Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಬೆಂಗಳೂರಿಗರಿಗೆ ನೇಪಾಳಿ ಕಳ್ಳರ ಕಂಟಕ – ಮನೆಗೆಲಸ, ಸೆಕ್ಯೂರಿಟಿ ರೂಪದಲ್ಲಿ ಎಂಟ್ರಿ

Public TV
Last updated: November 11, 2024 11:23 am
Public TV
Share
3 Min Read
Nepal Theft
SHARE

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ (Silicon City) ನೇಪಾಳಿ ಕಳ್ಳರ ಕಟಂಕ ಹೆಚ್ಚಾಗುತ್ತಿದ್ದು, ಶ್ರೀಮಂತರ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಕಳ್ಳತನಕ್ಕಿಳಿದಿದ್ದಾರೆ.

ಸಭ್ಯರು, ಮುಗ್ಧರಂತೆ ಮನೆಗೆಲಸಕ್ಕೆ ಸೇರಿಕೊಳ್ಳುವ ನೇಪಾಳಿಗರು ಮನೆಯ ಸಂಪೂರ್ಣ ಮಾಹಿತಿ ತಿಳಿದು ಉಂಡ ಮನೆಗೆ ಕನ್ನ ಹಾಕುತ್ತಾರೆ. ಸೆಕ್ಯೂರಿಟಿ, ಮನೆಗೆಲಸ ಎಂದು ದಂಪತಿ ಜೊತೆಯಾಗಿ ಸೇರಿ ದರೋಡೆ ಮಾಡುತ್ತಾರೆ.

ಒಂದಲ್ಲ, ಎರಡಲ್ಲ ಇಲ್ಲಿಯವರೆಗೆ ಸಾಲುಸಾಲು ಕೇಸ್‌ಗಳು ವರದಿಯಾಗಿವೆ. ಮನೆಗೆಲಸ, ಸೆಕ್ಯೂರಿಟಿ ಕೆಲಸಗಳನ್ನೇ ಇವರು ಮುಖ್ಯ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಮನೆ, ಫ್ಲ್ಯಾಟ್‌ಗಳಲ್ಲಿ ಯಾರು ಇಲ್ಲದ ಸಮಯ ನೋಡಿ ಯೋಜನೆ ಹಾಕಿ, ಬಳಿಕ ಕಾರ್ಯರೂಪಕ್ಕೆ ತರುವ ಚಾಲಾಕಿ ಕಳ್ಳರಾಗಿದ್ದಾರೆ.ಇದನ್ನೂ ಓದಿ: ಉಕ್ರೇನ್‌ನಲ್ಲಿ ಯುದ್ಧವನ್ನು ಉಲ್ಬಣಗೊಳಿಸಬೇಡಿ: ಪುಟಿನ್‌ಗೆ ಕರೆ ಮಾಡಿ ಮಾತಾಡಿದ ಟ್ರಂಪ್‌

ಇಲ್ಲಿಯವರೆಗೆ ನೇಪಾಳಿ ಕಳ್ಳರ ಮೇಲೆ 6 ಕೇಸ್‌ಗಳು ದಾಖಲು:

1) 2021ರ ಏಪ್ರಿಲ್‌ನಲ್ಲಿ ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಆರ್ಮಿ ಆಫೀಸರ್ ಮನೆಗಳ್ಳತನ ವಾಗಿತ್ತು. ಪಕ್ಕದ ಅಪಾರ್ಟ್ಮೆಂಟ್‌ನಲ್ಲಿ ಸೆಕ್ಯೂರಿಟಿ ಗಾರ್ಡ್ಗಳಾಗಿದ್ದ ನಾಲ್ವರು ನೇಪಾಳಿಗರು ಸೇರಿ ಕಳ್ಳತನಕ್ಕೆ ಹೊಂಚು ಹಾಕಿದ್ದರು. ಕಳ್ಳತನ ಮಾಡಿ 70 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಹಣಗಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳನ್ನು ನೇಪಾಳಕ್ಕೆ ಪರಾರಿಯಾಗುತ್ತಿದ್ದ ಮಾರ್ಗದಲ್ಲಿ ಬಂಧಿಸಿದ್ದರು.

2) 2021ರ ಡಿಸೆಂಬರ್‌ನಲ್ಲಿ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉದ್ಯಮಿ ಮನೆಯಲ್ಲಿ ಕಳ್ಳತನವಾಗಿತ್ತು. ಅಪಾರ್ಟ್ಮೆಂಟ್‌ನಲ್ಲಿ ಸೆಕ್ಯೂರಿಟಿಯಾಗಿದ್ದ ನಾಲ್ವರು ನೇಪಾಳಿಗಳು ಕೃತ್ಯ ಎಸಗಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಆಂಧ್ರ ಮೂಲದ ಉದ್ಯಮಿ ಪ್ಲ್ಯಾಟ್ ನಲ್ಲಿ 50 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಗದು ಕಳ್ಳತನ ಮಾಡಿದ್ದರು. ಪೊಲೀಸರು ಆರೋಪಿಗಳನ್ನು ನೇಪಾಳಕ್ಕೆ ಪರಾರಿಯಾಗುವ ಮುನ್ನವೇ ಬಂಧಿಸಿದ್ದರು.

3) 2023 ನವೆಂಬರ್‌ನಲ್ಲಿ ಮಹಾಲಕ್ಷ್ಮಿ ಲೇಔಟ್‌ನ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹೋದರ ಭ್ರಮರೇಶ್ ಮನೆಯಲ್ಲಿ ಮನೆಗಳ್ಳತನವಾಗಿತ್ತು. ಭ್ರಮರೇಶ್ ಪಕ್ಕದ ಮನೆಯಲ್ಲಿ ಕೆಲಸಕ್ಕಿದ್ದ ಕೆಲ ಆರೋಪಿಗಳು ಕಳ್ಳತನ ಮಾಡಿದ್ದರು. ಭ್ರಮರೇಶ್ ಕುಟುಂಬ ವಿದೇಶಕ್ಕೆ ಹೋಗಿದ್ದಾಗ 7 ಜನರು ಕೃತ್ಯ ಎಸಗಿದ್ದು, 1.53 ಕೋಟಿ ಮೌಲ್ಯದ ಚಿನ್ನಾಭರಣ, ನಗದು ಕದ್ದಿದ್ದರು.

4) 2024 ಏಪ್ರಿಲ್‌ನಲ್ಲಿ ಸಂಜಯ್ ನಗರದಲ್ಲಿರುವ ಮಾಜಿ ಮೇಯರ್ ನಾರಾಯಣ ಸ್ವಾಮಿ ಮನೆ ದರೋಡೆಯಾಗಿತ್ತು. ಅವರು ಚುನಾವಣಾ ಪ್ರಚಾರಕ್ಕೆ ಹೋಗಿದ್ದಾಗ ಅದೇ ಮನೆಯ ಸೆಕ್ಯೂರಿಟಿ ಗಾರ್ಡ್ ಆಗಿದ್ದ ವ್ಯಕ್ತಿ, ತನ್ನ ಸಹಚರನೊಂದಿಗೆ ಸೇರಿ ದರೋಡೆ ಮಾಡಿದ್ದ. 1.30 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ದರೋಡೆಯಾಗಿತ್ತು. ಇದನ್ನು ಕೂಡ ಭ್ರಮರೇಶ್ ಮನೆ ದೋಚಿದ್ದ ಅಸಾಮಿಯೇ ಮಾಡಿದ್ದ. ಆದರೆ ಜೈಲು ಸೇರಿದ 6 ತಿಂಗಳಲ್ಲಿ ಜಾಮೀನು ಪಡೆದು ನಾರಾಯಣಸ್ವಾಮಿ ಮನೆ ಕೆಲಸಕ್ಕೆ ಸೇರಿದ್ದ. ಪೊಲೀಸರು ಹಿಡಿಯುವ ಮುನ್ನವೇ ಇಬ್ಬರು ನೇಪಾಳ ಸೇರಿದ್ದರು. ಆದರೆ ಪೊಲೀಸರು ನೇಪಾಳಕ್ಕೆ ತಲುಪಿ ಆರೋಪಿ ಪತ್ತೆ ಮಾಡಿದರೂ ಏನು ಪ್ರಯೋಜನವಾಗಿರಲಿಲ್ಲ.ಇದನ್ನೂ ಓದಿ:  ಕಾಶ್ಮೀರ್‌ದ ಕಿಶ್ತ್ವಾರ್ ಎನ್‌ಕೌಂಟರ್‌ನಲ್ಲಿ ಓರ್ವ ಸೇನಾಧಿಕಾರಿ ಹುತಾತ್ಮ: ಮೂವರಿಗೆ ಗಾಯ

5) ವಾರದ ಹಿಂದೆ ಜಯನಗರದಲ್ಲಿ ಸಂಪಿಗೆ ಥಿಯೇಟರ್ ಓನರ್ ಮನೆಯಲ್ಲಿ ದರೋಡೆಯಾಗಿತ್ತು. ಮನೆಯಲ್ಲಿ ಕೆಲಸಕ್ಕಿದ್ದ ನೇಪಾಳಿ ದಂಪತಿ ಮನೆಯಲ್ಲಿ ಬೇರೆ ಯಾರು ಇಲ್ಲದಾಗ ಮಾಲೀಕರನ್ನೇ ಕಟ್ಟಿಹಾಕಿ 38 ಲಕ್ಷ ಮೌಲ್ಯದ 1 ಕೆಜಿ ಚಿನ್ನಾಭರಣ, 1.5 ಲಕ್ಷ ರೂ. ನಗದು ದರೋಡೆ ಮಾಡಿದ್ದರು. ಬಳಿಕ ಅವರನ್ನು ಬಂಧಿಸಲಾಯಿತು.

6) ವಿಜಯನಗರದಲ್ಲಿ ಜ್ಯುವೆಲ್ಲರಿ ಶಾಪ್ ಮಾಲೀಕರ ಮನೆ ದರೋಡೆ ಮಾಡಿ, ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಚಿನ್ನಾಭರಣ ಜೊತೆ 40 ಲಕ್ಷ ರೂ. ನಗದು ದೋಚಿಕೊಂಡು ಹೋಗಿದ್ದರು. ಮನೆ ಮಾಲೀಕರು ಕುಟುಂಬ ಸಮೇತ ಗುಜರಾತ್‌ಗೆ ಹೋದಾಗ ಜ್ಯುವೆಲ್ಲರಿ ಶಾಪ್ ಜೊತೆ ಮನೆ ಕೆಲಸಕ್ಕೂ ಇದ್ದ ದಂಪತಿ ಈ ಕೃತ್ಯ ಎಸಗಿದ್ದಾರೆ. ನಾಲ್ಕು ಜನರ ನೇಪಾಳಿ ಗ್ಯಾಂಗ್‌ನಿಂದ ದರೋಡೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಆರೋಪಿಗಳು ನೇಪಾಳಕ್ಕೆ ಪರಾರಿಯಾಗಿರುವ ಮಾಹಿತಿಯಿದ್ದು, ಈಗಾಗಲೇ ಪೊಲೀಸ್ ತಂಡ ನೇಪಾಳಕ್ಕೆ ತೆರಳಿದೆ.

ಇದೀಗ ನೇಪಾಳಿ ಕಳ್ಳರನ್ನು ಹಿಡಿಯುವುದೇ ಒಂದು ದೊಡ್ಡ ಸವಾಲಾಗಿದ್ದು, ಒಮ್ಮೆ ದರೋಡೆ ಮಾಡಿ ಬೆಂಗಳೂರು ಬಿಟ್ಟರೆ ನೇಪಾಳಿ ಗ್ಯಾಂಗ್ ಹಿಡಿಯುವುದು ಕಷ್ಟದ ಕೆಲಸ. ಅವರನ್ನು ನೇಪಾಳ ಸೇರುವ ಮುನ್ನವೇ ಹಿಡಿಯಬೇಕಾಗಿದೆ. ರಾಜತಾಂತ್ರಿಕ ಸಮಸ್ಯೆಯಿಂದಾಗಿ ಅವರು ಒಮ್ಮೆ ನೇಪಾಳಕ್ಕೆ ಹೋದರೆ ಅವರನ್ನು ಮತ್ತೆ ಬಂಧಿಸುವುದು ಕಷ್ಟ. ಇದನ್ನೇ ಬಂಡವಾಳವಾಗಿಸಿಕೊಂಡು ನೇಪಾಳಿಗರು ಕಳ್ಳತನಕ್ಕಿಳಿದಿದ್ದಾರೆ. ಪೊಲೀಸರು ದೇಶದೊಳಗೆ ಬಂಧನ ಮಾಡಲು ಶತಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ. ಬಂಧಿಸಿದರೂ ಜಾಮೀನು ಪಡೆದು ಮತ್ತೆ ಅದೇ ಕೆಲಸಕ್ಕಿಳಿಯುತ್ತಾರೆ. ಹೀಗಾಗಿ ನೇಪಾಳಿ ಕೆಲಸಗಾರರಿಂದ ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.ಇದನ್ನೂ ಓದಿ: ಭಾರತದ 51ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸಂಜೀವ್ ಖನ್ನಾ ಪ್ರಮಾಣ ವಚನ ಸ್ವೀಕಾರ

TAGGED:bengalurunepaltheft
Share This Article
Facebook Whatsapp Whatsapp Telegram

Cinema Updates

ramya 2
ರೇಣುಕಾಸ್ವಾಮಿಗೂ ಇವ್ರಿಗೂ ಏನ್ ವ್ಯತ್ಯಾಸ? – `ಡಿ’ ಬಾಸ್ ಫ್ಯಾನ್ಸ್ ವಿರುದ್ಧ ರಮ್ಯಾ ದೂರು
Bengaluru City Cinema Crime Latest Main Post Sandalwood
Nagalakshmi Chowdary
`ಡಿ’ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ – ರಮ್ಯಾ ದೂರು ಕೊಟ್ರೆ 7 ವರ್ಷ ಜೈಲು ಗ್ಯಾರಂಟಿ: ಮಹಿಳಾ ಆಯೋಗ
Bengaluru City Cinema Districts Karnataka Latest Top Stories
Ramya 5
`ಡಿ ಬಾಸ್‌’ ಮೇಲೆ ಗೌರವ ಇರೋರು ಯಾವುದಕ್ಕೂ ರಿಯಾಕ್ಟ್‌ ಮಾಡಬೇಡಿ: ಸೆಲೆಬ್ರಿಟಿಗಳಿಗೆ ಫ್ಯಾನ್ಸ್‌ ಪೇಜ್‌ನಲ್ಲಿ ಮನವಿ
Bengaluru City Cinema Latest Main Post Sandalwood
Olle Hugda Pratham ramya
`I Stand With Ramya’ – ಸ್ಯಾಂಡಲ್‌ವುಡ್ ಕ್ವೀನ್ ಬೆಂಬಲಕ್ಕೆ ನಿಂತ ಒಳ್ಳೆ ಹುಡ್ಗ ಪ್ರಥಮ್
Cinema Latest Sandalwood Top Stories
Ramya 4
ʻಡಿʼ ಫ್ಯಾನ್ಸ್‌ನಿಂದ ಅಶ್ಲೀಲ ಕಾಮೆಂಟ್ಸ್‌ – ರಮ್ಯಾ ದೂರು ಕೊಟ್ಟರೆ ಕಾನೂನು ಕ್ರಮ: ಪರಮೇಶ್ವರ್‌
Bengaluru City Cinema Districts Karnataka Latest Sandalwood

You Might Also Like

B Dayanand Police Commissioner
Bengaluru City

ಚಿನ್ನಸ್ವಾಮಿ ಕಾಲ್ತುಳಿತ ಕೇಸ್‌ – ನಾಲ್ವರು ಪೊಲೀಸ್‌ ಅಧಿಕಾರಿಗಳ ಅಮಾನತು ಆದೇಶ ರದ್ದು

Public TV
By Public TV
10 minutes ago
Sridharaswamy Subrahmanya Kshetra
Districts

ನಾಗರ ಪಂಚಮಿ ವಿಶೇಷ – ಶ್ರೀಧರಸ್ವಾಮಿಗಳು ಪ್ರತಿಷ್ಠಾಪಿಸಿದ ಸುಬ್ರಹ್ಮಣ್ಯ ಕ್ಷೇತ್ರ

Public TV
By Public TV
56 minutes ago
CHALUVARAYASWAMY
Bengaluru City

ಬಿಜೆಪಿಯವರಿಗೆ ಧಮ್ಮು-ತಾಕತಿದ್ರೆ ಕೇಂದ್ರದಿಂದ ಯೂರಿಯಾ ಕೊಡಿಸಲಿ – ಚಲುವರಾಯಸ್ವಾಮಿ

Public TV
By Public TV
1 hour ago
Divya Deshmukh
Latest

ಚೆಸ್‌ ವಿಶ್ವಕಪ್‌ | ಅನುಭವಿ ಕೊನೆರು ಹಂಪಿಗೆ ಸೋಲು, 19ರ ದಿವ್ಯಾ ದೇಶಮುಖ್‌ ಚಾಂಪಿಯನ್‌

Public TV
By Public TV
1 hour ago
JDS On Guarantee Schemes
Bengaluru City

ಮಜಾವಾದಿ ಸಿದ್ದರಾಮಯ್ಯ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿದ್ದೇ ಹೆಚ್ಚು – ಜೆಡಿಎಸ್

Public TV
By Public TV
2 hours ago
Sanjay Dutt
Bollywood

72 ಕೋಟಿ ಮೌಲ್ಯದ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದಿಟ್ಟ ಅಭಿಮಾನಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?