ನೀವು ಸೆಕ್ಸ್ ಫಿಲಂ ಹೀರೋ, ಹೀರೋಯಿನ್ ಜೊತೆ ಮಾತಾಡಿದ್ದಕ್ಕೆ ದಾಖಲೆ ಇದೆ: ಸಾರಾ ಮಹೇಶ್

Public TV
2 Min Read
sara mahesh 1

ಮೈಸೂರು: ಯಾವ ಹೀರೋಯಿನ್ ಜೊತೆ ಯಾವ ರೀತಿ ಮಾತನಾಡಿದ್ದೀರಿ ಅನ್ನೋ ದಾಖಲೆ ಇದೆ ಎಂದು ಮಾಜಿ ಸಚಿವ ಸಾರಾ ಮಹೇಶ್ ಅವರು ಅನರ್ಹ ಶಾಸಕ ಹೆಚ್ ವಿಶ್ವನಾಥ್ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ವಿಶ್ವನಾಥ್ ಅತೃಪ್ತ ಪ್ರೇತಾತ್ಮ. ತಾನು ಮಾಡಿದ ತಪ್ಪನ್ನು ಬೇರೆಯವರ ಮೇಲೆ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ವೈಯಕ್ತಿಕವಾಗಿ ನನ್ನ ತೇಜೋವಧೆ ಮಾಡುತ್ತಿದ್ದಾರೆ. ವಿಶ್ವನಾಥ್ ಬಾಯಿ ಬಿಟ್ಟರೆ ಸುಳ್ಳು ಹೇಳುತ್ತಾರೆ. ಬನ್ನಿ ಚಾಮುಂಡಿ ಬೆಟ್ಟಕ್ಕೆ, ನಾನು ಯಾವುದೇ ಆಸೆ, ಆಮಿಷಗಳಿಗೂ ಬಲಿಯಾಗಿಲ್ಲ. ನನಗೆ ಮಂತ್ರಿ ಸ್ಥಾನ ಬೇಡ ಎಂದು ಚಾಮುಂಡಿ ದೇವಿ ಮುಂದೆ ಪ್ರಮಾಣ ಮಾಡಿ ಹೇಳಿ ಎಂದು ಸವಾಲ್ ಹಾಕಿದರು.

sara mahesh

ಯಾವ ಹೀರೋಯಿನ್ ಜೊತೆ ಹೇಗೆ ಮಾತಾಡಿದ್ದೀರಿ ಅನ್ನೋ ದಾಖಲೆ ಇದೆ. ನಿಮ್ಮಂಥ ಜೀವನ ನಾನು ಮಾಡಿದರೆ ಇಷ್ಟೊತ್ತಿಗೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ನೀವು ಸೆಕ್ಸ್ ಫಿಲಂ ಹೀರೋ. ನೀವು ಬ್ಲೂ ಬಾಯ್. ಯಾವ ಪುಣ್ಯಾತ್ಮ ನಿಮಗೆ ಹಳ್ಳಿ ಹಕ್ಕಿ ಎಂದು ಹೆಸರಿಟ್ಟನೋ. ಚಳಿಗಾಲದಲ್ಲಿ ಒಂದು ಗೂಡು, ಮಳೆಗಾಲದಲ್ಲಿ ಒಂದು ಗೂಡು, ಬೇಸಿಗೆ ಕಾಲದಲ್ಲಿ ಒಂದು ಗೂಡು ಹುಡುಕಿ ಕೊಳ್ಳುತ್ತೀರಾ ಎಂದು ಗುಡುಗಿದರು. ಇದನ್ನು ಓದಿ: ‘ಹೇ ಅಯೋಗ್ಯ’, ನನ್ನ ಬಗ್ಗೆ ಮಾತನಾಡೋ ಮುನ್ನ ಎಚ್ಚರಿಕೆ ಇರಲಿ: ಹೆಚ್. ವಿಶ್ವನಾಥ್

25 ಲಕ್ಷ ದುಡ್ಡು ಪಡೆದಿದ್ದೇನೆ ಈ ವರ್ಗಾವಣೆ ಮಾಡಿ ಕೊಡಿ ಎಂದು ಅವತ್ತು ಕೇಳಿದರಲ್ಲ. ಅದನ್ನು ನಾನು ಮಾಡಿಸಿ ಕೊಡಲಿಲ್ಲ ಎಂದು ಹೀಗೆ ಮಾತನಾಡುತ್ತಿದ್ದೀರಾ? ನೀವು ವಕೀಲರಾಗಿದ್ದಾಗ ಒಬ್ಬ ವಿಧವೆ ನಿಮ್ಮ ಬಳಿ ನ್ಯಾಯ ಕೇಳೋಕೆ ಬಂದ ಅವರ ಕಥೆ ಏನಾಯ್ತು ಎಂದು ಹೇಳಬೇಕಾ? 1994 ರಲ್ಲಿ ಕೆಆರ್ ನಗರದ ಹಳ್ಳಿಗಳಿಗೆ ನೀವು ಹೋದಾಗ ಮನೆ ಬಾಗಿಲು ಯಾಕೆ ಹಾಕಿ ಕೊಳ್ಳುತ್ತಿದ್ದರು ಅನ್ನೋದು ಹೇಳಬೇಕಾ? ಎಂದು ವಿಶ್ವನಾಥ್ ಅವರನ್ನು ಪ್ರಶ್ನೆ ಮಾಡಿದರು.

H Vishwanath

ನಾನು ನಿಮಗಿಂತ ಏಕವಚನದಲ್ಲಿ ಮಾತಾಡಬಲ್ಲೆ. ಆದರೆ ನಮ್ಮ ತಂದೆ ಸಂಸ್ಕಾರ ಕಲಿಸಿದ್ದಾರೆ ಅದಕ್ಕೆ ಮಾತಾಡಲ್ಲ. ಚಾಮುಂಡಿ ಬೆಟ್ಟದಲ್ಲಿ ಪ್ರಮಾಣ ಮಾಡಿ ಸಾಕು ನಾನು ರಾಜಕೀಯ ಜೀವನದಿಂದ ನಿವೃತ್ತಿ ಪಡೆಯುತ್ತೇನೆ. ನಾನಾ ಅಯೋಗ್ಯ ನೀವಾ ಅಂತಾ ತೀರ್ಮಾನವಾಗಲಿ. ಚಡ್ಡಿ ಒಗೆದರೆ ಪರವಾಗಿಲ್ಲ. ಆದರೆ ಕಂಡ ಕಂಡ ಕಡೆ ಅದನ್ನು ಬಿಚ್ಚಬಾರದು. ನಿಮ್ಮ ಯೋಗ್ಯತೆ ಮೈಸೂರು ಮತ್ತು ಮಡಿಕೇರಿ ಜನರಿಗೆ ಗೊತ್ತಿದೆ. ಕೊಚ್ಚೆ ಗುಂಡಿ ನೀವು, ನಿಮ್ಮ ಬಗ್ಗೆ ಮಾತನಾಡಿದರೆ ನಮ್ಮ ಬಾಯಿ ಹೊಲಸಾಗುತ್ತೆ. ನನ್ನ ವೈಯಕ್ತಿಕ ಜೀವನದಲ್ಲಿ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ ಎಂದು ಕಿಡಿಕಾರಿದರು.

ನಾನು ಜನರ ಮನೆಗೆ ಹೋದರೆ ನನ್ನ ಅಣ್ಣ ಬಂದ, ತಮ್ಮ ಬಂದ, ಮಗ ಬಂದಾ ಎಂದು ಮನೆಯೊಳಗೆ ಕರೆಯುತ್ತಾರೆ. ನೀವು ಹೋದರೆ ಜನ ಎಲ್ಲಿ ನಿಮ್ಮನ್ನು ಕೂರಿಸುತ್ತಾರೆ ಎಂದು ಗೊತ್ತಿದೆ. ಅನರ್ಹ ಆದ ಮೇಲೆ ಹೆಚ್ ವಿಶ್ವನಾಥ್ ಹೋಗಿ ಹುಚ್ಚು ವಿಶ್ವನಾಥ್ ಆಗಿದ್ದಾರೆ. ಅವರಿಗೆ ಮೊದಲು ಚಿಕಿತ್ಸೆ ಕೊಡಿಸಬೇಕು. 9 ದಿವಸದ ನವರಾತ್ರಿಯಲ್ಲಿ ಚಾಮುಂಡಿ ಬೆಟ್ಟಕ್ಕೆ ಬನ್ನಿ ಇಲ್ಲ ಯಾವುದೇ ದೇವಸ್ಥಾನಕ್ಕೆ ಬಂದು ಪ್ರಮಾಣ ಮಾಡಿ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *