ಡೈರಿಯಲ್ಲಿರೋದು ಗೋವಿಂದರಾಜ್ ಹಸ್ತಾಕ್ಷರ!

Public TV
3 Min Read
govind raj

– ವರದಿ ಕೊಟ್ಟಿದ್ಯಂತೆ ಪ್ರಯೋಗಾಲಯ
– ನಿಜವೇ ಆಗಿದ್ರೆ ಬಿಜೆಪಿಗೆ ಮತ್ತೊಂದು ಭರ್ಜರಿ ಅಸ್ತ್ರ

ಬೆಂಗಳೂರು: ರಾಜ್ಯ ಮಾತ್ರವಲ್ಲ ರಾಷ್ಟ್ರ ರಾಜಕಾರಣದಲ್ಲೂ ಸಂಚಲನ ಮೂಡಿಸಿದ್ದ ಕಾಂಗ್ರೆಸ್ ಹೈಕಮಾಂಡ್‍ಗೆ ನೀಡಲಾಗಿದೆ ಅನ್ನೋ ಎಂಎಲ್‍ಸಿ ಗೋವಿಂದರಾಜು ಡೈರಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಪಬ್ಲಿಕ್ ಟಿವಿಗೆ ಸಿಕ್ಕಿರುವ ಮಾಹಿತಿ ಪ್ರಕಾರ ಕಪ್ಪ ಡೈರಿ ಗೋವಿಂದರಾಜು ಅವರದ್ದೇ. ಅದ್ರಲ್ಲಿರೋ ಅವರದ್ದೇ ಹಸ್ತಬರಹ ಎನ್ನಲಾಗಿದೆ.

ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಗೋವಿಂದರಾಜು ಡೈರಿ ಕೊಡಿ, ಲ್ಯಾಬ್‍ನಲ್ಲಿ ಹಸ್ತಾಕ್ಷರ ಪರೀಕ್ಷೆ ಮಾಡಿಸ್ತೇವೆ ಅಂತ ಐಟಿ ಇಲಾಖೆ ಅಧಿಕಾರಿಗಳಿಗೆ ಬೆಂಗಳೂರು ಪೊಲೀಸರು ಮನವಿ ಮಾಡಿದ್ದಾರೆ. ಆದರೆ ಐಟಿ ಸೈಲೆಂಟ್ ಆಗಿದೆ. ಮತ್ತೊಂದು ಮೂಲಗಳ ಪ್ರಕಾರ ತಾನು ಕ್ಲೀನ್ ಹ್ಯಾಂಡ್ ಅಂತ ಬಿಂಬಿಸಿಕೊಳ್ಳೋಕೆ ಗೋವಿಂದರಾಜು ಅವರೇ ಪ್ರೈವೇಟ್ ಲ್ಯಾಬ್‍ನಲ್ಲಿ ಡೈರಿಯಲ್ಲಿನ ಹ್ಯಾಂಡ್‍ರೈಟಿಂಗ್ ಬಗ್ಗೆ ಚೆಕ್ ಮಾಡಿಸಿದ್ದಾರೆ. ಆ ಖಾಸಗಿ ಲ್ಯಾಬ್‍ನವ್ರು ಡೈರಿಯಲ್ಲಿ ಬರೆದಿರೋದು ಗೋವಿಂದರಾಜು ಅಲ್ಲ. ಅದರಲ್ಲಿರೋದು ಅವರ ಹಸ್ತಾಕ್ಷರ ಅಲ್ಲ. ಅವರಿಗೂ ಡೈರಿಗೂ ಸಂಬಂಧ ಇಲ್ಲ ಅಂತಾ ವರದಿ ಕೊಟ್ಟಿದ್ಯಂತೆ.

ಲ್ಯಾಬ್ ಕೊಟ್ಟ ರಿಪೋರ್ಟ್ ಸರಿಯಾಗಿದ್ದರೆ ಡೈರಿಯಲ್ಲಿ ಕಪ್ಪ ಪಡೆದಿದ್ದಾರೆ ಎಂದು ಕೋಡ್ ವರ್ಡ್‍ನಲ್ಲಿ ಬರೆದಿರೋ ಎಲ್ಲಾ ಕಾಂಗ್ರೆಸ್ ನಾಯಕರು ಆರೋಪ ಮುಕ್ತರಾಗ್ತಾರೆ. ಆದ್ರೆ, ಈ ಲ್ಯಾಬ್ ರಿಪೋರ್ಟ್‍ನ್ನು ಐಟಿ ಒಪ್ಪಿಕೊಳ್ಳುತ್ತಾ? ಪೊಲೀಸರು ಏನಂತಾರೆ? ಅನ್ನೋದು ಕುತೂಹಲ ಕೆರಳಿಸಿದೆ.

ಡೈರಿಯಲ್ಲಿರೋ ಹ್ಯಾಂಡ್ ರೈಟಿಂಗ್ ನನ್ನದಲ್ಲ. ಅಸಲಿಗೆ ಡೈರಿಯೇ ನನ್ನದಲ್ಲ, ಅದು ಎಲ್ಲಿಂದ ಬಂತೋ ಗೊತ್ತೇ ಇಲ್ಲ ಅಂತ ಗೋವಿಂದರಾಜು ವಾದ ಮಾಡುತ್ತಲೇ ಇದ್ದಾರೆ. ಜೊತೆಗೆ, ಡೈರಿ ಸೀಕ್ರೇಟ್ ಸೋರಿಕೆ ಬಗ್ಗೆ ತನಿಖೆ ನಡೆಸಿ ಎಂದು ಫೆಬ್ರವರಿ 28ರಂದು ಇಂದಿರಾನಗರ ಪೊಲೀಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಈಗ ತನಿಖೆ ಶುರು ಮಾಡಿದ್ದಾರೆ. ಆದ್ರೆ, ಡೈರಿಯನ್ನ ಐಟಿ ಕೊಡ್ತಿಲ್ಲ ಅಂತ ಪೊಲೀಸ್ರು ಹೇಳ್ತಿದ್ದಾರೆ. ಈ ಮಧ್ಯೆ, ವಿಧಾನಮಂಡಲದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಮಧ್ಯೆ ವಾಗ್ವಾದವೇ ನಡೀತು.

ಲೀಕ್ ಆಗಿಲ್ಲ: ಡೈರಿ ಅಂಶಗಳು ಆದಾಯ ತೆರಿಗೆ ಇಲಾಖೆಯಿಂದ ಲೀಕ್ ಅಗಿಲ್ಲ ಅಂತ ಐಟಿ ಡಿಜಿ ಬಾಲಕೃಷ್ಣನ್ ಸ್ಪಷ್ಟನೆ ನೀಡಿದ್ದಾರೆ. ಡೈರಿ ಸಿಕ್ಕಿದ್ದು ನಿಜಾನ ಎಂಬ ಪ್ರಶ್ನೆಗೆ ಸಮರ್ಪಕ ಉತ್ತರ ನೀಡದ ಅಧಿಕಾರಿಗಳು, ಐಟಿ ದಾಳಿಯಲ್ಲಿ ಸಿಕ್ಕ ಯಾವುದೇ ಮಾಹಿತಿಯನ್ನು ಐಟಿ ಕಾಯ್ದೆ ಅನ್ವಯ ಬಹಿರಂಗಪಡಿಸುವಂತಿಲ್ಲ ಅಂದ್ರು. ಇಂದಿರಾನಗರ ಪೆÇಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಬಂಧ ನಾನು ಪೊಲೀಸ್ ಕಮೀಷನರ್‍ಗೆ ಉತ್ತರ ಬರೆದಿದ್ದೇನೆ. ಗೋವಿಂದರಾಜು ಅವರಿಗೆ ವಿವರವಾಗಿ ಉತ್ತರ ನೀಡಲಾಗಿದೆ. ಇದು ದೂರುದಾರ ಮತ್ತು ನಮ್ಮ ನಡುವಿನ ವಿಚಾರ. ಆರೋಪ ಮತ್ತು ದೂರಿನ ಬಗ್ಗೆ ಗೋವಿಂದರಾಜುಗೆ ಲಿಖಿತ ಉತ್ತರ ನೀಡಿದ್ದೇನೆ. ಇದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಅಂತ ಬಾಲಕೃಷ್ಣನ್ ಹೇಳಿದ್ರು.

ಅವಧಿಗೆ ಮೊದಲೇ ಸಾಧನೆ: ಆರ್ಥಿಕ ವರ್ಷದಲ್ಲಿ ಸ್ವಯಂ ಘೋಷಿತವಾಗಿ ಆದಾಯ ಘೋಷಿಸಿಕೊಂಡ ಮೊತ್ತ 4,828 ಕೋಟಿಯಾಗಿದ್ರೆ, ರೇಡ್ ಮಾಡಿ 132 ಕೋಟಿಯನ್ನ ಸೀಜ್ ಮಾಡಲಾಗಿದೆ. ಕಾನೂನು ಬಾಹಿರ ಹಣ ವರ್ಗಾವಣೆ ಹಿನ್ನೆಲೆಯಲ್ಲಿ 307 ಕೋಪರೇಟೀವ್ ಬ್ಯಾಂಕ್‍ಗಳು ಮತ್ತು ಏಳು ರಾಷ್ಟ್ರೀಕೃತ ಬ್ಯಾಂಕುಗಳ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ಶಿವಮೊಗ್ಗದ ಎರಡು ಮತ್ತು ಮಂಗಳೂರಿನ ಒಂದು ಕೋಪರೇಟೀವ್ ಬ್ಯಾಂಕುಗಳಿಂದ 900 ಕೋಟಿ ಹಣ ವಶಪಡಿಸಿಕೊಳ್ಳಲಾಗಿದೆ ಅಂತ ಐಟಿ ತನಿಖಾ ವಿಭಾಗ ಮಾಹಿತಿ ನೀಡ್ತು. ಇನ್ನು, ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ನಾವು 85 ಸಾವಿರಕೋಟಿ ಟಾರ್ಗೆಟ್ ಇಟ್ಟುಕೊಂಡಿದ್ವಿ. ಆದ್ರೆ, 86,229 ಕೋಟಿ ತೆರಿಗೆ ಸಂಗ್ರಹವಾಗಿದೆ. ತೆರಿಗೆ ಸಂಗ್ರಹದ ಗುರಿಯನ್ನು ನಾವು ಅವಧಿಗೆ ಮೊದಲೇ ಮುಟ್ಟಿದ್ದೇವೆ. ಶೇ. 22.48 ಶೇ ದರದಲ್ಲಿ ತೆರಿಗೆ ಸಂಗ್ರಹ ವೃದ್ಧಿಯಾಗಿದೆ. ಕರ್ನಾಟಕ ವಿಭಾಗ ತೆರಿಗೆ ಸಂಗ್ರಹದಲ್ಲಿ ಮೂರನೇ ಸ್ಥಾನ ಗಳಿಸಿದೆ ಎಂದು ಐಟಿ ಆಯುಕ್ತೆ ನೂತನ್ ಒಡೆಯರ್ ಹೇಳಿದ್ರು.

IT Raid Dairy

IT Raid Dairy 24

IT Raid Dairy 23

IT Raid Dairy 22

IT Raid Dairy 21

IT Raid Dairy 20

IT Raid Dairy 19

IT Raid Dairy 18

IT Raid Dairy 17

IT Raid Dairy 16

IT Raid Dairy 15

IT Raid Dairy 13

IT Raid Dairy 12

IT Raid Dairy 11

IT Raid Dairy 10

IT Raid Dairy 9

IT Raid Dairy 8

IT Raid Dairy 7

IT Raid Dairy 6

IT Raid Dairy 5

IT Raid Dairy 4

IT Raid Dairy 3

IT Raid Dairy 2

IT Raid Dairy 1

Share This Article