ಚಾಮುಂಡಿ ಬೆಟ್ಟ ಆಯ್ತು, ಈಗ ನಂಜನಗೂಡು ದೇವಾಲಯದಲ್ಲೂ ನೌಕರರ ಪ್ರತಿಭಟನೆ!

Public TV
2 Min Read
nanjangudu Nanjudeshwara temple

ಮೈಸೂರು: ಚಾಮುಂಡಿಬೆಟ್ಟದಲ್ಲಿ ಅರ್ಚಕರು ಹಾಗೂ ಸಿಬ್ಬಂದಿಯ ಪ್ರತಿಭಟನೆ ನಂತರ ನಂಜನಗೂಡಿನ ನಂಜುಡೇಶ್ವರ ದೇವಾಲಯದ ನೌಕರರು ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿದ್ದಾರೆ.

ಸೋಮವಾರದಿಂದ ನಂಜನಗೂಡು ನಂಜುಡೇಶ್ವರ ದೇವಾಲಯದ ನೌಕರರು ಅನಿರ್ಧಿಷ್ಟಾವಧಿ ಧರಣಿ ಮಾಡಲು ನಿರ್ಧರಿಸಿದ್ದು, ಬೆಳಗ್ಗೆ 9 ಗಂಟೆಯಿಂದ ಆರಂಭವಾದ ಧರಣಿಯಲ್ಲಿ ದೇವಾಲಯದ 180 ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ಆರಂಭಿಸಿದ್ದಾರೆ. ಚಾಮುಂಡಿ ಬೆಟ್ಟದ ನೌಕರರಂತೆ ಇವರು ಪ್ರಮುಖ 7 ಬೇಡಿಕೆ ಈಡೇರಿಕೆಗೆ ಆಗ್ರಹಿಸಿದ್ದಾರೆ.

ಪ್ರತಿಭಟನಾಕಾರರ ಬೇಡಿಕೆಗಳು:
1. ಕಾರ್ಯಾರ್ಥ ನೇಮಕ ಮಾಡಿರುವ ನೌಕರರನ್ನು ಖಾಯಂಗೊಳಿಸಬೇಕು.
2. ವೇತನ ಶ್ರೇಣಿ ಪಡೆಯುತ್ತಿರುವ ನೌಕರರಿಗೆ 6ನೇ ವೇತನ ಮಂಜೂರು ಮಾಡಿ ಕಾಲ ಕಾಲಕ್ಕೆ ಬರುವ ಭತ್ಯೆಯನ್ನು ಕೊಡಲು ಖಾಯಂ ಆದೇಶ ಮಾಡುವುದು.
3. ಪ್ರತಿವರ್ಷ ಬೋನಸ್ ರೂಪದಲ್ಲಿ ಎಲ್ಲ ನೌಕರರಿಗೆ ಇಡೀ ತಿಂಗಳ ಪೂರ್ಣ ವೇತನ ಪಾವತಿಸಬೇಕು.
4. ಸೇವಾವಧಿಗೂ ಮುನ್ನಾ ಅಕಾಲಿಕ ಮರಣ ಹೊಂದುವ ನೌಕರರ ಕುಟುಂಬದವರಿಗೆ ಅನುಕಂಪದ ಮೇಲೆ ಕೆಲಸ ನೀಡಬೇಕು.
5. ನಿವೃತ್ತಿ ಬಳಿಕ ನೌಕರರಿಗೆ ಕೊಡುವ 35 ಸಾವಿರ ರೂ. ಹಣವನ್ನು 5 ಲಕ್ಷ ರೂ.ಗೆ ಏರಿಸಬೇಕು
6. ನೌಕರರಿಗೆ ವೈದ್ಯಕೀಯ ಸೌಲಭ್ಯವನ್ನು ಒದಗಿಸಬೇಕು.
7. ದೇವಾಲಯದ ಕಾರ್ಯನಿರ್ವಹಿಸುತ್ತಿರುವ ಅನುವಂಶೀಯ ನೌಕರರು ಮರಣ ಹೊಂದಿದಲ್ಲಿ ಧಾರ್ಮಿಕ ಕೈಂಕಾರ್ಯಗಳಿಗೆ ಅಡೆ ತಡೆ ಉಂಟಾಗದಂತೆ ಸದರಿ ಹುದ್ದೆಗೆ ತುರ್ತಾಗಿ ನೌಕರರನ್ನು ನಿಗದಿ ಪಡಿಸಬೇಕು.

MYS NJUDESHWAR WORKAR PROTEST AV

ಇಂದು ಬೆಳಗ್ಗೆ ದೇವಾಲಯದಲ್ಲಿ ನಂಜುಡೇಶ್ವರನಿಗೆ ಪೂಜಾ ವಿಧಿ ವಿಧಾನ ನಡೆದ ಬಳಿಕ ನೌಕರರು ಧರಣಿ ಆರಂಭಿಸಿದ್ದಾರೆ. ಅರ್ಚಕರು, ಸೇವಾ ಕೌಂಟರ್ ಸಿಬ್ಬಂದಿ, ಪ್ರಸಾದ ವಿತರಣಾ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿ ಸೇರಿದಂತೆ ದೇವಾಲಯದಲ್ಲಿ ಕೆಲಸ ಮಾಡುವ ಎಲ್ಲಾ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಪ್ರತಿಭಟನೆಯಿಂದ ಭಕ್ತರಿಗೆ ಸೇವೆಗಳಲ್ಲಿ ತೊಡಕುಂಟಾಗುವ ಸಾಧ್ಯತೆ ಇದೆ. ವಿಶೇಷ ಪೂಜೆ, ಅರ್ಚನೆ ಹಾಗೂ ಇತರೆ ಸೇವೆಗಳು ಪ್ರತಿಭಟನೆ ಆರಂಭವಾದ ಬಳಿಕ ಭಕ್ತರಿಗೆ ಲಭ್ಯವಿರುವುದಿಲ್ಲ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಒಟ್ಟು 242 ಮಂದಿ ನೌಕರರಿರುವ ನಂಜನಗೂಡು ದೇವಾಲಯದಲ್ಲಿ ಸುಮಾರು 62 ಹುದ್ದೆಗಳು ಖಾಲಿಯಿದ್ದು, ಇನ್ನುಳಿದ 180 ಮಂದಿ ನೌಕರರು ಪ್ರತಿಭಟನೆ ಆರಂಭಿಸಿದ್ದಾರೆ.

nanjangudu Nanjudeshwara temple 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *