ಮಾಯಾ ಬಾರ್ ಮಾಲೀಕ ಯಾದವ್ ಕೊಲೆ- ಬಾರ್ ಸಪ್ಲೈಯರ್ ಮಿಶ್ರಾ ಅರೆಸ್ಟ್

Public TV
1 Min Read
UDP B

ಉಡುಪಿ: ಮುಂಬೈ ಮಾಯಾ ಬಾರ್ ಮಾಲೀಕ ವಶಿಷ್ಟನ ಕೊಲೆಗೈದ ಅದೇ ಬಾರಿನ ಸಪ್ಲೈಯರ್ ಅಂದರ್ ಆಗಿದ್ದಾನೆ. ಉಡುಪಿ ಜಿಲ್ಲೆ ಹಿರಿಯಡಕದ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಉತ್ತರ ಪ್ರದೇಶ ಮೂಲದ ಮುಂಬೈ ಉದ್ಯಮಿ ವಶಿಷ್ಟ ಸತ್ಯನಾರಾಯಣ ಯಾದವ್ ಕೊಲೆ ಪ್ರಕರಣವನ್ನ ಭೇದಿಸಿರುವ ಹಿರಿಯಡ್ಕ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ವಶಿಷ್ಟ ಯಾದವ್ ಮಾಲೀಕತ್ವದ ಮಾಯಾ ಡೇ ಲೇಡಿಸ್ ಬಾರ್ ಅ್ಯಂಡ್ ರೆಸ್ಟೋರೆಂಟ್ ಸಿಬ್ಬಂದಿ ಮೂಲತಃ ದಿಲ್ಲಿ ನಿವಾಸಿ ಸುಮಿತ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಪೊಲೀಸರು ಆತನನ್ನು ಬಂಧಿಸಿದ್ದಾರೆ. ಉಡುಪಿಯ ಎಕೆಎಂಎಸ್ ಬಸ್ ಕಂಪನಿಯ ಸಿಬ್ಬಂದಿಯಾದ ಅಬ್ದುಲ್ ಶಕೂರ್, ಅವಿನಾಶ್ ಕರ್ಕೇರ, ಮಹಮ್ಮದ್ ಶರೀಫ್ ಬಂಧಿತ ಆರೋಪಿಗಳು.

UDUPI UDP MURDER b copy

ಮೃತ ವಶಿಷ್ಟ ಸತ್ಯನಾರಾಯಣ ರಾವ್ ಸಾಯುವುದಕ್ಕೂ ಮೊದಲು ಪತ್ನಿ ನೀತಾಳಿಗೆ ಕರೆ ಮಾಡಿದ್ದ. ಕರೆಯಲ್ಲಿ ನಾನು ಸ್ನೇಹಿತ ಸೈಫ್ ಹಾಗೂ ಅಕ್ರಂ ಜೊತೆ ಇರುವುದಾಗಿ ಹೇಳಿದ್ದ. ವಿಡಿಯೋ ಕರೆಯಲ್ಲೂ ಪತಿ ಸೈಫ್ ಹಾಗೂ ಅಕ್ರಂ ಜೊತೆ ಇರುವುದು ನೋಡಿದ್ದಳು. ಹೀಗಾಗಿ ಮೃತರ ಪತ್ನಿ ನೀತಾ ಯಾದವ್ ಸ್ನೇಹಿತರ ಮೇಲೆ ಸಂಶಯ ವ್ಯಕ್ತಪಡಿಸಿದ್ದು ಪೊಲೀಸರು ಮತ್ತಿಬ್ಬರಿಗಾಗಿ ಧ ನಡೆಸಿದ್ದಾರೆ. ನ್ಯೂ ಮುಂಬೈನಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಮೃತ ವಶಿಷ್ಟ ಉಡುಪಿಗೆ ಆಗಮಿಸಿದ್ಯಾಕೆ? ಉಡುಪಿ ತಾಲೂಕಿನ ಕುಕ್ಕೆಹಳ್ಳಿ ಗ್ರಾಮಕ್ಕೆ ವಶಿಷ್ಟ ತಾನಾಗೆ ಆಗಮಿಸಿದ್ದನಾ? ಅಥವಾ ಆರೋಪಿಗಳೇ ಕೊಂದು ಕುಕ್ಕೆಹಳ್ಳಿಯಲ್ಲಿ ಎಸೆದು ಹೋಗಿದ್ರಾ ಎಂಬೂದು ಉತ್ತರ ಸಿಗದ ಪ್ರಶ್ನೆಗಳು.

UDUPI UDP MURDER a copy

ಉತ್ತರ ಪ್ರದೇಶ ಮೂಲದ ಮುಂಬೈ ಉದ್ಯಮಿ ಕೊಲೆಗೆ ಕಾರಣವಾದರೂ ಏನೂ ಅನ್ನೋದು ಇನ್ನಷ್ಟೇ ಬಹಿರಂಗವಾಗಬೇಕಿದೆ. ತನಿಖೆಗಾಗಿ ಪೊಲೀಸರು ಎರಡು ತಂಡ ರಚನೆ ಮಾಡಿದ್ದಾರೆ. ವಶಿಷ್ಟ ಸತ್ಯನಾರಾಯಣ ಉಡುಪಿ ಬಂದಿದ್ಯಾಕೆ? ಸುಮಿತ್ ಮಿಶ್ರಾ ಹಳೇ ವೈಷಮ್ಯದಿಂದ ಕೊಂದ್ನಾ ಎಂಬ ಬಗ್ಗೆ ಪೊಲೀಸ್ ತನಿಖೆಯಲ್ಲಿ ಬಹಿರಂಗ ಆಗಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *