ಮೈಸೂರ್ ಬ್ಯಾಂಕ್‍ನಿಂದ ಚಾಲುಕ್ಯ ಸರ್ಕಲ್ ಕಡೆಗೆ ಹೋಗುವ ಮಾರ್ಗ ಕ್ಲೋಸ್

Public TV
1 Min Read
Mysore Bank towards Chalukya Circle road 1

ಬೆಂಗಳೂರು: ಕಂಟೇನರ್ ಸಿಲುಕಿ ಹಾಕಿಕೊಂಡಿರುವುದರಿಂದ ಮೈಸೂರ್ ಬ್ಯಾಂಕ್‍ನಿಂದ ಚಾಲುಕ್ಯ ಸರ್ಕಲ್ ಕಡೆಗೆ ಹೋಗುವ ಮಾರ್ಗ ಕ್ಲೋಸ್ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಂದ್ ಮಾಡಲಾಗಿದೆ.

ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‍ನಲ್ಲಿರುವ ಅಂಡರ್ ಪಾಸ್‍ನಲ್ಲಿ ಕಂಟೇನರ್ ಪಾಸ್ ಆಗಬಹುದು ಎಂದುಕೊಂಡು ಚಾಲಕ ಕಂಟೇನರ್‌ನ್ನು ಚಲಾಯಿಸಿದ್ದ. ಆದರೆ ಕಂಟೇನರ್ ಮಂಭಾಗವು ಅಂಡರ್ ಪಾಸ್‍ನ ಮೇಲ್ಭಾಗಕ್ಕೆ ತಡೆದು ಗಾಡಿ ನಿಂತಿದೆ. ವಾಪಸ್ ಹೋಗಲು ಪ್ರಯತ್ನಿಸಿದಾಗ ಹಿಂದಕ್ಕೆ ಚಲಾಯಿಸಲಾಗದೆ ಅಂಡರ್ ಪಾಸ್‍ನಲ್ಲೇ ಸಿಲುಕಿಕೊಂಡಿದೆ. ಇದನ್ನೂ ಓದಿ: ಆಸ್ಟ್ರೇಲಿಯಾ ಮಾಜಿ ಆಟಗಾರ ಸೈಮಂಡ್ಸ್‌ ರಸ್ತೆ ಅಪಘಾತದಲ್ಲಿ ಸಾವು

Mysore Bank towards Chalukya Circle road

ಇದರ ಪರಿಣಾಮವಾಗಿ ಅಂಡರ್ ಪಾಸ್‍ನ ರಸ್ತೆಯನ್ನು ಸ್ಥಗಿತಗೊಳಿಸಲಾಗಿದೆ. ಪೊಲೀಸರು ಬ್ಯಾರಿಕೇಡ್ ಹಾಕಿ ರಸ್ತೆ ಕ್ಲೋಸ್ ಮಾಡಿದ್ದಾರೆ. ವಾಹನ ಸಂಚಾರ ಕಡಿಮೆ ಇರುವುದರಿಂದ ಓನ್ ವೇ ಮೂಲಕ ಸವಾರರು ಚಲಿಸುತ್ತಿದ್ದಾರೆ. ಇದನ್ನೂ ಓದಿ: ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ನಿಧನ

Share This Article
Leave a Comment

Leave a Reply

Your email address will not be published. Required fields are marked *