ಒಂದೇ ವೇದಿಕೆಯಲ್ಲಿ ಸಿದ್ದು, ವಿಶ್ವನಾಥ್, ಈಶ್ವರಪ್ಪ

Public TV
1 Min Read
mys sidddu eshwarappa vishwanath

ಮೈಸೂರು: ಸಿದ್ದರಾಮಯ್ಯ ವರ್ಸಸ್ ಈಶ್ವರಪ್ಪ, ಸಿದ್ದರಾಮಯ್ಯ ವರ್ಸಸ್ ವಿಶ್ವನಾಥ್ ಎಂಬರ್ಥದಲ್ಲಿ ಪರಸ್ಪರ ಟೀಕೆ – ಪ್ರತಿ ಟೀಕೆಯಲ್ಲಿರುವ ಈ ಮೂವರು ನಾಯಕರು ಒಂದೇ ವೇದಿಕೆಯಲ್ಲಿ ಕೂತು ನಗು ನಗುತ್ತಾ ಕೆಲ ಸಮಯ ಕಳೆದರು.

ಅಷ್ಟೆ ಅಲ್ಲ ಸಿದ್ದರಾಮಯ್ಯ ಹಾಗೂ ಈಶ್ವರಪ್ಪ ಒಂದೇ ಕಾರಿನಲ್ಲಿ ಕೂಡ ಸಾಗಿದರು. ಇದೆಲ್ಲ ನಡೆದಿದ್ದು ಮೈಸೂರಿನ ಕೆ.ಆರ್ ನಗರ ತಾಲೂಕಿನ ದೊಡ್ಡ ಕೊಪ್ಪಲು ಗ್ರಾಮದಲ್ಲಿ. ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಈ ಮೂವರು ನಾಯಕರು ಭಾಗಿಯಾಗಿದ್ದರು. ಒಂದೇ ವೇದಿಕೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಕೆ.ಎಸ್ ಈಶ್ವರಪ್ಪ, ಮಾಜಿ ಶಾಸಕ ಎಚ್ ವಿಶ್ವನಾಥ್ ಕುಳಿತಿದ್ದರು.

mys sidddu eshwarappa vishwanath2

ಒಂದು ಕಡೆ ಈಶ್ವರಪ್ಪ, ಮತ್ತೊಂದು ಕಡೆ ವಿಶ್ವನಾಥ್, ಮಧ್ಯದಲ್ಲಿ ಸಿದ್ದರಾಮಯ್ಯ ಕುಳಿತಿದ್ದರು. ಅತ್ಯಂತ ಆತ್ಮೀಯವಾಗಿ ಸಿದ್ದರಾಮಯ್ಯ – ಈಶ್ವರಪ್ಪ ಪರಸ್ಪರ ಮಾತಾಡುತ್ತಾ ಕಾಲ ಕಳೆದರು. ಸಿದ್ದರಾಮಯ್ಯ ಅವರಿಗೆ ಅನಾರೋಗ್ಯದ ವೇಳೆ ಆಸ್ಪತ್ರೆಗೂ ತೆರಳಿದ್ದ ಈಶ್ವರಪ್ಪ, ವಿಶ್ವನಾಥ್ ಈಗ ಕೂಡ ರಾಜಕೀಯ ದ್ವೇಷ ಮರೆತು ವೇದಿಕೆ ಹಂಚಿಕೊಂಡರು.

ವೇದಿಕೆ ಕಾರ್ಯಕ್ರಮಕ್ಕೆ ಒಂದೇ ಕಾರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಕೆ.ಎಸ್. ಈಶ್ವರಪ್ಪ ಬಂದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣಗೊಳಿಸಿದರು. ಜೊತೆ ಜೊತೆಯಲ್ಲಿ ನಗುತ್ತಾ ಮಾತಾಡಿಕೊಂಡು ಸಮಾರಂಭದಲ್ಲಿ ನಾಯಕರು ಭಾಗಿಯಾಗಿದ್ದು ಜನರ ಮೆಚ್ಚುಗೆಗೆ ಕಾರಣವಾಯಿತು.

Share This Article
Leave a Comment

Leave a Reply

Your email address will not be published. Required fields are marked *