ನವದೆಹಲಿ: ಜನತಾ ಕರ್ಫ್ಯೂ ದಿನದಂದು ಮನೆಗಳ ಬಾಲ್ಕನಿಯಲ್ಲಿ ನಿಂತು ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯರಿಗೆ ಕೃತ್ಯಜ್ಞತೆ ಸಲ್ಲಿಸಿದ್ದ ಜನರು, ಈಗ ವೈದ್ಯರು ವಿರುದ್ಧವೇ ಮುಗಿ ಬಿದ್ದಿದ್ದಾರೆ. ಮನೆ ಬಾಡಿಗೆ ನೀಡಿದ್ದ ಮಾಲೀಕರ ಕೂಡಲೇ ಮನೆ ಖಾಲಿ ಮಾಡುವಂತೆ ಒತ್ತಡ ಹಾಕಿದ್ದಾರೆ.
ನವದೆಹಲಿಯಲ್ಲಿ ಈ ಘಟನೆ ನಡೆದಿದ್ದು, ಏಮ್ಸ್ ಆಸ್ಪತ್ರೆ ವೈದ್ಯರು ಮತ್ತು ನರ್ಸ್ ಗಳಿಗೆ ಮನೆ ಖಾಲಿ ಮಾಡುವಂತೆ ಒತ್ತಡ ಹಾಕುತ್ತಿದ್ದಾರೆ. ಕೊರೊನಾ ವೈರಸ್ ಶಂಕಿತರಿಗೆ ಏಮ್ಸ್ ಆಸ್ಪತ್ರೆಯಲ್ಲೂ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆ ನೀಡುತ್ತಿರುವ ವೈದ್ಯರ ಮೂಲಕ ಸೋಂಕು ಹರಡುವ ಭೀತಿಯಲ್ಲಿ ಮನೆ ಮಾಲೀಕರಿದ್ದಾರೆ.
Correction – Doctors at All India Institute Of Medical Sciences, Delhi claim of facing trouble. Doctor Amandeep Singh says, "Medical staff living on rent are often being asked to vacate their residences as landlords believe that they can spread #COVID19". pic.twitter.com/Vlqjh0Ud8N
— ANI (@ANI) March 24, 2020
ಪ್ರತಿನಿತ್ಯ ಸೋಂಕಿತರ ಮಧ್ಯೆಯೇ ವೈದ್ಯರು ಸೇವೆ ಸಲ್ಲಿಸುತ್ತಾರೆ. ಇವರು ಮನೆಗಳಿಗೆ ಬಂದಂತ ವೇಳೆ ಇವರ ಮೂಲಕ ಇತರರಿಗೂ ಕೊರೊನಾ ಸೋಂಕು ಹರಡಬಹುದು ಎಂಬುದು ಮನೆ ಮಾಲೀಕರು ಹಾಗೂ ಸ್ಥಳೀಯ ನಿವಾಸಿಗಳ ವಾದವಾಗಿದೆ. ನೆರೆ ಹೊರೆಯವರ ಒತ್ತಡದ ಹಿನ್ನೆಲೆ ವೈದ್ಯರು ಮತ್ತು ನರ್ಸ್ ಗಳ ಮೇಲೆ ಮನೆ ಮಾಲೀಕರ ಒತ್ತಡ ಹಾಕಿದ್ದು, ಮನೆ ಖಾಲಿ ಮಾಡಲು ಸೂಚಿಸಿದ್ದರು. ಇದರಿಂದ ರೋಸಿ ಹೋಗಿದ್ದು ವೈದ್ಯರು ಗೃಹ ಸಚಿವ ಅಮಿತ್ ಶಾ ಗೆ ಪತ್ರ ಬರೆದು ತಮ್ಮ ಅಳಲು ತೋಡಿಕೊಂಡಿದ್ದರು.
ವೈದ್ಯರು ಪತ್ರಕ್ಕೆ ಸ್ಪಂದಿಸಿರುವ ಗೃಹ ಸಚಿವ ಅಮಿತ್ ಶಾ, ಮನೆ ಮಾಲೀಕರ ವಿರುದ್ಧ ಕ್ರಮಕ್ಕೆ ದೆಹಲಿ ಪೊಲೀಸ್ ಕಮಿಷನರ್ ಗೆ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಮನೆ ಖಾಲಿ ಮಾಡುವಂತೆ ವೈದ್ಯರ ಮೇಲೆ ಒತ್ತಡ ಹಾಕಬಾರದು. ಒಂದು ವೇಳೆ ಒತ್ತಡ ಹಾಕಿದ್ದಲ್ಲಿ ಡಾಕ್ಟರ್ ಗಳ ದೂರು ಆಧರಿಸಿ ಮನೆ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಅಮಿತ್ ಶಾ ಸೂಚಿಸಿದ್ದಾರೆ.