ಬೆಂಗಳೂರು: ಇಡೀ ದೇಶದಲ್ಲಿ ವೋಟ್ ಚೋರಿ ಆಗಿರೋದು ಸತ್ಯ. ನರೇಂದ್ರ ಮೋದಿ (Narendra Modi) ಅಕ್ರಮ ಮಾಡಿಯೇ ಚುನಾವಣೆಗಳನ್ನು ಗೆದ್ದಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ (Santosh Lad) ಆರೋಪ ಮಾಡಿದ್ದಾರೆ.
ರಾಹುಲ್ ಗಾಂಧಿ ಆರೋಪದ ಬಗ್ಗೆ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಮತಗಳ್ಳತನ ಆಗಿದೆ. ಆಳಂದ ಚುನಾವಣೆ ಆಗಿ 5-6 ವರ್ಷ ಆಯ್ತು. ಎಸ್ಐಟಿ ಅವರು ಎಲೆಕ್ಷನ್ ಕಮಿಷನ್ಗೆ ಪತ್ರ ಬರೆದಿದ್ದಾರೆ, ಆದರೆ ಇದಕ್ಕೆ ಉತ್ತರ ಕೊಟ್ಟಿಲ್ಲ. ಮೇಲ್ನೋಟದಲ್ಲಿ ಇದು ಸತ್ಯ ಆಗಿದೆ. ಕರ್ನಾಟಕ ಮಾತ್ರ ಅಲ್ಲ ಒರಿಸ್ಸಾ, ಮಹಾರಾಷ್ಟ್ರದಲ್ಲಿ ಮತಗಳ್ಳತನ ಆಗಿದೆ. ಬಿಹಾರದಲ್ಲಿ 3 ಲಕ್ಷ ಮನೆಗೆ 0 ನಂಬರ್ ಕೊಟ್ಟಿದ್ದಾರೆ. ಮೋದಿ ಹೀಗೆ ಅಕ್ರಮ ಮಾಡಿಯೇ ಚುನಾವಣೆಗಳನ್ನ ಗೆದ್ದಿರೋದು ಎಂದು ದೂರಿದ್ದಾರೆ.ಇದನ್ನೂ ಓದಿ: ಇಡೀ ದೇಶದಲ್ಲಿ ಮತಗಳ್ಳತನ ಆಗಿದೆ – ರಾಮಲಿಂಗಾರೆಡ್ಡಿ
ರಾಜ್ಯದಲ್ಲಿ ಮತಪಟ್ಟಿ ಪರಿಷ್ಕರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪರಿಷ್ಕರಣೆ ಮಾಡಲಿ ಯಾರು ಬೇಡ ಅಂದರು. ಬಿಹಾರ ತರಹ ಆಗುವ ಆತಂಕ ಇದೆ. ಎಲೆಕ್ಷನ್ ಕಮಿಷನರ್ ಅವರನ್ನ ಹೇಗೆ ನೇಮಕ ಆಗಬೇಕು ಅಂತ ಇತ್ತು. ಬಿಜೆಪಿಯವರು ಆ ನಿಯಮವನ್ನೇ ಬದಲಾವಣೆ ಮಾಡಿದರು. ಎಲೆಕ್ಷನ್ ಕಮಿಷನ್ ರಾಹುಲ್ ಗಾಂಧಿ ಮಾಡಿರುವ ಆರೋಪಕ್ಕೆ ಸರಿಯಾಗಿ ಉತ್ತರ ಕೊಟ್ಟಿಲ್ಲ. ಇವರೆಲ್ಲ ಒಬ್ಬ ಮನುಷ್ಯನ್ನ ದೇವರು ಮಾಡಿದ್ದಾರೆ. ಈಗ ಇವರದ್ದು ಪಿಕ್ಚರ್ ನೋಡಬೇಕಂತೆ, ತೋರಿಸ್ತಾರೆ ನೋಡಿ. ಯಾರಪ್ಪನದ್ದು ಎಲ್ಲಮ್ಮನ ಜಾತ್ರೆ ಅಷ್ಟೇ. ಇವರಿಗೆ ಕೇವಲ ಒಬ್ಬ ವ್ಯಕ್ತಿ ಪಾಪ್ಯುಲರ್ ಆಗಬೇಕು ಅಷ್ಟೆ. ಕೊಳ್ಳೆ ಹೊಡೆದು ಹೋಗಬೇಕು ಅಷ್ಟೇ. ಮೋದಿ ಅವರೇ ಪಿಕ್ಚರ್ ನಿಮ್ಮದೆ ಓಡಿಸಿ ಎಂದು ಕಿಡಿಕಾರಿದ್ದಾರೆ.
ಅದಾನಿಗೆ ಈ ಸರ್ಕಾರ ಒಂದು ರೂಪಾಯಿಗೆ ಒಂದು ಸಾವಿರ ಎಕರೆ ಕೊಟ್ಟಿದ್ದಾರೆ. ಇವರಿಗೆ ಮಾನ ಮರ್ಯಾದೆ, ಸ್ವಾಭಿಮಾನ ಇದೆಯಾ? ಯಾರು ಈ ಅದಾನಿ? ಇವರಿಗೆ ಕೇಳೋರು ಇಲ್ಲ. ಹೇಳೋರು ಇಲ್ಲ. ಮೋದಿ ಸಾಹೇಬ್ರೆ ಮಜಾ ಮಾಡಿ. ನಿಮ್ದೆ ಪಿಕ್ಚರ್ ಹೊಡೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.ಇದನ್ನೂ ಓದಿ: ಮತ ಕಳ್ಳತನದ ಬಗ್ಗೆ ಪ್ರಧಾನಿ ಮೋದಿ, ಅಮಿತ್ ಶಾ ಉತ್ತರ ಕೊಡಲಿ: ಶಿವರಾಜ್ ತಂಗಡಗಿ