಕೊಲೆ ಮಾಡಿರುವ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ.

ಬೇರೆ ಜಾತಿ ಯುವಕನನ್ನು ಪ್ರೀತಿಸಿ ಓಡಿ ಹೋಗಿ ಯುವತಿ ಮದುವೆಯಾಗಿದ್ದಳು. ಈ ಹಿನ್ನೆಲೆ ಮದುವೆ ಒಪ್ಪದ ನವವಧು ಪೋಷಕರು ನವವಿವಾಹಿತರನ್ನು ಮನೆಗೆ ಕರೆಸಿ ಹತ್ಯೆ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನವವಧುವಿನ ಸಹೋದರ ಮತ್ತು ಪೋಷಕರನ್ನು ಪೊಲೀಸರು ಬಂಧಿಸಿದರು. ಇದನ್ನೂ ಓದಿ: ಮೊದಲಬಾರಿಗೆ ಟ್ವಿಟ್ಟರ್ ಉದ್ಯೋಗಿಗಳ ಜೊತೆ ಮಾತನಾಡಲಿದ್ದಾರೆ ಮಸ್ಕ್

Police Jeep

ನಡೆದಿದ್ದೇನು?
ಈ ಕುರಿತು ಪೊಲೀಸರು ಮಾತನಾಡಿದ್ದು, ಮೃತ ನವವಧು ತನ್ನ ಸಂಬಂಧಿಕನ ಜೊತೆ ಸಂಬಂಧ ಹೊಂದಿದ್ದಳು. ಆದರೆ ಕೊನೆಗೆ ಬೇರೆ ಯುವಕನನ್ನು ಮದುವೆಯಾಗಿದ್ದಾಳೆ. ಈ ಹಿನ್ನೆಲೆ ನವವಧು ಮನೆಯವರು ಅವರ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ. ಅದಕ್ಕೆ ವಧು ಸಹೋದರ ಎಲ್ಲವನ್ನು ಮರೆತಿರುವಂತೆ ನಟಿಸಿ ನವಜೋಡಿಯನ್ನು ಮನೆಗೆ ಆಹ್ವಾನಿಸಿದ್ದಾರೆ. ಅವರನ್ನು ನಂಬಿ ನವಜೋಡಿ ಮನೆಗೆ ಹೋಗಿದ್ದಾರೆ. ಸಮಯ ನೋಡಿಕೊಂಡು ಇಬ್ಬರನ್ನು ಸಹೋದರ ಮತ್ತು ಪೋಷಕರು ಸೇರಿ ಹತ್ಯೆ ಮಾಡಿದ್ದಾರೆ ಎಂದು ವಿವರಿಸಿದರು.

CRIME 2

ಪೊಲೀಸರ ಪ್ರಾಥಮಿಕ ತನಿಖೆ ಹಿನ್ನೆಲೆ, ನವವಧು ಪರಿಶಿಷ್ಟ ಜಾತಿಗೆ ಸೇರಿದವಳು. ಅವಳ ಪತಿ ಅತ್ಯಂತ ಹಿಂದುಳಿದ ಜಾತಿಗೆ ಸೇರಿದವನು. ಆದರೆ ಇದು ಮರ್ಯಾದೆ ಹತ್ಯೆಯ ಪ್ರಕರಣವಲ್ಲ ಎಂದು ತನಿಖಾಧಿಕಾರಿಗಳು ಹೇಳುತ್ತಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ ಮೇಲೆ ದಾಳಿಗೆ ಯೋಜಿಸಿದ್ದ ಮೂವರು ಉಗ್ರರ ಹತ್ಯೆ 

Share This Article
Leave a Comment

Leave a Reply

Your email address will not be published. Required fields are marked *