Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: 6 ವರ್ಷಗಳ ಹಿಂದೆ ತಂದೆ ತಾಯಿಯನ್ನ ಕೊಂದು ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದ ಕೊಲೆ ಆರೋಪಿ!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | 6 ವರ್ಷಗಳ ಹಿಂದೆ ತಂದೆ ತಾಯಿಯನ್ನ ಕೊಂದು ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದ ಕೊಲೆ ಆರೋಪಿ!

Latest

6 ವರ್ಷಗಳ ಹಿಂದೆ ತಂದೆ ತಾಯಿಯನ್ನ ಕೊಂದು ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದ ಕೊಲೆ ಆರೋಪಿ!

Public TV
Last updated: February 5, 2017 4:52 pm
Public TV
Share
2 Min Read
SHARE

– ಲಿವಿಂಗ್ ಟುಗೆದರ್ ಸಂಗಾತಿಯನ್ನು ಕೊಂದು ಮನೆಯಲ್ಲೇ ಗೋರಿ ಕಟ್ಟಿದ್ದ

ಭೋಪಾಲ್: ವ್ಯಕ್ತಿಯೊಬ್ಬ ಲಿವಿಂಗ್ ಟುಗೆದರ್‍ನಲ್ಲಿದ್ದ ತನ್ನ ಸಂಗಾತಿಯನ್ನು ಕೊಂದು ತನ್ನ ಮನೆಯಲ್ಲೇ ಗೋರಿ ಕಟ್ಟಿದ್ದ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಇದೀಗ ಬಂಧಿತ ಆರೋಪಿ ತನ್ನ ತಂದೆ ತಾಯಿಯನ್ನೂ ಕೊಂದು ಮನೆಯ ಕಾಂಪೌಂಡ್‍ನಲ್ಲಿ ಹೂತಿದ್ದೆ ಎಂದು ಪೊಲೀಸರಿಗೆ ಹೇಳಿದ್ದಾನೆ.

ಮಧ್ಯಪ್ರದೇಶದ ಭೋಪಾಲ್ ನಿವಾಸಿ ಉದ್ಯಾನ್ ದಾಸ್ ಎರಡು ತಿಂಗಳ ಹಿಂದೆ ತನ್ನ ಸಂಗಾತಿ ಆಕಾಂಕ್ಷಾಳನ್ನು ಕೊಂದು ಆಕೆಯ ಶವವನ್ನ ಪೆಟ್ಟಿಗೆಯಲ್ಲಿ ಹಾಕಿ ಮನೆಯಲ್ಲೇ ಗೋರಿ ಕಟ್ಟಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಾನ್ ದಾಸ್‍ನನ್ನು ವಿಚಾರಣೆಗೆ ಒಳಪಡಿಸಿದಾಗ ಈತ 6 ವರ್ಷಗಳ ಹಿಂದೆ ತನ್ನ ತಂದೆ ತಾಯಿಯನ್ನೂ ಕೊಂದಿರುವುದಾಗಿ ಹೇಳಿದ್ದಾನೆ. 2010-11 ರಲ್ಲಿ ತನ್ನ ತಂದೆ ತಾಯಿಯನ್ನು ಕೊಂದು ರಯ್‍ಪುರದ ಮನೆಯ ಕಾಂಪೌಂಡ್‍ನಲ್ಲಿ ಹೂತಿರುವುದಾಗಿ ಉದ್ಯಾನ್ ದಾಸ್ ಹೇಳಿದ್ದಾನೆ.

udyan das

ಈತ ನೀಡಿರುವ ಈ ಆಘಾತಕಾರಿ ಹೇಳಿಕೆಯ ಬಗ್ಗೆ ಪರಿಶೀಲಿಸುತ್ತಿರುವುದಾಗಿ ಪೊಲೀಸರು ಹೇಳಿದ್ದಾರೆ. ನಾವು ರಾಯ್‍ಪುರಕ್ಕೆ ಪೊಲೀಸ್ ತಂಡವನ್ನು ಕಳಿಸುತ್ತಿದ್ದೇವೆ. ಉದ್ಯಾನ್ ಪದೇ ಪದೇ ಹೇಳಿಕೆಗಳನ್ನು ಬದಲಾಯಿಸುತ್ತಿರುವುದರಿಂದ ಈತ ಹೇಳುವುದೆಲ್ಲವನ್ನೂ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ.

ಮೊದಲು ಉದ್ಯಾನ್ ದಾಸ್ ನೀಡಿದ್ದ ಹೇಳಿಕೆಯಲ್ಲಿ, ಭೋಪಾಲ್‍ನ ಬಿಇಹೆಚ್‍ಇಎಲ್‍ನ ನಿವೃತ್ತ ಅಧಿಕಾರಿಯಾದ ತನ್ನ ತಂದೆ ರಾಯ್‍ಪುರ್‍ನಲ್ಲಿ ಫ್ಯಾಕ್ಟರಿ ನಡೆಸುತ್ತಿದ್ದು, 2010ರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು ಎಂದು ಹೇಳಿದ್ದ. ತನ್ನ ತಾಯಿ ಇಂದ್ರಾಣಿ ಅಮೆರಿಕದಲ್ಲಿದ್ದಾರೆ ಎಂದು ಹೇಳಿದ್ದ. ಆರೋಪಿ ತುಂಬಾ ಚಾಲಾಕಿಯಾಗಿದ್ದು, ಇಂಗ್ಲಿಷ್‍ನಲ್ಲಿ ಸಾರಾಗವಾಗಿ ಮಾತಾಡ್ತಾನೆ. ಕಾನ್ಫಿಡೆಂಟ್ ಆಗಿ ಸುಳ್ಳು ಹೇಳ್ತಾನೆ ಅಂತ ಪೊಲೀಸರು ಹೇಳಿದ್ದಾರೆ.

ಉದ್ಯಾನ್ ಈ ಹಿಂದೆ ಹೇಳಿದಂತೆ ಐಐಟಿ ಮಾಡಿಲ್ಲ, ಆತ ದ್ವಿತೀಯ ಪಿಯುಸಿ ಪಾಸ್ ಆಗಿದ್ದಾನೆ ಅಷ್ಟೆ. ಈತ ಐಷಾರಾಮಿ ಜೀವನ ನಡೆಸುತ್ತಿದ್ದ. ಈತನ ಪೋಷಕರಿಗೆ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಫ್ಲಾಟ್ ಇದ್ದು, ಅದರಿಂದ ತಿಂಗಳಿಗೆ 10 ಸಾವಿರ ರೂ. ಬಾಡಿಗೆ ಬರುತ್ತದೆ. ರಾಯುಪುರ್‍ನಲ್ಲಿರುವ ಫ್ಲಾಟ್‍ನಿಂದ 7 ಸಾವಿರ ರೂ. ತಿಂಗಳ ಬಾಡಿಗೆ ಹಾಗೂ ಭೋಪಾಲ್‍ನ ಸಾಕೇತ್ ನಗರದಲ್ಲಿ ಈತ ವಾಸವಿರುವ ಕಟ್ಟಡದಲ್ಲಿ ಕೆಳ ಮಹಡಿಯ ಬಾಡಿಗೆ ಮನೆಯಿಂದ 5 ಸಾವಿರ ರೂ. ತಿಂಗಳ ಬಾಡಿಗೆ ಬರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೆ ಉದ್ಯಾನ್ ಮತ್ತು ಆತನ ತಂದೆಯ ಜಾಯಿಂಟ್ ಅಕೌಂಟ್‍ನಲ್ಲಿ 8.5 ಲಕ್ಷ ಫಿಕ್ಸ್ಡ್ ಡೆಪಾಸಿಟ್ ಇದ್ದು ಇದರ ಬಡ್ಡಿಯೂ ಕೂಡ ಉದ್ಯಾನ್‍ಗೆ ಸಿಗುತ್ತಿತ್ತು. ಉದ್ಯಾನ್ ತನ್ನ ಪೋಷಕರ ಪಿಂಚಣಿ ಹಣವನ್ನೂ ಕೂಡ ಡ್ರಾ ಮಾಡಿಕೊಳ್ಳುತ್ತಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

concrete tomb

ಉದ್ಯಾನ್ ಲಿವಿಂಗ್ ಟುಗೆದರ್‍ನಲ್ಲಿದ್ದ ಗೆಳತಿ ಆಕಾಂಕ್ಷಾಳನ್ನು ಕೊಂದು ಆಕೆಯ ಶವವನ್ನು ಒಂದು ಪೆಟ್ಟಿಗೆಯಲ್ಲಿ ಹಾಕಿ, ಅದರ ಮೇಲೆ ಸಿಮೆಂಟ್, ನೀರು ಮತ್ತು ಕಾಂಕ್ರೀಟ್ ಸುರಿದು ಮನೆಯಲ್ಲೇ ಗೋರಿ ಕಟ್ಟಿದ್ದ. ಗೋರಿಯನ್ನೇ ತನ್ನ ಮಂಚದಂತೆ ಮಾಡಿಕೊಂಡು ಪ್ರತಿದಿನ ಇದರ ಮೇಲೆ ಮಲಗುತ್ತಿದ್ದ. ಆಕಾಂಕ್ಷಾ ಎರಡು ತಿಂಗಳಿನಿಂದ ಫೋನ್ ಮಾಡದ ಕಾರಣ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಕಾಲ್ ಟ್ರೇಸ್ ಮಾಡಿ ಉದ್ಯಾನ್‍ನನ್ನು ಬಂಧಿಸಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿತ್ತು.

akanksha

ಇದನ್ನೂ ಓದಿ: ಅಮೆರಿಕಗೆ ಹೋಗ್ತಿದ್ದೀನಿ ಅಂತ ಹೇಳಿ ಉದ್ಯಾನ್ ಜೊತೆ ಲಿವಿಂಗ್ ಟುಗೆದರ್‍ನಲ್ಲಿದ್ದ ಆಕಾಂಕ್ಷಾ

 

TAGGED:bhopalliving togethermadhyapradeshpublic tvudyan dasಉದ್ಯಾನ್ ದಾಸ್ಪಬ್ಲಿಕ್ ಟಿವಿಭೋಪಾಲ್ಮಧ್ಯಪ್ರದೇಶಲಿವಿಂಗ್ ಟುಗೆದರ್
Share This Article
Facebook Whatsapp Whatsapp Telegram

Cinema news

sudeep darshan
ದರ್ಶನ್‌ಗೆ ಯಾವಾಗ್ಲೂ ಒಳ್ಳೆಯದಾಗಲಿ ಎಂದು ಬಯಸುತ್ತೇನೆ: ಸುದೀಪ್
Cinema Latest Main Post Sandalwood
Sangeetha Bhat
ನೀಳ ಕೇಶರಾಶಿಗೆ ಕತ್ತರಿ ಹಾಕಿದ ಸಂಗೀತಾ ಭಟ್
Cinema Latest Sandalwood Top Stories
Rashmika Mandanna Mysaa
ರಶ್ಮಿಕಾ ಮಂದಣ್ಣ `ಮೈಸಾ’ ಸಿನಿಮಾದ ಮೊದಲ ಗ್ಲಿಂಪ್ಸ್‌ ರಿಲೀಸ್
Cinema Latest South cinema Top Stories
Allu Arjun Trivikram 3
ಸಾವಿರ ಕೋಟಿ ಬಜೆಟ್‌ನಲ್ಲಿ ಅಲ್ಲು ಅರ್ಜುನ್ ಮತ್ತೊಂದು ಸಿನಿಮಾ..!
Cinema Latest Top Stories

You Might Also Like

Explosion In Dhaka
Latest

ಬಾಂಗ್ಲಾದೇಶ ಬಿಕ್ಕಟ್ಟು ಮತ್ತಷ್ಟು ತೀವ್ರ – ಢಾಕಾದಲ್ಲಿ ಸ್ಫೋಟ; ಓರ್ವ ಸಾವು

Public TV
By Public TV
8 minutes ago
Alcoholic Drink copy
Bengaluru City

ಗ್ಯಾರಂಟಿಗಾಗಿ 569 ಮದ್ಯದಂಗಡಿಗಳಿಗೆ ಇ-ಹರಾಜು ಲೈಸೆನ್ಸ್ – 700 ಕೋಟಿ ಆದಾಯ ಸಂಗ್ರಹ ಗುರಿ

Public TV
By Public TV
10 minutes ago
Mysuru Ahinda Samavesha Meeting
Districts

ಜ.25ಕ್ಕೆ ಸಿಎಂ ತವರಿನಲ್ಲಿ ಅಹಿಂದ ಸಮಾವೇಶ

Public TV
By Public TV
40 minutes ago
KN Rajanna
Districts

ಅಧಿಕಾರ ಹಂಚಿಕೆ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಮಾಡಲ್ಲ: ರಾಜಣ್ಣ

Public TV
By Public TV
1 hour ago
digital arrest old man
Crime

‘ಡಿಜಿಟಲ್‌ ಅರೆಸ್ಟ್‌’ ವಂಚನೆ; 9 ಕೋಟಿ ಹಣ ಕಳೆದುಕೊಂಡ 85ರ ವೃದ್ಧ

Public TV
By Public TV
2 hours ago
Unnao Rape Survivor Met Rahul Gandhi
Latest

ರಾಹುಲ್‌ ಗಾಂಧಿ ಭೇಟಿಯಾದ ಉನ್ನಾವೋ ಅತ್ಯಾಚಾರ ಸಂತ್ರಸ್ತೆ

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?