ಶಾಂತಿನಗರ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ ಹತ್ಯೆಗೆ ಸಂಚು?

Public TV
1 Min Read
REDDY 2

ಬೆಂಗಳೂರು: ಇಲ್ಲಿನ ಶಾಂತಿನಗರ ಜೆಡಿಎಸ್ ಅಭ್ಯರ್ಥಿ ಶ್ರೀಧರ್ ರೆಡ್ಡಿ ಹತ್ಯೆಗೆ ಸ್ಕೆಚ್ ಹಾಕಲಾಗಿತ್ತಾ ಅನ್ನೋ ಪ್ರಶ್ನೆಯೊಂದು ಎದ್ದಿದೆ. ಯಾಕಂದ್ರೆ ನೀಲಸಂದ್ರ ನಿವಾಸಿ ಘಸರ್ ಖಾನ್ ಎಂಬಾತ ಶ್ರೀಧರ್ ರೆಡ್ಡಿ ನಿವಾಸದ ಬಳಿ ಅನುಮಾನಾಸ್ಪದವಾಗಿ ತಿರುಗಾಡಿಕೊಂಡಿದ್ದನು ಎನ್ನಲಾಗಿದೆ.

BNG

ಶನಿವಾರ ರಾತ್ರಿ ಸುಮಾರು 12 ಗಂಟೆ ವೇಳೆ ಶ್ರೀಧರ್ ರೆಡ್ಡಿ ಮನೆಯ ಬಳಿ ಬೈಕ್‍ನಲ್ಲಿ ಬಂದ ಘಸರ್ ಖಾನ್ ಎಂಬಾತ ಶ್ರೀಧರ್ ರೆಡ್ಡಿ ಎಲ್ಲಿ..? ಎಷ್ಟು ಟೈಂಗೆ ಮನೆಗೆ ಬರ್ತಾರೆ ಅಂತಾ ವಿಚಾರಿಸಿದ್ದನು. ಈ ವೇಳೆ ಅನುಮಾನಗೊಂಡ ಕೆಲ ಕಾರ್ಯಕರ್ತರು, ಘಸರ್ ಖಾನ್‍ನನ್ನು ಸೆರೆಹಿಡಿದು ಬೈಕ್ ಪರಿಶೀಲನೆ ನಡೆಸಿದ್ರು.

BNG 23

ಈ ವೇಳೆ ಬೈಕ್ ನಲ್ಲಿ ಲಾಂಗ್ ಇರೋದು ಬೆಳಕಿಗೆ ಬಂದಿದೆ. ಲಾಂಗ್ ಜೊತೆಗೆ ಗಾಂಜಾ, ಕಾಂಗ್ರೆಸ್ ಶಾಸಕ ಎನ್‍ಎ ಹ್ಯಾರೀಸ್ ಫೋಟೋ ಇರೋ ಟೋಪಿ ಕಂಡುಬಂದಿದೆ. ಇದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

BIKE

ಕೂಡಲೇ ಸ್ಥಳಕ್ಕೆ ಬಂದ ಆಶೋಕನಗರ ಪೊಲೀಸರು ಆರೋಪಿ ಘಸರ್ ಖಾನ್‍ನನ್ನು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.

BIKE NO

Share This Article
Leave a Comment

Leave a Reply

Your email address will not be published. Required fields are marked *