Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಬತ್ತುತ್ತಿದೆ ನೇತ್ರಾವತಿ ಒಡಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನರಲ್ಲಿ ಆತಂಕ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | ಬತ್ತುತ್ತಿದೆ ನೇತ್ರಾವತಿ ಒಡಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನರಲ್ಲಿ ಆತಂಕ!

Districts

ಬತ್ತುತ್ತಿದೆ ನೇತ್ರಾವತಿ ಒಡಲು: ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನರಲ್ಲಿ ಆತಂಕ!

Public TV
Last updated: May 19, 2019 11:45 am
Public TV
Share
3 Min Read
Ettinahole Project
SHARE

-ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿಯೂ ನೀರಿಗೆ ಹಾಹಾಕಾರ
-ಬರ ಜಿಲ್ಲೆಯ ಜನತೆಗೆ ಆಘಾತ ನೀಡಿದ ಪ್ರಕಟಣೆ

-ಮುದುಕೃಷ್ಣ
ಚಿಕ್ಕಬಳ್ಳಾಪುರ : ಶ್ರೀ ಧರ್ಮಸ್ಥಳದ ಮಂಜುನಾಥನ ಸನ್ನಿಧಾನದಲ್ಲೇ ನೀರಿಗೆ ಬರ ಬಂದಿದ್ದು, ಮಂಜುನಾಥ ಸ್ವಾಮಿಯನ್ನೇ ನಂಬಿದ್ದ ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಈಗ ಎಲ್ಲಿಲ್ಲದ ಭಯ ಶುರುವಾಗಿದೆ.

Ettinahole Project 4

ಇಷ್ಟು ದಿನ ಇಂದಲ್ಲ ನಾಳೆ ಎತ್ತಿನಹೊಳೆಯ ನೀರು ಬರಬಹುದು ಅಂತ ಆಶಾವಾದದಿಂದ ಇದ್ದ ಕೋಲಾರ-ಚಿಕ್ಕಬಳ್ಳಾಪುರ ಜನತೆಗೆ ಈಗ ಎಲ್ಲಿಲ್ಲದ ಆತಂಕ ಶುರುವಾಗಿದೆ. ಕಷ್ಟ ಕಾಲಕ್ಕೆ ಶ್ರೀ ಧರ್ಮಸ್ಥಳದ ಶ್ರೀ ಮಂಜುನಾಥ ತಮ್ಮನ್ನ ಕೈ ಹಿಡಿಯಬಹುದು ಅಂತ ಬಲವಾಗಿ ನಂಬಿದ್ದರು. ಈಗ ಮಂಜುನಾಥನ ಸನ್ನಿಧಾನದಲ್ಲೇ ನೀರಿಗೆ ಬರ ಬಂದಿರೋದು ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯ ಎತ್ತಿನಹೊಳೆ ಎಂಬ ಕನಸಿನ ಆಶಾಗೋಪುರ ಕಳಚಿ ಬೀಳುವಂತೆ ಮಾಡಿದೆ.

ಕರಾವಳಿ ಭಾಗದ ನೇತ್ರಾವತಿ ನದಿಯ ಎತ್ತಿನಹೊಳೆಯ ನೀರನ್ನ ತಂದು ಕೋಲಾರ-ಚಿಕ್ಕಬಳ್ಳಾಪುರ ಸೇರಿದಂತೆ ಬರಪೀಡಿತ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಕೊಡ್ತೀವಿ ಅಂತ ಸರ್ಕಾರ ಎತ್ತಿನಹೊಳೆ ಯೋಜನೆಯನ್ನ ಆರಂಭಿಸಿದೆ. ಈಗಾಗಲೇ 13,000 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಮಗಾರಿ ಅರಂಭವಾಗಿದ್ದರೂ. ನಿರೀಕ್ಷಿತ ಮಟ್ಟದಲ್ಲಿ ಕಾಮಗಾರಿ ನಡೆಯುತ್ತಿಲ್ಲ. ಎತ್ತಿನಹೊಳೆ ಹೆಸರಲ್ಲಿ ಪರ-ವಿರೋಧದ ಹೋರಾಟಗಳು ಯೋಜನೆ ಅರಂಭದಿಂದಲೂ ನಡೆದುಕೊಂಡೇ ಬರುತ್ತಿವೆ.

Ettinahole Project 1

ಇದೆಲ್ಲದರ ನಡುವೆ ಎತ್ತಿನಹೊಳೆ ಯೋಜನೆಯ ರೂವಾರಿ ಕಾಂಗ್ರೆಸ್ ಮುಖಂಡ ಎಂ. ವೀರಪ್ಪ ಮೊಯ್ಲಿ ಇಗೋ ಬಂತು, ಅಗೋ ಬಂತು ಅಂತ ಎರಡು ಬಾರಿ ಸಂಸದರಾಗಿ ಮೂರನೇ ಬಾರಿ ಗೆಲ್ಲುವ ವಿಶ್ವಾಸದಲ್ಲಿಯೂ ಇದ್ದಾರೆ. ಅದರೆ ಪರ ವಿರೋಧ ಏನೇ ಇದ್ರೂ ಇಂದಲ್ಲ ನಾಳೆ ನಮ್ಮ ಭಾಗಕ್ಕೆ ಕರಾವಳಿ ಭಾಗದ ನೇತ್ರಾವತಿ ನದಿಯ ಎತ್ತಿನಹೊಳೆ ನೀರು ಬಂದೇ ಬರುತ್ತೆ ಅಂತ ಎಲ್ಲೋ ಒಂದು ಕಡೆ ಆತ್ಮವಿಶ್ವಾಸದಿಂದ ಇದ್ದ ಜನತೆಗೆ ಧರ್ಮಸ್ಥಳದ ಧರ್ಮಾಧಿಕಾರಿಯವರ ಪ್ರಕಟಣೆ ಅಘಾತ ಉಂಟುಮಾಡಿದೆ.

Ettinahole Project 5

ನೇತ್ರಾವತಿ ನದಿಯ ಒಡಲು ಬತ್ತಿ ಹೋದ್ರೇ ಅಲ್ಲಿನ ಎತ್ತಿನಹೊಳೆಯ ನೀರು ಕೋಲಾರ-ಚಿಕ್ಕಬಳ್ಳಾಪುರ ಭಾಗಕ್ಕೆ ಹರಿಯುವುದೇ ಸಂಶಯದ ಪ್ರಶ್ನೆ ಈಗ ಅವಳಿ ಜಿಲ್ಲೆಗಳ ಜನರಲ್ಲಿ ಮನೆ ಮಾಡುವಂತೆ ಮಾಡಿದೆ. ವಿರೇಂದ್ರ ಹೆಗೆಡೆಯವರ ಪ್ರಕಟಣೆ ಅದೆಷ್ಟೋ ಮಂದಿ ಭಕ್ತರಿಗೆ ಭಯ ತಂದಿದಿಯೋ ಇಲ್ಲವೋ ಕೋಲಾರ-ಚಿಕ್ಕಬಳ್ಳಾಪುರ ಜನರಿಗಿಂತೂ ಭಯ ತಂದಿದೆ. ಸತತ 8 ವರ್ಷಗಳಿಂದ ಬರದಿಂದ ಬಾಯಾರಿರೋ ಜನ ಮಂಜುನಾಥನ ಕರುಣೆಯಿಂದಾದಾರೂ ಕುಡಿಯುವ ನೀರು ಸಿಗಬಹುದು ಅನ್ನೋ ಭರವಸೆ ಹೊಂದಿದ್ದರು. ಆ ದೇವರಿಗೆ ಸಂಕಷ್ಟ ಬಂದೊದಗಿದ್ದು ಈ ಬಡಪಾಯಿಗಳ ಬದುಕಿಗೆ ಇನ್ಯಾರು ದಿಕ್ಕು ಅಂತ ಜನ ಚಿಂತೇಗೀಡಾಗುವಂತೆ ಮಾಡಿದೆ.

Ettinahole Project 8

ಯೋಜನೆಯಿಂದ ನಿರೀಕ್ಷಿತ 24 ಟಿಎಂಸಿ ಪ್ರಮಾಣ ನೀರು ಸಿಗುವುದಿಲ್ಲ ಅನ್ನೋ ಕೂಗು ಹೋರಾಟಗಾರರು ಹಾಗೂ ಪರಿಸರವಾದಿಗಳಿಂದ ಕೇಳಿ ಬರುತ್ತಲೇ ಇತ್ತು. ಅದ್ರೆ ನೀರು ಸಿಕ್ಕೆ ಸಿಗುತ್ತೆ ಅಂತ ಸಮರ್ಥನೆ ಮಾಡಿಕೊಳ್ಳುತ್ತಿದ್ದ ಎರಡೇ ವರ್ಷದಲ್ಲಿ ನೀರು ಕೊಡ್ತೀವಿ ಅಂತ ಆರು ವರ್ಷಗಳ ಕಾಲ ತಳ್ಳಿಕೊಂಡೆ ಬಂತು. ಈಗ ಧರ್ಮಸ್ಥಳದಲ್ಲೇ ನೀರಿನ ಬರ ಅಭಾವ ಪರಿಸ್ಥಿತಿ ಪರಿಸರವಾದಿಗಳು ಹೋರಾಟಗಾರರ ಮಾತು ಸತ್ಯ ಎಂಬಂತಾಗುತ್ತಿದೆ.

ವೈರಲ್ ಆದ ಪ್ರಕಟಣೆ:
ಕರಾವಳಿ ಭಾಗದ ಹಾಗೂ ಮಂಜುನಾಥನ ಭಕ್ತರಲ್ಲಿ ಈ ಪ್ರಕಟಣೆ ಅತಂಕ ತಂದಿತೋ ಇಲ್ಲವೋ ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರಿಗಂತೂ ಅತಂಕ ತಂದಿತ್ತು. ಸೋಶಿಯಲ್ ಮೀಡಿಯಾದ ವಾಟ್ಸಾಫ್-ಫೇಸ್ ಬುಕ್ ಎಲ್ಲೂ ನೋಡಿದರೂ ಇದೇ ಪ್ರಕಟಣೆ. ಪ್ರತಿಯೊಬ್ಬರೂ ತಮ್ಮ ತಮ್ಮ ವಾಟ್ಸಾಫ್ ಖಾತೆಗಳಿಗೆ ಸ್ಟೇಟಸ್ ಅಗಿ ಪ್ರಕಟಣೆ ಪೋಸ್ಟ್ ಮಾಡಿಕೊಂಡರು. ಇರೋ ಬರೋ ಗ್ರೂಪ್ ಗಳೆಲ್ಲಾ ಇದೇ ಪ್ರಕಟಣೆ ಹರಿಬಿಟ್ಟರು. ಫೇಸ್ ಬುಕ್‍ನಲ್ಲಿ ಸಹ ಇದೇ ಪ್ರಕಟಣೆಯ ಪೋಸ್ಟ್ ಗಳು. ಹೀಗಾಗಿ ಕರಾವಳಿ ಭಾಗದ ಜನರಿಗಿಂತೂ ಇದು ಕೋಲಾರ-ಚಿಕ್ಕಬಳ್ಳಾಪುರ ಭಾಗದ ಜನರನ್ನೇ ಬೆಚ್ಚಿ ಬೀಳುವಂತೆ ಮಾಡಿತ್ತು.

Ettinahole Project 3

ಮೊಯ್ಲಿ ವಿರುದ್ಧ ಅಸಮಧಾನ:
ಧರ್ಮಸ್ಥಳದಲ್ಲೇ ನೀರಿಗೆ ಬರ ಪ್ರಕಟಣೆ ಕಂಡ ಜೆಡಿಎಸ್ ಪಕ್ಷದ ಮಾಜಿ ಶಾಸಕ ಹಾಗೂ ಮುಖಂಡರೇ ಯೋಜನೆ ವಿರುದ್ಧ ಅಪಸ್ವರ ಎತ್ತಿದ್ದು ಎತ್ತಿನಹೊಳೆ ನೀರು ಕನಸು ಅಂತ ವೀರಪ್ಪಮೊಯ್ಲಿ ವಿರುದ್ದವೇ ಅಸಮಾಧಾನ ಹೊರಹಾಕಿದ್ದಾರೆ. ಮೊದಲಿನಿಂದಲೂ ನಾವು ಹೇಳುತ್ತಿದ್ದೀವಿ ನೀರು ಬರಲ್ಲ ಅಂತ ಈಗ ಸತ್ಯ ಅಗುತ್ತಿದೆ. ಇನ್ನಾದ್ರೂ ಬೇರೆ ಮೂಲಗಳಿಂದ ನೀರು ಹುಡುಕುವ ಪ್ರಯತ್ನ ಮಾಡಬೇಕು. ಇಲ್ಲವಾದಲ್ಲಿ ಇನ್ನೆರೆಡು ವರ್ಷಗಳಲ್ಲಿ ಜನ ನೀರಿಗಾಗಿ ಬಡಿದಾಡಿಕೊಂಡು ಸಾಯಬೇಕಾಗುತ್ತೆ ಆಕ್ರೋಶ ಹೊರಹಾಕುತ್ತಿದ್ದಾರೆ.

https://www.youtube.com/watch?v=z0npOVG11L4

TAGGED:chikkaballapurdharmasthaladroughtEttina hole ProjectKolarNetravati RiverrainWestern Hillsಎತ್ತಿನ ಹೊಳೆ ಯೋಜನೆಕೋಲಾರಚಿಕ್ಕಬಳ್ಳಾಪುರಧರ್ಮಸ್ಥಳನೇತ್ರಾವತಿ ನದಿ
Share This Article
Facebook Whatsapp Whatsapp Telegram

Cinema news

nikhil kumaraswamy actor chetan
ಡಾ.ರಾಜ್‌ಕುಮಾರ್ ಎಂದರೆ ಆರು ಕೋಟಿ ಕನ್ನಡಿಗರ ಭಾವನೆ: ನಟ ಚೇತನ್‌ಗೆ ನಿಖಿಲ್ ಕುಮಾರಸ್ವಾಮಿ ಕಿಡಿ
Bengaluru City Cinema Latest Sandalwood Top Stories
Sanjay Dutt
ಸರ್ಸೆ ಸೆರಗ ಸರ್ಸೆ ಹಾಡಿನ ವಿವಾದ – ಕ್ಷಮೆಯಾಚಿಸಿದ ಸಂಜಯ್ ದತ್, ಬುಡಕಟ್ಟು ಜನಾಂಗದ 50 ಹುಡುಗಿಯರ ಶಿಕ್ಷಣಕ್ಕೆ ಹಣದ ಭರವಸೆ
Bollywood Cinema Latest National Sandalwood Top Stories
ChetanKumar Ahimsa
ರಾಜ್‌ಕುಮಾರ್‌ ಸಮಾಧಿ ಬಗ್ಗೆ ವಿವಾದಾತ್ಮಕ ಪೋಸ್ಟ್‌ – ಅಭಿಮಾನಿಗಳು ಮುತ್ತಿಗೆ ಹಾಕುತ್ತಿದ್ದಂತೆ ಕ್ಷಮೆಯಾಚಿಸಿದ ಚೇತನ್‌
Cinema Karnataka Latest Top Stories
chetan 13 5
ರಾಜ್‌ಕುಮಾರ್‌ ಸಮಾಧಿಗೆ 2.5 ಎಕರೆ ಜಾಗ ನೀಡಿದ್ದು ಸರಿಯೇ? – ನಟ‌ ಚೇತನ್ ವಿರುದ್ಧ ಡಾಕ್ಟರ್ ರಾಜ್‌ ಅಭಿಮಾನಿಗಳಿಂದ ದೂರು
Bengaluru City Cinema Latest Sandalwood Top Stories

You Might Also Like

ಸಾಂದರ್ಭಿಕ ಚಿತ್ರ
Districts

ಯಾದಗಿರಿಯಲ್ಲಿ ಸಿಡಿಲು ಬಡಿದು 60 ಕುರಿಗಳು ಸಾವು

Public TV
By Public TV
3 minutes ago
Amravati 2.0 In Kolhapur Man 22 Sexually Exploits Women In Maharashtra
Crime

ಮತ್ತೊಂದು `ಮಹಾʼ ಲೈಂಗಿಕ ದೌರ್ಜನ್ಯ ಪ್ರಕರಣ – 350 ಅಶ್ಲೀಲ ವಿಡಿಯೋ ಪತ್ತೆ, ಕಾಮುಕ ಅಂದರ್‌

Public TV
By Public TV
13 minutes ago
WhatsApp
Court

ಡಿಜಿಟಲ್ ಅರೆಸ್ಟ್ ತೊಡಗಿದ್ದ 9,400 ವಾಟ್ಸಪ್‌ ಖಾತೆಗಳು ಡಿಲೀಟ್‌

Public TV
By Public TV
19 minutes ago
siddaramaiah dk shivakumar car
Bengaluru City

ಒಂದೇ ಕಾರ್‌ನಲ್ಲಿ ಸಿಎಂ-ಡಿಸಿಎಂ ಪ್ರಯಾಣ; ಇಬ್ಬರು ನಾಯಕರಿಂದ ಅಚ್ಚರಿ ನಡೆ

Public TV
By Public TV
40 minutes ago
SN Narayanaswamy Bangarpet MLA
Bengaluru City

ಮೇ 15ರೊಳಗೆ ಸಂಪುಟ ಪುನರ್ ರಚನೆಯ ಸುದ್ದಿ ಸಿಗಲಿದೆ: ಬಂಗಾರಪೇಟೆ ನಾರಾಯಣಸ್ವಾಮಿ

Public TV
By Public TV
59 minutes ago
Madhu Bangarappa 1
Bagalkot

SSLC ಪರೀಕ್ಷೆಯಲ್ಲಿ 45 ಸಾವಿರ ವಿದ್ಯಾರ್ಥಿಗಳು ಫೇಲ್: ಮಧು ಬಂಗಾರಪ್ಪ

Public TV
By Public TV
59 minutes ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?