ಬೆಂಗಳೂರಿನ ಬಾನಂಗಳ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ: ಮೋದಿ

Public TV
3 Min Read
Aero India 2023 narendra modi 1

ಬೆಂಗಳೂರು: ಯಲಹಂಕದ (Yelahanka) ವಾಯುನೆಲೆಯಲ್ಲಿ 5 ದಿನಗಳ ಕಾಲ ನಡೆಯುವ ಏರೋ ಇಂಡಿಯಾ – 2023 (Aero India-2023) ವೈಮಾನಿಕ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅಧಿಕೃತವಾಗಿ ಚಾಲನೆ ನೀಡಿದ್ದಾರೆ. ಈ ವೇಳೆ ಮಾತನಾಡಿರುವ ಮೋದಿ, ವಿಶ್ವದಲ್ಲೇ ಭಾರತದ ರಕ್ಷಣಾ ವಲಯ ದೊಡ್ಡ ಹೆಸರು ಮಾಡಿದೆ. ಬೆಂಗಳೂರಿನ ಬಾನಂಗಳ ಶಕ್ತಿ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

Aero India 2023 AirShow 3

ಏರ್ ಶೋ ಉದ್ಘಾಟನೆ ಬಳಿಕ ಮಾತನಾಡಿದ ಮೋದಿ, ಏರೋ ಇಂಡಿಯಾದ ರೋಮಾಂಚನಕ್ಕೆ ಮನಸೋತಿದ್ದೇನೆ. ಬೆಂಗಳೂರಿನ ವಾತಾವರಣ ಎಲ್ಲರನ್ನೂ ಸೆಳೆಯುತ್ತಿದೆ. ಏರೋ ಇಂಡಿಯಾದ ಆಯೋಜನೆ ಹೊಸ ಸಾಮರ್ಥ್ಯದ ಉದಾಹರಣೆಯಾಗಿದೆ. ವಿಶ್ವ ಭಾರತವನ್ನು ಬೇರೆಡೆಗೆ ಕೊಂಡೊಯ್ಯುತ್ತಿದೆ. ವಿದೇಶಿ ಕಂಪನಿಗಳು ಸ್ಟಾಲ್ ಹಾಕಿದ್ದಾರೆ. ಏರೋ ಇಂಡಿಯಾ ಥೀಮ್ ರನ್‌ವೇ ಜಮೀನಿನಿಂದ ಆಕಾಶದ ವರೆಗೂ ಹೊಸತನ್ನು ನಿರೀಕ್ಷಿಸುತ್ತಿದೆ. ಏರೋ ಇಂಡಿಯಾದ ಜೊತೆ, ಡಿಒಎನ್ಸ್ ಕಾನ್ ಕ್ಲೈವ್ ಕೂಡ ಆಯೋಜಿಸಲಾಗಿದೆ. ಮಿತ್ರ ದೇಶದ ಜೊತೆ ಭಾರತ ವಿಶ್ವದ ಹೊಸತನ್ನು ಸೃಷ್ಟಿಸಿದೆ ಎಂದು ನುಡಿದರು.

Aero India 2023 narendra modi

ಡಿಫೆನ್ಸ್ ಸಂಸ್ಥೆಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಶಕ್ತಿ ತುಂಬುತ್ತಿದೆ. ಹೊಸ ಇನೋವೇಷನ್ ಮಾಡಲು ಅವಕಾಶ ಸಿಕ್ಕಿದೆ. ಹೊಸ ಆಲೋಚನೆಗೆ ಉತ್ತೇಜನ ಸಿಕ್ಕಿದೆ. ಒಂದು ಕಾಲ ಇತ್ತು ಏರ್ ಶೋ ಬರಿ ಶೋ ಆಗಿತ್ತು. ಆದರೀಗ ಇದರ ಮಾದರಿಯನ್ನೇ ಬದಲಿಸಲಾಗಿದೆ. ಇದು ಬರೀ ಶೋ ಅಲ್ಲ, ನಮ್ಮ ದೇಶದ ಶಕ್ತಿ ಕೂಡ ಆಗಿದೆ. ದೇಶದಲ್ಲಿ ಡಿಫೆನ್ಸ್ ಕೇವಲ ಮಾರುಕಟ್ಟೆ ಮಾತ್ರ ಅಲ್ಲ, ಪಾರ್ಟ್ ಕೂಡ ಹೌದು ಎಂದು ಹಾಡಿ ಹೊಗಳಿದರು.

Aero India 2023 AirShow

ನಮ್ಮ ಟೆಕ್ನಾಲಜಿ ದೇಶದಲ್ಲಿ ಪ್ರಭಾವಶಾಲಿಯಾಗಿದೆ. ಪ್ರಾಮಾಣಿಕ ಹಾಗೂ ಸದೃಢವಾಗಿಸಿದೆ. ಭಾರತದ ಸಾಮರ್ಥ್ಯ ಪ್ರಮಾಣ ಹೆಚ್ಚಿಸಿದೆ. ಆಕಾಶದಲ್ಲಿ ಓಡೋ ತೇಜಸ್ ವೇಗ ಹೆಚ್ಚಿಸಿದೆ. ಗುಜರಾತ್, ತುಮಕೂರಿನಲ್ಲಿ ತಯಾರಾಗುತ್ತಿರುವ ವಿಮಾನ ಮತ್ತಷ್ಟು ಶಕ್ತಿ ಹೆಚ್ಚಿಸಿದೆ. ನಾವು ರಿಫಾರ್ಮ್ ಮೂಲಕ ಎಲ್ಲಾ ವಿಭಾದಲ್ಲೂ ಬದಲಾಗುತ್ತಿದ್ದೇವೆ. ಡಿಫೆನ್ಸ್ ವಸ್ತುಗಳನ್ನು ರಫ್ತು ಮಾಡುತ್ತಿದ್ದೇವೆ ಎಂದರು.

Aero India 2023 narendra modi 2

ಭಾರತ 9 ವರ್ಷಗಳಿಂದ ಡಿಫೆನ್ಸ್ನಲ್ಲಿ ಬದಲಾವಣೆ ಕಂಡಿದೆ. 1.5 ಬಿಲಿಯನ್ ಡಾಲರ್ ಹೆಚ್ಚಳವಾಗಿದೆ. 2 ಬಿಲಿಯನ್ ಇದ್ದ ಡಿಫೆನ್ಸ್ ರಫ್ತನ್ನು ಮುಂದೆ 5 ಬಿಲಿಯನ್‌ಗೆ ಹೆಚ್ಚಳ ಮಾಡಲಿದ್ದೇವೆ. ಫೈಟರ್ ಜೆಟ್ ತರ ಭಾರತ ಮುನ್ನುಗ್ಗುತ್ತಿದೆ. ಯಾವಾಗಲೂ ಎಲ್ಲಾ ರೀತಿಯಲ್ಲೂ ಮುನ್ನುಗ್ಗುತ್ತೇವೆ. ಆಕಾಶದಲ್ಲಿ ಪೈಲಟ್ ಹಾರಿಸುವ ರೀತಿ, ಸ್ವಾತಂತ್ರ್ಯ ಸರ್ಕಾರ ಇದೆ. ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಿದ್ಧರಿದ್ದೇವೆ ಎಂದರು.

Aero India 2023 AirShow 2

ಇದಕ್ಕೂ ಮುನ್ನ ಮಾತನಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿಯೇ ಭಾಷಣವನ್ನು ಆರಂಭಿಸಿದರು. ಕರ್ನಾಟಕದ ಈ ಐತಿಹಾಸಿಕ ಪ್ರದೇಶಕ್ಕೆ ನಿಮಗೆ ಸ್ವಾಗತ. ಮೋದಿ ಮಾರ್ಗದರ್ಶನದಲ್ಲಿ ಹಲವು ವರ್ಷಗಳಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಹೈಟ್ ಮತ್ತು ಸ್ಪೀಡ್ 2 ಪ್ರಮುಖ ವಿಚಾರ ಇಟ್ಟುಕೊಳ್ಳಲಾಗಿದೆ. ಲೋಕ ಕಲ್ಯಾಣ ಶಕ್ತಿ ಇದಾಗಿದ್ದು, ರಾಷ್ಟ್ರ ಸಶಕ್ತೀಕರಣಕ್ಕೆ ನಮ್ಮ ದೇಶ ಸದೃಢವಾಗಿದೆ ಎಂದರು. ಇದನ್ನೂ ಓದಿ: Exclusive Photo Album- ಮೋದಿ ಔತಣಕೂಟ : ಎಕ್ಸ್ ಕ್ಲೂಸಿವ್ ಫೋಟೋ ಆಲ್ಬಂ

ಭಾರತ ರಕ್ಷಣಾ ಕ್ಷೇತ್ರದಲ್ಲಿ ಉತ್ತಮವಾಗಿ ಮುನ್ನುಗುತ್ತಿದೆ. ಕರ್ನಾಟಕದ ಭೂಮಿ, ಶೌರ್ಯ, ಪರಾಕ್ರಮಕ್ಕೆ ಹೆಸರುವಾಸಿಯಾಗಿದೆ. ಏರೋ ಇಂಡಿಯಾ ಆಯೋಜನೆ ಮೂಲಕ ಬೇರೆ ಬೇರೆ ಕಾರ್ಯಕ್ರಮ ರೂಪಿಸಲಾಗಿದೆ. ತುಮಕೂರು, ಲಕ್ನೋ, ಬೆಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಕರ್ನಾಟಕ ರಾಜ್ಯ ಇಂಡಸ್ಟ್ರಿ ಕಮೀಟ್‌ಮೆಂಡ್ ಎಕ್ಸ್ ಪ್ರೆಸ್. ಕರ್ನಾಟಕದಲ್ಲಿ ಸಿಗುವ ಗಂಧದ ಮರ ದೇಶ, ವಿದೇಶಗಳಿಗೆ ರಫ್ತು ಆಗುತ್ತಿದೆ. ಈಸ್ ಆಫ್ ಡೂಯಿಂಗ್ ಬ್ಯುಸ್‌ನೆಸ್ ರ‍್ಯಾಂಕಿಂಗ್ ದಿನದಿಂದ ದಿನ ಮೇಲೆ ಬರುತ್ತಿದೆ. ಜಿ-20 ಶೃಂಗ ಸಭೆ ಮಾಡುವ ಅವಕಾಶ ಕೂಡ ಸಿಕ್ಕಿದೆ ಎಂದು ತಿಳಿಸಿದರು.

Aero India 2023 AirShow 1

ರಕ್ಷಣಾ ಇಲಾಖೆ ಎಲ್ಲರನ್ನೂ ಸ್ವಾಗತಿಸುತ್ತಿದೆ. 700ಕ್ಕೂ ಹೆಚ್ಚು ದೇಶದ ಎಕ್ಸಿಬ್ಯೂಟರ್ ಸ್ಟಾಲ್ ಹಾಕಿದ್ದಾರೆ. ಡಿಫೆನ್ಸ್ ಮ್ಯಾನುಫ್ಯಾಕ್ಚರ್ ಉತ್ತಮವಾಗಿ ನಡೆಯುತ್ತಿದೆ. ದೇಶ, ವಿದೇಶಗಳಿಂದ ಆಗಮಿಸಿರೋ ಎಲ್ಲರಿಗೂ ಸ್ವಾಗತ ಕೋರುತ್ತೇನೆ ಎಂದರು.

ಏರ್ ಶೋ ಉದ್ಘಾಟನಾ ಸಮಾರಂಭದ ವೇಳೆ ಗವರ್ನರ್ ಥಾವರ್ ಚಂದ್ ಗಹ್ಲೋಟ್, ಸಿಎಂ ಬೊಮ್ಮಾಯಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ನಾಗರೀಕ ವಿಮಾನಯಾನ ಸಚಿವ ಜೋತಿರಾದಿತ್ಯ ಸಿಂಧಿಯಾ, ರಕ್ಷಣಾ ಇಲಾಖೆ ರಾಜ್ಯ ಮಂತ್ರಿ, ಅಜಯ್ ಭಟ್ ಉಪಸ್ಥಿತರಿದ್ದರು. ಇದನ್ನೂ ಓದಿ: ಭಾರತವನ್ನು ಜಾಗತಿಕ ನಾಯಕನಾಗಿಸಲು ಕರ್ನಾಟಕ ದೊಡ್ಡ ಕೊಡುಗೆ ನೀಡಲಿದೆ: ಬೊಮ್ಮಾಯಿ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *