ಬೆಂಗಳೂರು: ನಮ್ಮಪ್ಪನಿಗೆ ನನ್ನನ್ನು ಇಂಜಿನಿಯರ್ ಮಾಡುವ ಆಸೆಯಿತ್ತು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಹೇಳಿದ್ದಾರೆ
ಇಂಜಿನಿಯರ್ಸ್ ದಿನದ ಹಿನ್ನೆಲೆ ಕೆ.ಆರ್.ಸರ್ಕಲ್ನಲ್ಲಿರುವ ವಿಶ್ವೇಶ್ವರಯ್ಯ ಪ್ರತಿಮೆಗೆ ಕ್ರೇನ್ನಲ್ಲಿ ಮೇಲಕ್ಕೆ ತೆರಳಿ ಡಿಕೆಶಿ ಮಾಲಾರ್ಪಣೆ ಮಾಡಿದರು. ಎರಡೆರಡು ಬಾರಿ ತಪ್ಪಿ ಹೋಗಿ ಮೂರನೇ ಪ್ರಯತ್ನಕ್ಕೆ ಹಾರಹಾಕಿದರು.ಇದನ್ನೂ ಓದಿ: ಸಂವಿಧಾನದ ರಕ್ಷಣೆ ಎಲ್ಲ ನಾಗರಿಕರ ಜವಾಬ್ದಾರಿ: ಸಿದ್ದರಾಮಯ್ಯ
ರಾಷ್ಟ್ರೀಯ ಇಂಜಿನಿಯರ್ ದಿನಾಚರಣೆ ಅಂಗವಾಗಿ ಇಂದು ಕರ್ನಾಟಕ ಇಂಜಿನಿಯರುಗಳ ಒಕ್ಕೂಟ(ರಿ) ವತಿಯಿಂದ ಬೆಂಗಳೂರಿನ ಕೆ.ಆರ್.ವೃತ್ತದಲ್ಲಿರುವ ಭಾರತರತ್ನ ಸರ್. ಎಂ ವಿಶ್ವೇಶ್ವರಯ್ಯ ರವರ ಪುತ್ಥಳಿಗೆ ಮಾಲಾರ್ಪಣೆ ನೆರವೇರಿಸಿ, ಗೌರವ ಸಮರ್ಪಿಸಿದೆ. pic.twitter.com/CXveol2iQo
— DK Shivakumar (@DKShivakumar) September 15, 2025
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮಪ್ಪನಿಗೆ ನಾನು ಇಂಜಿನಿಯರ್ ಆಗಬೇಕು ಅಂತ ಆಸೆಯಿತ್ತು, ಆದರೆ ನನಗೆ ಇಂಜಿನಿಯರಿಂಗ್ ಕೋರ್ಸ್ ಮಾಡೋಕೆ ಆಗಲಿಲ್ಲ. ಆದರೆ ಇಂಜಿನಿಯರ್ಗಳನ್ನು ತಯಾರು ಮಾಡುವ ಕಾಲೇಜು ಸ್ಥಾಪಿಸಿದ್ದೇನೆ. ನನ್ನ ಇಬ್ಬರು ಮಕ್ಕಳು ಇಂಜಿನಿಯರ್ಸ್. ನಾನು ಜಲಸಂಪನ್ಮೂಲ, ಇಂಧನ ಇಲಾಖೆಯಲ್ಲಿ ಇಂಜಿನಿಯರ್ಸ್ ಜೊತೆ ಕೆಲಸ ಮಾಡಿದ್ದೇನೆ. ಅವರ ಕೆಲಸ, ಕಾರ್ಯಗಳ ಬಗ್ಗೆ ನನಗೆ ಅರಿವು ಇದೆ ಎಂದರು.