ಬೆಂಗಳೂರು: ಕಲಬುರಗಿಯ ಚಿತ್ತಾಪುರದಲ್ಲಿ (Chittapur) ಆರ್ಎಸ್ಎಸ್ ಪಥಸಂಚಲನ (RSS Route March) ಸಂಬಂಧ ಧಾರವಾಡ ಹೈಕೋರ್ಟ್ (Dharawada High Court) ಪೀಠ ಸೂಚನೆಯಂತೆ ಮತ್ತೊಂದು ಶಾಂತಿಸಭೆ ನಡೆಸಲಾಗಿದೆ. ಅಡೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ (Shashi Kiran Shetty) ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆರ್ಎಸ್ಎಸ್ ಮುಖಂಡರು ಪಾಲ್ಗೊಂಡು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಶಾಂತಿಸಭೆಯಲ್ಲಿ ಆರ್ಎಸ್ಎಸ್ನಿಂದ ಪ್ರಸ್ತಾವನೆಯನ್ನು ದಾಖಲಿಸಿಕೊಂಡಿರುವ ಎಜಿ ನವೆಂಬರ್ 7ಕ್ಕೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ.
ಗುರುವಾರದಿಂದ 5 ದಿನಗಳ ಕಾಲ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬೆಂಗಳೂರು ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ ಆಗಲಿದ್ದಾರೆ. ಇದನ್ನೂ ಓದಿ: ಪಿಯುಸಿ ಮಕ್ಕಳಿಗೂ ಇನ್ಮುಂದೆ ಮಧ್ಯಾಹ್ನದ ಬಿಸಿಯೂಟ?
ಆರ್ಎಸ್ಎಸ್ ಪ್ರಸ್ತಾವನೆ ಏನು?
ಇದೇ ತಿಂಗಳ 13 ಅಥವಾ 16 ರಂದು ಸಂಜೆ 3 ಗಂಟೆಯಿಂದ 6:30ರ ತನಕ ಪಥಸಂಚಲನಕ್ಕೆ ಅವಕಾಶ ನೀಡಿ. 3.1 ಕಿ.ಮೀ. ಪಥಸಂಚಲನ ಮಾಡಲಿದ್ದು 850 ಗಣವೇಷಧಾರಿಗಳು ಭಾಗಿಯಾಗುತ್ತಾರೆ. ಇದನ್ನೂ ಓದಿ: ಮೋದಿ ಜೊತೆ ಚಾಂಪಿಯನ್ನರು – ಸಹಿಹಾಕಿದ ಜೆರ್ಸಿ ಗಿಫ್ಟ್ ಕೊಟ್ಟ ಟೀಂ ಇಂಡಿಯಾ

