ವಧುವಿನ ಕೈ ಹಿಡಿಯುವಾಗ ಚಿಕ್ಕಮಗಳೂರಿನ ಕಲ್ಯಾಣ ಮಂಟಪದಲ್ಲಿ ಮೊಳಗಿತು ರಾಷ್ಟ್ರಗೀತೆ

Public TV
1 Min Read
ckm marriage 1

ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವದಂತಹ ರಾಷ್ಟ್ರೀಯ ಹಬ್ಬಗಳಲ್ಲಿ ರಾಷ್ಟ್ರಗೀತೆ ಹಾಡೋದು ಸಂಪ್ರದಾಯ. ಇತ್ತೀಚಿಗೆ ಇತ್ತೀಚೆಗೆ ಸುಪ್ರೀಂಕೋರ್ಟ್ ಆದೇಶದನ್ವಯ ಸಿನಿಮಾ ಥಿಯೇಟರ್‍ಗಳಲ್ಲೂ ಸಿನಿಮಾ ಆರಂಭದ ಮೊದಲು ರಾಷ್ಟ್ರಗೀತೆ ಮೊಳಗುತ್ತಿದೆ. ಆದರೆ ಚಿಕ್ಕಮಗಳೂರಿನಲ್ಲಿ ಮದುವೆಯಲ್ಲಿ ರಾಷ್ಟ್ರಗೀತೆ ಮೊಳಗಿದೆ.

ckm marriage 3

ಭಾನುವಾರ ನಗರದ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ಶ್ರೀನಿವಾಸ್‍ರಾಜೇ ಅರಸ್ ಮತ್ತು ಎಂ.ಸಂಹಿತ ಅರಸ್ ಎಂಬವರ ಮದುವೆ ನಡೆಯುತ್ತಿತ್ತು. ಅನಿವಾಸಿ ಭಾರತೀಯ ಹಾಗೂ ಅಪ್ಪಟ ದೇಶಪ್ರೇಮಿಯಾಗಿರುವ ಶ್ರೀನಿವಾಸ್ ಅವರು ತಮ್ಮ ಮದುವೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ckm marriage 1

ಎಂಜಿನಿಯರ್ ಪಧವೀಧರರಾಗಿರುವ ಶ್ರೀನಿವಾಸ್ ಕಳೆದ ಏಳು ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಶ್ರೀನಿವಾಸ್ ವಧುವಿನ ಕೈ ಹಿಡಿಯುವಾಗ ಕಲ್ಯಾಣ ಮಂಟಪದಲ್ಲಿ ರಾಷ್ಟ್ರಗೀತೆ ಹಾಡಿಸಿದ್ದಾರೆ. ಕಲ್ಯಾಣ ಮಂಟಪದಲ್ಲಿ ರಾಷ್ಟ್ರಗೀತೆ ಮೊಳಗುತ್ತಿದ್ದಂತೆ ಜನರೆಲ್ಲರೂ ಎದ್ದುನಿಂತು ಗೌರವ ಸಲ್ಲಿಸಿದ್ದಾರೆ.

ckm marriage 2

ckm marriage 2

ckm marriage 4

ckm marriage kalyana mantapa 2

ckm marriage kalyana mantapa 3

ckm marriage kalyana mantapa 1

 

Share This Article