Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • Live TV
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Election News

ಇಲ್ಲಿ ಎಲ್ಲಾ ಜಾತಿಗೂ ಗೆಲುವು! ಎಲ್ಲಾ ಜಾತಿಗೂ ಸೋಲು!

Public TV
Last updated: April 1, 2024 3:07 pm
Public TV
Share
2 Min Read
Mysuru Lok Sabha
SHARE

ಮೈಸೂರು: ಚುನಾವಣೆಯಲ್ಲಿ ಜಾತಿಯೇ ಪ್ರಧಾನ. ಉಳಿದೆಲ್ಲವೂ ಗೌಣ ಎಂಬ ಮಾತಿದೆ. ಆದರೆ ಮೈಸೂರು ಲೋಕಸಭಾ ಕ್ಷೇತ್ರದಲ್ಲಿ (Mysuru Lok Sabha) ಸರ್ವ ಜಾತಿಗೂ ಸಮ ಪಾಲಿದೆ! ಅಂದರೆ ಮತದಾರರು ಯಾವುದೇ ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜಾತಿಯವರನ್ನು ಗೆಲ್ಲಿಸಿದ್ದಾರೆ. ಎಲ್ಲಾ ಜಾತಿ ಅವರನ್ನು ಸೋಲಿಸಿದ್ದಾರೆ.

mysuru lok sabha1952 ರಲ್ಲಿ ಮೈಸೂರು ದ್ವಿಸದಸ್ಯ ಕ್ಷೇತ್ರವಾಗಿತ್ತು. ಆಗ ವೀರಶೈವ-ಲಿಂಗಾಯತರಾದ ಎಂ.ಎಸ್.ಗುರುಪಾದಸ್ವಾಮಿ, ದಲಿತರಲ್ಲಿ ಎಡಗೈ ಜನಾಂಗಕ್ಕೆ ಸೇರಿದ ಎನ್.ರಾಚಯ್ಯ ಆಯ್ಕೆಯಾಗಿದ್ದರು. 1957 ರಲ್ಲಿ ಹಿಂದುಳಿದ ದೇವಾಂಗ ಜನಾಂಗಕ್ಕೆ ಸೇರಿದ ಎಂ. ಶಂಕರಯ್ಯ ಹಾಗೂ ದಲಿತರಲ್ಲಿ ಬಲಗೈ ಜನಾಂಗಕ್ಕೆ ಸೇರಿದ ಎಸ್.ಎಂ.ಸಿದ್ದಯ್ಯ ಆಯ್ಕೆಯಾಗಿದ್ದರು. 1962 ರಲ್ಲಿ ಏಕಸದಸ್ಯ ಕ್ಷೇತ್ರವಾದಾಗ ಮತ್ತೆ ದೇವಾಂಗ ಜನಾಂಗದ ಎಂ.ಶಂಕರಯ್ಯ ಆಯ್ಕೆಯಾದರು. 1967, 1971 ಹಾಗೂ 1977 ರಲ್ಲಿ ಒಕ್ಕಲಿಗ ಜನಾಂಗದ ಹೆಚ್.ಡಿ.ತುಳಸಿದಾಸ್‌ ಆಯ್ಕೆಯಾದರು. 1980 ರಲ್ಲಿ ವೀರಶೈವ-ಲಿಂಗಾಯತ ಜನಾಂಗದ ಎಂ.ರಾಜಶೇಖರಮೂರ್ತಿ ಚುನಾಯಿತರಾದರು. 1984, 1989, 1996, 1999 ರಲ್ಲಿ ಅರಸು ಜನಾಂಗದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, 1991 ರಲ್ಲಿ ಅರಸು ಜನಾಂಗದ ಚಂದ್ರಪ್ರಭ ಅರಸು ಆಯ್ಕೆಯಾಗಿದ್ದರು. ಇದನ್ನೂ ಓದಿ: ಮೈಸೂರು ಕ್ಷೇತ್ರದಲ್ಲಿ 13 ಬಾರಿ ‘ಕೈ’, ನಾಲ್ಕು ಬಾರಿ ಕಮಲಕ್ಕೆ ಜೈ – ಒಂದೂ ಬಾರಿಯೂ ಗೆದ್ದಿಲ್ಲ ಜೆಡಿಎಸ್!

1998, 2004 ರಲ್ಲಿ ಕುರುಬ ಜನಾಂಗದ ಸಿ.ಹೆಚ್.ವಿಜಯಶಂಕರ್, 2009 ರಲ್ಲಿ ಕುರುಬ ಜನಾಂಗದ ಹೆಚ್‌.ವಿಶ್ವನಾಥ್ ಆಯ್ಕೆಯಾಗಿದ್ದರು. 1977ರ ನಂತರ ಒಕ್ಕಲಿಗರು, 1980ರ ನಂತರ ವೀರಶೈವ-ಲಿಂಗಾಯಿತರು ಈ ಕ್ಷೇತ್ರದಲ್ಲಿ ಆಯ್ಕೆಯಾಗಲು ಸಾಧ್ಯವಾಗಿರಲಿಲ್ಲ. ಆದರೆ 2014 ರಲ್ಲಿ ಒಕ್ಕಲಿಗ ಜನಾಂಗದ ಪ್ರತಾಪ್ ಸಿಂಹ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದರು. ಈ ಜನಾಂಗಗಳಿಗೆ ಸೇರಿದ ಕೆ.ಪಿ.ಶಾಂತಮೂರ್ತಿ, ಡಿ.ಮಾದೇಗೌಡ, ಪ. ಮಲ್ಲೇಶ್, ಜಿ.ಟಿ.ದೇವೇಗೌಡ, ಬಿ.ಎಸ್.ಮರಿಲಿಂಗಯ್ಯ. ಎ.ಎಸ್.ಗುರುಸ್ವಾಮಿ, ಬಿ.ಎ.ಜೀವಿಜಯ, ನ್ಯಾ. ಚಂದ್ರಶೇಖರಯ್ಯ ಸ್ಪರ್ಧಿಸಿ, ಸೋತಿದ್ದಾರೆ. ಬಿಜೆಪಿಯಿಂದ ತೋಂಟದಾರ್ಯ ಸ್ಪರ್ಧಿಸಿ, ಸೋತಿದ್ದಾರೆ. ಕಾಂಗ್ರೆಸ್‌ನಿಂದ ನಾಯಕ ಜನಾಂಗದ ಎಸ್.ಚಿಕ್ಕಮಾದು. ಅರಸು ಜನಾಂಗದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಕುರುಬ ಜನಾಂಗದ ವಿಶ್ವನಾಥ್, ವಿಜಯಶಂಕರ್ ಕೂಡ ಸೋತಿದ್ದಾರೆ.

ಬಿಜೆಪಿಯು ಕುರುಬ ಜನಾಂಗದ ಸಿ.ಹೆಚ್.ವಿಜಯಶಂಕರ್ ಅವರನ್ನು ಅಭ್ಯರ್ಥಿಯಾಗಿಸಿ, ಹೊಸ ಪ್ರಯೋಗ ಮಾಡಿ. ಆಯೋಧ್ಯೆಯ ರಾಮ ಮಂದಿರದ ಹಿನ್ನೆಲೆಯಲ್ಲಿ ದೇಶಾದ್ಯಂತ ಇದ್ದ ಬಿಜೆಪಿ ಅಲೆಯಲ್ಲಿ ಎರಡು ಬಾರಿ. 2019 ರಲ್ಲಿ ನರೇಂದ್ರ ಮೋದಿ ಅಲೆ ಹಾಗೂ ಜೆಡಿಎಸ್ ಪರೋಕ್ಷ ಬೆಂಬಲದಿಂದ ಗೆದ್ದಿದೆ. ಆದರೆ ಜನತಾದಳದ ಪರವಾಗಿ 1996, 2004 ರಲ್ಲಿ ಅಲೆ ಇದ್ದರೂ ಮೈಸೂರಿನಲ್ಲಿ ಜನತಾ ಪರಿವಾರ ಗೆಲ್ಲಲಾಗಿಲ್ಲ. ಸಿದ್ದರಾಮಯ್ಯ, ವಿ.ಶ್ರೀನಿವಾಸಪ್ರಸಾದ್, ರಾಜಶೇಖರಮೂರ್ತಿ ಅವರಂಥ ಘಟಾನುಘಟಿ ನಾಯಕರು ಇದ್ದಾಗಲೂ ಜನತಾ ಪರಿವಾರ ಗೆಲ್ಲಲಾಗಿಲ್ಲ. 2019 ರಲ್ಲಿ ಗೆಲುವಿಗಾಗಿ ಬಿಜೆಪಿಯ ಪ್ರತಾಪ್ ಸಿಂಹ ಹಾಗೂ ಕಾಂಗ್ರೆಸ್-ಜೆಡಿಸ್ ಮೈತ್ರಿಕೂಟ ಮಾಜಿ ಸಂಸದ ಸಿ.ಹೆಚ್.ವಿಜಯಶಂಕರ್ ನಡುವೆ ನೇರ ಹೋರಾಟ ನಡೆಯಿತು. ಪ್ರತಾಪ್ ಸಿಂಹ ಪುನಾರಾಯ್ಕೆಯಾದರು. ಇದನ್ನೂ ಓದಿ: ಮಂತ್ರಿಯೇ ಆಗಲಿಲ್ಲ ರಾಜ – ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು

TAGGED:bjpjdsLok Sabha 2024
Share This Article
Facebook Whatsapp Whatsapp Telegram

Cinema Updates

Kantara
ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು
3 hours ago
Kantara 3
ʻಕಾಂತಾರ ಚಾಪ್ಟರ್-1ʼಗೆ ಸಾಲು ಸಾಲು ವಿಘ್ನ – ಒಂದೇ ತಿಂಗಳಲ್ಲಿ ಮೂರು ಸಾವು!
3 hours ago
Kantara Death copy
ಕಾಂತಾರ ಚಾಪ್ಟರ್-1 ಚಿತ್ರದ ಸಹ ಕಲಾವಿದ ವಿಜು ಹೃದಯಾಘಾತದಿಂದ ಸಾವು
4 hours ago
India House Movie
`ದಿ ಇಂಡಿಯಾ ಹೌಸ್ʼ ಸಿನಿಮಾ ಶೂಟಿಂಗ್‌ ಸೆಟ್‌ನಲ್ಲಿ ನೀರಿನ ಟ್ಯಾಂಕರ್‌ ಸ್ಫೋಟ – ಹಲವರಿಗೆ ಗಾಯ
5 hours ago

You Might Also Like

Air India Crash CM Siddaramaiah
Bengaluru City

ಏರ್‌ ಇಂಡಿಯಾ ವಿಮಾನ ದುರಂತ – ಸಂತಾಪ ಸೂಚಿಸಿದ ಸಿದ್ದರಾಮಯ್ಯ

Public TV
By Public TV
5 minutes ago
DK Shivakumar 6
Bengaluru City

ಅಹಮದಾಬಾದ್ ವಿಮಾನ ಪತನ ದುರದುಷ್ಟಕರ ಘಟನೆ: ಡಿ.ಕೆ ಶಿವಕುಮಾರ್

Public TV
By Public TV
9 minutes ago
Ahmedabad Planecrash
Latest

ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

Public TV
By Public TV
14 minutes ago
Boeing 787 air india dreamliner
Latest

ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌,? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

Public TV
By Public TV
15 minutes ago
Ahmedabad Air India Air Crash
Latest

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನ – 110 ಪ್ರಯಾಣಿಕರು ಸಾವು

Public TV
By Public TV
32 minutes ago
Air India Flight Crash
Latest

ವಿಮಾನ ಪತನ | ಪ್ರಯಾಣಿಕರ ಕುಟುಂಬಸ್ಥರಿಗೆ ಧೈರ್ಯ ತುಂಬಿದ ವಿಮಾನಯಾನ ಸಚಿವ

Public TV
By Public TV
34 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?