ಬೆಂಗಳೂರು: ನಕ್ಸಲರು (Naxalites) ಶರಣಾಗತಿಯಾಗಲೂ ನಾನೇ ಕರೆ ಕೊಟ್ಟಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅವರು ಸುದ್ದಿಗಾರರರೊಂದಿಗೆ ಮಾತನಾಡಿದರು. ಈ ವೇಳೆ ನಕ್ಸಲರು ಶರಣಾಗತಿಯಾಗುತ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ.
ನಕ್ಸಲರು ಶರಣಾಗಬೇಕು ಎಂದು ನಾನೇ ಕರೆ ಕೊಟ್ಡಿದ್ದೆ. ಮುಖ್ಯವಾಹಿನಿಗೆ ಬರುವಂತೆ ನಾನೇ ಕರೆ ಕೊಟ್ಟಿದ್ದೆ. ಅವರು ಶರಣಾಗೋ ಬಗ್ಗೆ ಮಾಹಿತಿ ಇಲ್ಲ. ಆದರೆ ಅವರ ಮನಸ್ಸು ಪರಿವರ್ತನೆ ಆಗಬಹುದು ಎಂದು ಅಂದುಕೊಂಡಿದ್ದೇನೆ. ಈ ಮೂಲಕ ನಕ್ಸಲರು ಶರಣಾಗತಿಯನ್ನ ಪರೋಕ್ಷವಾಗಿ ಅವರು ಸ್ವಾಗತಿಸಿದ್ದಾರೆ.