ನೆಲಮಂಗಲ: ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ಹಳ್ಳಿ ಜನರಲ್ಲಿ ಮತ್ತಷ್ಟು ಆಶಾ ಭಾವನೆ ತುಂಬಿದ್ದು, ಗ್ರಾಮದ ಹಳ್ಳಿಯ ಗರ್ಭಿಣಿಯರಿಗೆ ಸೀಮಂತ ಕಾರ್ಯ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಬರದಿ ಗ್ರಾಮದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಗರ್ಭಿಣಿ ಮಹಿಳೆಯರಿಗೆ ಸೀಮಂತ ಮಾಡುವ ಮೂಲಕ ನೆಲಮಂಗಲ ತಹಶಿಲ್ದಾರ್ ಮಂಜುನಾಥ್ ಎಲ್ಲರ ಗಮನ ಸೆಳೆದಿದ್ದಾರೆ. ಇವರ ಜೊತೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕಂದಾಯ ಇಲಾಖೆಯಿಂದ ಪೆÇೀಷಣ್ ಅಭಿಯಾನ ಸಹ ಕೈ ಜೋಡಿಸಿದ್ದು, ಸೀಮಂತ ಕಾರ್ಯಕ್ರಮವನ್ನು ಆರತಿ ಬೆಳಗಿ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗಿದೆ. ಇದನ್ನೂ ಓದಿ: ಪಾವಗಡ ಬಳಿಕ ಬೀದರ್ನಲ್ಲೂ ಖಾಸಗಿ ಬಸ್ ಪಲ್ಟಿ
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮೆರಗು ಬಂದಿದ್ದು, ತಹಶಿಲ್ದಾರ್ ಮಂಜುನಾಥ್ ಅವರ ಕಾರ್ಯ ಜನರ ಮೆಚ್ಚುಗೆಗೆ ಪಾತ್ರವಾಗಿ ಹಳ್ಳಿಯ ಜನರ ಅಹವಾಲು, ಕುಂದುಕೊರತೆಗಳನ್ನು ಹಾಗೂ ಸಮಸ್ಯೆಯನ್ನು ಬಗೆಯರಿಸುವಲ್ಲಿ ಮುಂದಾಗಿದ್ದಾರೆ.