ಮೈಸೂರು: ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ (H Vishwanath) ಅವರ ಪುತ್ರ ಅಮಿತ್ ದೇವರಹಟ್ಟಿ (Amit Devarahatti) ವಂಚನೆಗೊಳಗಾದ ಪ್ರಸಂಗವೊಂದು ನಡೆದಿದೆ.
ಹೌದು. ಗೂಗಲ್ನಲ್ಲಿ ಸಿಕ್ಕ ಬ್ಯಾಂಕ್ನ ಹೆಲ್ಪ್ ಲೈನ್ ನಂಬರ್ ಗೆ ಅಮಿತ್ ಕರೆ ಮಾಡಿದ್ದಾರೆ. ಇದೀಗ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ. ಹಾಗೂ ಇಡೀ ಮೊಬೈಲ್ ಡಾಟಾವನ್ನೆ ಕಳೆದು ಕೊಂಡಿದ್ದಾರೆ.
ಗೂಗಲ್ ನಲ್ಲಿ ಸಿಕ್ಕ ಬ್ಯಾಂಕ್ ಹೆಲ್ಪ್ ಲೈನ್ ನಂಬರ್ ನಕಲಿ. ಇದು ಗೊತ್ತಾಗದೆ ಹೆಲ್ಪ್ ಲೈನ್ ನವರು ಕೇಳಿದ ಬ್ಯಾಂಕ್ ಖಾತೆ ವಿವರಗಳನ್ನು ಅಮಿತ್ ನೀಡಿದ್ದಾರೆ. ಹೀಗೆ ವಿವರ ನೀಡಿದ್ದೆ ತಡ ಅಮಿತ್ ಅವರ ಬ್ಯಾಂಕ್ ಖಾತೆಯಲ್ಲಿದ್ದ 2 ಲಕ್ಷ ರೂ.ವನ್ನು ವಂಚಕರು ಎಗರಿಸಿದ್ದಾರೆ. ಅಲ್ಲದೆ ಮೊಬೈಲ್ ನಲ್ಲಿದ್ದ ಎಲ್ಲಾ ಡಾಟಾವನ್ನು ಕದ್ದಿದಿದ್ದಾರೆ. ಇದನ್ನೂ ಓದಿ: ಅನ್ಯಕೋಮಿನ ಸದಸ್ಯನಿಗೆ ದಕ್ಕಿದ ಅಧ್ಯಕ್ಷ ಸ್ಥಾನ – 19 ಗ್ರಾಪಂ ಸದಸ್ಯರಿಂದ ಸಾಮೂಹಿಕ ರಾಜೀನಾಮೆ
ಸದ್ಯ ಈ ಕುರಿತು ಅಮಿತ್ ದೇವರಹಟ್ಟಿ ಮೈಸೂರಿನ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ಇದನ್ನೂ ಓದಿ: ತಾಯಿ ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು – ದೇವರಲ್ಲಿ ಭಕ್ತನ ವಿಚಿತ್ರ ಕೋರಿಕೆ
Web Stories