ಅಧಿಕಾರಿಗಳ ನಿರ್ಲಕ್ಷ್ಯ – ತುಕ್ಕು ಹಿಡಿಯುತ್ತಿವೆ ಶವ ಸಾಗಿಸುವ ವಾಹನಗಳು

Public TV
1 Min Read
MYS VEHICLE

ಮೈಸೂರು: ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಶವಸಾಗಿಸುವ ವಾಹನಗಳು ಬಡವರಿಗೆ ಉಪಯೋಗವಾಗದೆ, ನಿಂತಲ್ಲೇ ನಿಂತಿದ್ದು, ತುಕ್ಕು ಹಿಡಿದಿವೆ.

ಜಿಲ್ಲೆಯ ನಂಜನಗೂಡು ನಗರಸಭೆ ಆವರಣದಲ್ಲಿ ಶವಸಾಗಿಸುವ ವಾಹನ ತುಕ್ಕು ಹಿಡಿಯುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ. ಕಳೆದ ಮೂರು ವರ್ಷಗಳಿಂದ ಈ ವಾಹನಗಳು ನಿಷ್ಕ್ರಿಯವಾಗಿವೆ. ಈ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

vlcsnap 2020 02 24 12h45m25s840

ವಿಧಾನ ಪರಿಷತ್ ಮಾಜಿ ಸದಸ್ಯ ಗೋ.ಮಧುಸೂಧನ್ ಶಾಸಕರ ಅನುದಾನದಲ್ಲಿ ಈ ವಾಹನ ಕೊಟ್ಟಿದ್ದರು. 2 ಕೋಟಿ ರೂ. ಅನುದಾನದಲ್ಲಿ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಹತ್ತು ವಾಹನಗಳನ್ನು ಗೋ.ಮಧುಸೂಧನ್ ನೀಡಿದ್ದರು. 2015ರಲ್ಲಿ ಕೊಟ್ಟ ವಾಹನಗಳು ಈಗ ತುಕ್ಕು ಹಿಡಿಯುತ್ತಿವೆ. ಬಡವರ್ಗದ ಜನತೆಗೆ ಅನುಕೂಲವಾಗಲೆಂದು ಈ ವಾಹನಗಳನ್ನು ನೀಡಲಾಗಿತ್ತು. ಆದರೆ ಸೂಕ್ತವಾಗಿ ಬಳಸದೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿವೆ. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *