ಮೈಸೂರು: ಬೈಕಿನಿಂದ ಆಯ ತಪ್ಪಿ ಬಿದ್ದ ನವವಿವಾಹಿತನ ಮೇಲೆ ಬಸ್ ಹರಿದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಮೈಸೂರು ಜಿಲ್ಲೆ ಎಚ್.ಡಿ ಕೋಟೆ ತಾಲೂಕಿನ ಹ್ಯಾಂಡ್ ಪೋಸ್ಟ್ ಬಳಿ ನಡೆದಿದೆ.
ಮುನೀಶ್ ಜೈನ್ ಅಪಘಾತದಲ್ಲಿ ಮೃತ ದುರ್ದೈವಿ. ಮುನೀಶ್ ಬಾಗಲಕೋಟೆ ಮೂಲದವನಾಗಿದ್ದು, ಕಳೆದ ವಾರ ಅಷ್ಟೇ ಸೃಷ್ಟಿ ಅವರನ್ನು ಮದುವೆ ಆಗಿದ್ದನು. ಮುನೀಶ್ ಬೆಂಗಳೂರಿಗೆ ಬಂದು ರಾಯಲ್ ಎನ್ಫೀಲ್ಡ್ ಬೈಕ್ನನ್ನು ಬಾಡಿಗೆಗೆ ಪಡೆದಿದ್ದನು.
ಮದುವೆಯಾದ ಬಳಿಕ ಮುನೀಶ್ ತನ್ನ ಪತ್ನಿ ಸೃಷ್ಟಿ ಜೊತೆ ಎಚ್.ಡಿ ಕೋಟೆಯ ಕಬಿನಿ ಜಂಗಲ್ ರೆಸಾರ್ಟ್ಗೆ ಬಂದು ತಂಗಿದ್ದನು. ಇಂದು ರಾಯಲ್ ಎನ್ಫೀಲ್ಡ್ನಲ್ಲಿ ತನ್ನ ಪತ್ನಿಯನ್ನು ಹಿಂಬದಿಯಲ್ಲಿ ಕೂರಿಸಿಕೊಂಡು ವಾಪಸ್ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.
ಎಚ್.ಡಿ ಕೋಟೆಯ ಹ್ಯಾಂಡ್ ಪೋಸ್ಟ್ ಬಳಿ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಮುನೀಶ್ ಹಿಂಬದಿ ಕುಳಿತಿದ್ದ ಸೃಷ್ಟಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬಗ್ಗೆ ಎಚ್.ಡಿ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv