ಉಡುಪಿ ಶ್ರೀಕೃಷ್ಣಮಠದಲ್ಲಿ ನರಕ ಚತುರ್ದಶಿ, ಎಣ್ಣೆಸ್ನಾನದ ಸಂಭ್ರಮ

Public TV
1 Min Read
UDP 5

ಉಡುಪಿ: ದೇಶಾದ್ಯಂತ ಬೆಳಕಿನ ಹಬ್ಬದ ಸಂಭ್ರಮ ಶುರುವಾಗಿದೆ. ದೀಪಾವಳಿಯ ಮೊದಲ ದಿನ ನರಕ ಚತುರ್ದಶಿ. ನರಕ ಚತುರ್ದಶಿಯಂದು ಎಣ್ಣೆ ಸ್ನಾನ ಮಾಡುವ ಮೂಲಕ ಹಬ್ಬಕ್ಕೆ ಚಾಲನೆ ಸಿಗುತ್ತದೆ. ಕೃಷ್ಣ ಪರಮಾತ್ಮ ನರಕಾಸುರನನ್ನು ಸಂಹಾರ ಮಾಡಿದ ಹಿನ್ನೆಲೆಯಲ್ಲಿ ನರಕ ಚತುರ್ದಶಿ ಆಚರಿಸಲಾಗುತ್ತದೆ.

ಉಡುಪಿ ಶ್ರೀಕೃಷ್ಣ ಮಠದಲ್ಲಿ ಬೆಳಗ್ಗಿನಿಂದ ಆಚರಣೆ ಶುರುವಾಗಿದೆ. ಪರ್ಯಾಯ ಪೇಜಾವರ ಮಠಾಧೀಶ ವಿಶ್ವೆಶತೀರ್ಥ ಸ್ವಾಮೀಜಿ ಬೆಳಗ್ಗೆ ಪಶ್ಚಿಮ ಜಾಗರ ಪೂಜೆ ನೆರವೇರಿಸಿದರು. ನಂತರ ಕೃಷ್ಣಾಪುರ ಸ್ವಾಮೀಜಿ, ಸೋದೆ-ಕಾಣಿಯೂರು ಶ್ರೀಗಳು ಪರ್ಯಾಯ ನಡೆಸುತ್ತಿರುವ ಇಬ್ಬರೂ ಶ್ರೀಗಳು ಒಬ್ಬರಿಗೊಬ್ಬರು ಎಣ್ಣೆ ಪ್ರಸಾದ ವಿನಿಮಯ ಮಾಡಿಕೊಂಡರು.

ಮಠದ ಚಂದ್ರಶಾಲೆಯಲ್ಲಿ ಭಕ್ತರಿಗೂ ಸ್ವಾಮೀಜಿ ದೀಪಾವಳಿಯ ಎಣ್ಣೆಪ್ರಸಾದ ನೀಡಿದರು. ಮಠದ ಭಕ್ತರು ಸ್ವಾಮೀಜಿಗೆ ಎಣ್ಣೆ ಹಚ್ಚಿದರು. ಹತ್ತಾರು ಮಂದಿ ಎಣ್ಣೆ ಮಾಲೀಶ್ ಮಾಡಿದರು. ಮಠದ ಸಿಬ್ಬಂದಿ ಪರಸ್ಪರ ಎಣ್ಣೆ ಹಚ್ಚಿಕೊಂಡು ಸಂಭ್ರಮಿಸಿದರು.

UDP 7 1

ಇದೇ ವೇಳೆ ಮಾತನಾಡಿದ ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ನರಕಾಸುರ ವಿವಿಧ ರಾಜ್ಯದ ಮೇಲೆ ದಾಳಿ ಮಾಡಿ ಯುವತಿಯರನ್ನು ಎತ್ತಿಕೊಂಡು ಹೋಗಿ ಸೆರೆಯಲ್ಲಿ ಇರಿಸಿಕೊಂಡಿದ್ದ. ಇಂದ್ರಲೋಕದ ಮೇಲೆ ದಾಳಿ ಮಾಡಿ ಅದಿತಿ ದೇವಿಯ ಕರ್ಣ ಕುಂಡಲ ಅಪಹರಿಸಿದ್ದ. ದಾರಿ ಕಾಣದಾಗದ ದೇವೇಂದ್ರ, ಶ್ರೀಕೃಷ್ಣನಲ್ಲಿ ವಿಚಾರವನ್ನೆಲ್ಲ ಒಪ್ಪಿಸಿದ. ಶ್ರೀಕೃಷ್ಣ ಸತ್ಯಭಾಮ ಸಮೇತ ಗರಡಾರೂಢನಾಗಿ ನರಕಾಸುರನ ನಗರದ ಮೇಲೆ ದಾಳಿ ಮಾಡಿದ. ಮಂತ್ರಿಗಳ ಸಂಹಾರ ಮಾಡಿ, ನರಕಾಸುರ ವಧೆ ಮಾಡಿದ. ರಾಜಕುವರಿಯರನ್ನೆಲ್ಲಾ ಬಿಡುಗಡೆಗೊಳಿಸಿದ. ನರಕಾಸುರನ ವಧೆ ಮಾಡಿ, ಕೃಷ್ಣಪರಮಾತ್ಮ ಅಭ್ಯಂಜನ ಮಾಡಿದ ದಿನ ಇವತ್ತು. ಭಗವಂತ ಲೋಕಕ್ಕೆ ಮಾಡಿದ ಮಹಾ ಉಪಕಾರವನ್ನು ನಾವೆಲ್ಲಾ ನೆನೆಯಬೇಕು ಎಂದರು.

ಯುವತಿಯರನ್ನು ಲೋಕ ತೊರೆದಾಗ ಮಾರ್ಗದರ್ಶನ ಮಾಡಿ, ಭಗವಂತನೇ ಅವರನ್ನು ಸ್ವೀಕರಿಸಿದ. ಸಮಾಜದಲ್ಲಿ ಗೌರವದ ಸ್ನಾನ ನೀಡಿದ ದಿನ ಇಂದು. ಭಗವಂತನನ್ನು ಪ್ರಾರ್ಥನೆ ಮಾಡಿ, ಅವನ ಪರೋಪಕಾರ ಗುಣ ಅಳವಡಿಸಿಕೊಂಡು ನಾವು ಕೂಡಾ ಅದೇ ಸನ್ಮಾರ್ಗದಲ್ಲಿ ನಡೆಯಬೇಕಿದೆ. ದಣಿವಿನ ಜೊತೆ ದುರ್ಗಂದ-ಕೊಳೆ ಕೂಡಾ ದೂರವಾಗುತ್ತದೆ. ಈ ಮೂಲಕ ಈ ದಿನ ಮನಸ್ಸಿನ ಕೊಳೆಯೂ ದೂರವಾಗಲಿ ಅಂತ ಭಗವಂತನಲ್ಲಿ ಪ್ರಾರ್ಥನೆ ಮಾಡುವುದಾಗಿ ಹೇಳಿದ್ರು.

UDP 6 1

UDP 2 2

UDP 1 2

UDP 8 1

UDP 9 1

Share This Article
Leave a Comment

Leave a Reply

Your email address will not be published. Required fields are marked *