ತುಮಕೂರು: ಖಿನ್ನತೆಗೆ ಒಳಗಾಗಿದ್ದ ನವ ವಿವಾಹಿತೆ (Newly Married Woman) ಕೆರೆಗೆ ಬಿದ್ದು ಸಾವನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಶಿಡ್ಲನಹಟ್ಟಿ ಗ್ರಾಮದಲ್ಲಿ ನಡೆದಿದೆ.
ಕುಣಿಗಲ್ ಪಟ್ಟಣದ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪಿಯುಸಿ (Second PUC) ವ್ಯಾಸಂಗ ಮಾಡುತ್ತಿದ್ದ ರಕ್ಷಿತಾ ಕೆರೆಗೆ (Lake) ಬಿದ್ದು ಪ್ರಾಣ ಕಳೆದುಕೊಂಡ ನವ ವಿವಾಹಿತೆ. ಇದನ್ನೂ ಓದಿ: ಗಂಡ ಹೆಂಡತಿ ಬಿಗ್ ಬಾಸ್ ಮನೆಯಲ್ಲೇ ಡಿವೋರ್ಸ್
ಕಳೆದ ಇಪ್ಪತ್ತು ದಿನಗಳ ಹಿಂದೆ ಸೋದರ ಮಾವನೊಂದಿಗೆ ಕುಟುಂಬಸ್ಥರು ಒಪ್ಪಿಸಿ ಮದುವೆ ಮಾಡಿಕೊಡಲಾಗಿತ್ತು. ಮದುವೆ ಬಳಿಕ ರಕ್ಷಿತಾಳನ್ನು ಕಾಲೇಜಿನಿಂದ ಬಿಡಿಸಿದ್ದರು ಎಂದು ತಿಳಿದು ಬಂದಿದೆ.
ಆರೋಗ್ಯ ಸಮಸ್ಯೆ (Health Problem) ಕಾರಣದಿಂದ ಖಿನ್ನತೆ ಒಳಗಾಗಿದ್ದ ರಕ್ಷಿತಾ ಕೆರೆಗೆ ಬಿದ್ದಿದ್ದಾಳೆ ಎನ್ನಲಾಗಿದೆ. ಈ ಸಂಬಂಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ(ಯುಡಿಆರ್) ದಾಖಲಾಗಿದೆ.