ಹೆತ್ತತಾಯಿಯನ್ನೇ ನಂಬಲಾಗದ ಸ್ಥಿತಿಗೆ ಕಾಂಗ್ರೆಸ್ಸಿಗರು ಬಂದಿದ್ದಾರೆ: ಸಿ.ಟಿ ರವಿ

Public TV
2 Min Read
CCT RAVI

ಮೈಸೂರು: ಹೆತ್ತ ತಾಯಿಯನ್ನೇ ನಂಬಲಾಗದ ಸ್ಥಿತಿಗೆ ಅವರುಗಳು ಬಂದಿದ್ದಾರೆ ಎಂದು ಸಚಿವ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ.

ಪುಲ್ವಾಮಾ ದಾಳಿ ಬಗ್ಗೆ ರಾಹುಲ್ ಗಾಂಧಿ ಹೇಳಿಕೆ ವಿಚಾರವಾಗಿ ನಗರದಲ್ಲಿ ಪ್ರತಿಕ್ರಿಯಿಸಿದ ಸಚಿವರು, ಹೆತ್ತ ತಾಯಿಯನ್ನು ನಂಬಲಾಗದ ಸ್ಥಿತಿಗೆ ಅವರುಗಳು ಬಂದಿದ್ದಾರೆ. ಟೆರರಿಸ್ಟ್ ಗಳ ಮಟ್ಟ ಹಾಕಿದ್ರೆ ಅದನ್ನು ನಂಬುವುದಿಲ್ಲ. ಸರ್ಜಿಕಲ್ ಸ್ಟ್ರೈಕ್ ಅಂದ್ರೆ ಸೈನಿಕರನ್ನ ನಂಬಲ್ಲ. ಎಲೆಕ್ಷನ್ ಅಂದ್ರೆ ಇವಿಎಂ ನಂಬಲ್ಲ. ಅವರು ಯಾವ ದೇಶದ ನಾಯಕರು ಎಂಬುದೇ ಗೊತ್ತಿಲ್ಲ. ನಮ್ಮ ಸೈನಿಕರ ದಾಳಿಗಳನ್ನೇ ಅನುಮಾನದಲ್ಲಿ ನೋಡಿದ್ದಾರೆ. ಇಂಥವರ ಬಗ್ಗೆ ಏನು ಹೇಳೋದು ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

Congress flag 2 e1573529275338

ಇದೇ ವೇಳೆ ಟಿಪ್ಪು ಬಗ್ಗೆ ಮೈಸೂರು ರಂಗಾಯಣ ನಿರ್ದೇಶಕರ ವಿವಾದಾತ್ಮಕ ಹೇಳಿಕೆ ವಿಚಾರವಾಗಿ ಮಾತನಾಡಿ, ಟಿಪ್ಪು ಬಗ್ಗೆ ನಾನು ಕೂಡ ಮಾತನಾಡಿದ್ದೀನಿ. ತಾಕತ್ತಿದ್ದರೆ ನನ್ನನ್ನೂ ವಜಾ ಮಾಡಿ ಎಂದು ಕೇಳಲಿ ಅಂತ ಪ್ರಗತಿಪರ ಚಿಂತಕರಿಗೆ ಸಿ.ಟಿ ರವಿ ತಿರುಗೇಟು ನೀಡಿದರು.

ಟಿಪ್ಪು ಮತಾಂಧ, ಕೊಡವರ ಮೇಲೆ ದೌರ್ಜನ್ಯ ಮಾಡಿರುವುದು ಸತ್ಯ. ಮಲಬಾರಿಗಳ ಮೇಲೆ ಟಿಪ್ಪು ಹಾಗೂ ಆತನ ಸೈನಿಕರು ಅತ್ಯಾಚಾರ ಮಾಡಿರುವುದು ಸತ್ಯ. ಮಂಗಳೂರಿನಲ್ಲಿ ಕ್ರಿಶ್ಚಿಯನ್ನರ ಮೇಲೆ ದೌರ್ಜನ್ಯ ಮಾಡಿ ನೆತ್ತರು ಹರಿಸಿದ್ದ ಎಷ್ಟು ಸತ್ಯವ್ಯೋ, ಬ್ರಿಟೀಷರ ವಿರುದ್ಧ ಕೂಡ ಹೋರಾಟ ಮಾಡಿದ್ದು ಅಷ್ಟೇ ಸತ್ಯ. ನಾವೂ ಎರಡೂ ಸತ್ಯಗಳನ್ನು ಹೇಳಬೇಕು ಒಂದನ್ನು ಮಾತ್ರ ಹೇಳಿ ಇನ್ನೊಂದನ್ನು ಮರೆಮಾಚುವುದು ತಪ್ಪು ಎಂದು ಹೇಳಿದರು.

R Ashok Son Car Accident

ಕಾರು ಅಪಘಾತ ಪ್ರಕರಣದಲ್ಲಿ ಸಚಿವ ಆರ್. ಅಶೋಕ್ ಮಗ ಭಾಗಿ ಎಂಬುದರ ಬಗ್ಗೆ ಪ್ರತಿಕ್ರಿಯಿಸಿ, ಅಪಘಾತ ಸುದ್ದಿ ಮಾಡುತ್ತಿರುವುದು ಮಾಧ್ಯಮದವರು. ನನ್ನ ವಿರುದ್ಧವೂ ಪಟ್ಟ ಕಟ್ಟಿದ್ರಿ. ಕುಡಿದು ಗಾಡಿ ಓಡಿಸಿದ್ರು ಅಂತ ಹೇಳಿದ್ರಿ. ನನ್ನ ಪ್ರಕರಣದಲ್ಲೇ ಹೀಗೆ ಮಾಡಿರಬೇಕಾದ್ರೆ ನಾನು ಯಾರನ್ನು ನಂಬಲಿ ಎಂದು ಮಾಧಮ್ಯಗಳ ವಿರುದ್ಧ ಹರಿಹಾಯ್ದರು.

ಸಚಿವ ಆನಂದ್ ಸಿಂಗ್ ಅರಣ್ಯ ಖಾತೆ ನೀಡಿದಕ್ಕೆ ಟೀಕೆ ವಿಚಾರವಾಗಿಯೂ ಮಾತನಾಡಿದ ಸಚಿವರು, ಆನಂದ್ ಸಿಂಗ್ ಕಾಂಗ್ರೆಸ್ಸಿನಲ್ಲಿದ್ದಾಗ ಶುದ್ಧರಾಗಿದ್ದರು. ಈಗ ಕಾಂಗ್ರೆಸ್ ಬಿಟ್ಟ ಮೇಲೆ ಆಪಾದನೆ ಮಾಡ್ತಿದ್ದಾರೆ. ಕಾಂಗ್ರೆಸ್ ಗೆ ರಾಜೀನಾಮೆ ಕೊಟ್ಟು, ಈಗ ಗೆದ್ದ ಮೇಲೆ ಆಪಾದನೆ ಮಾಡೊದು ಎಷ್ಟು ಸರಿ ಎಂದು ಕಾಂಗ್ರೆಸ್ಸಿಗರನ್ನ ಪ್ರಶ್ನಿಸಿದರು.

Share This Article
Leave a Comment

Leave a Reply

Your email address will not be published. Required fields are marked *