ಕಾರವಾರ: ಇಂದು ನಾಗರ ಪಂಚಮಿಯ ಸಂಭ್ರಮ. ನಾಗನ ಕಲ್ಲಿಗೆ ಭಕ್ತರು ಹಾಲೆರೆದು ಪೂಜೆ ಮಾಡುವುದು ಸಾಮಾನ್ಯ. ಆದರೆ ಅಂಕೋಲ ತಾಲೂಕಿನ ನಾಗನಬನಕ್ಕೆ ನಾಗರ ಹಾವು ಬಂದಿತ್ತು.
ಹೌದು. ಅಂಕೋಲ ತಾಲೂಕಿನ ಅವರ್ಸಾ ಗ್ರಾಮದ ದಂಡೇಭಾಗದಲ್ಲಿರುವ ನಾಗಬನಕ್ಕೆ ಮುಂಜಾನೆ ನಾಗರ ಹಾವೊಂದು ಪ್ರವೇಶಿಸಿದೆ. ನಾಗರ ಹಾವು ಕಲ್ಲಿನ ಮೇಲೆ ಹರಿದಾಡಿ ಹೆಡೆಎತ್ತಿ ಬುಸುಗುಡುತಿತ್ತು. ಇದನ್ನು ಗಮನಿಸಿದ ಸ್ಥಳೀಯರು ದೇವರ ಹಾವೆಂದು ಅಕ್ಕಪಕ್ಕದವರಿಗೆ ತಿಳಿಸಿದ್ದಾರೆ.
ಇಂದು ನಾಗರ ಪಂಚಮಿಯಾಗಿದ್ದರಿಂದ ಜನರೂ ಭಕ್ತಿ ಭಾವದಿಂದ ಇಲ್ಲಿಗೆ ಆಗಮಿಸಿ ನಾಗಬನದೊಳಗಿದ್ದ ನಾಗನಿಗೆ ಪೂಜೆಗೈದು ಸಂತಸಪಟ್ಟರು. ನಾಗಬನಕ್ಕೆ ಬಂದಿರುವುದನ್ನ ಸ್ಥಳೀಯರು ಉರಗ ತಜ್ಞ ಮಹೇಶ್ ನಾಯ್ಕ ಅವರಿಗೆ ತಿಳಿಸಿದ ಬಳಿಕ ಹಾವನ್ನು ರಕ್ಷಿಸಲಾಯಿತು.
https://www.youtube.com/watch?v=O9fz5O1mk_w