ಕೊನೆ ಗಳಿಗೆಯಲ್ಲಿ ಪಂದ್ಯವನ್ನು ಗೆಲ್ಲಿಸುವ ಧೋನಿಯನ್ನು ಹೊಗಳಿದ ರವಿಶಾಸ್ತ್ರಿ

Public TV
1 Min Read
dhoni ravi shastri

ನವದೆಹಲಿ: ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ವರ್ಲ್ಡ್ ಕಪ್ ಪಂದ್ಯಗಳಲ್ಲಿ ಮಹೇಂದ್ರ ಸಿಂಗ್ ಧೋನಿ ಪಾತ್ರ ಹೇಗಿರಲಿದೆ ಎಂಬುದನ್ನು ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಟೀಂ ಇಂಡಿಯಾದ ಇಂದು ಸುದ್ದಿಗೋಷ್ಠಿ ನಡೆಸಿತ್ತು.

ಎಲ್ಲ ಪಂದ್ಯಗಳಲ್ಲಿ ಧೋನಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸಲಿದ್ದಾರೆ. ಮಾಜಿ ನಾಯಕನಾಗಿರುವ ಧೋನಿ ಒಂದು ಬಲಿಷ್ಠ ತಂಡವನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಓರ್ವ ಆಟಗಾರನಾಗಿಯೂ ತಂಡಕ್ಕೆ ಧೋನಿ ನೆರವಾಗ್ತಾರೆ. ಧೋನಿ ಅವರ ರನ್ ಔಟ್, ಸ್ಟಂಪಿಂಗ್ ಒಂದು ಪಂದ್ಯವನ್ನು ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಧೋನಿಯವರ ಆಟದ ಶೈಲಿ, ತಂತ್ರ ಕೊನೆ ಗಳಿಗೆಯಲ್ಲಿಯೂ ಪಂದ್ಯವನ್ನು ಬದಲಾಯಿಸುತ್ತದೆ. ಐಪಿಎಲ್ ನಲ್ಲಿ ಧೋನಿ ಚೆನ್ನೈ ತಂಡವನ್ನು ಮುನ್ನಡೆಸಿದ ಉದಾಹರಣೆ ನಮ್ಮ ಮುಂದಿದೆ ಎಂದು ಕೋಚ್ ರವಿ ಶಾಸ್ತ್ರಿ ಹೇಳಿದರು.

dhoni ravi shastri a

ಕೇದಾರ್ ಜಾಧವ್ ಫಿಟ್ ಆಗಿದ್ದು, ತಂಡದಲ್ಲಿ ಇರಲಿದ್ದಾರೆ. ತಂಡದ ಎಲ್ಲ ಆಟಗಾರರು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ನಾವು ನಮ್ಮ ಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಆಡಿದಲ್ಲಿ ವಿಶ್ವಕಪ್‍ನ್ನು ದೇಶಕ್ಕೆ ತರಲು ಸಾಧ್ಯ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, ಈ ಬಾರಿಯ ವಿಶ್ವಕಪ್ ಪಂದ್ಯಾವಳಿಗಳು ತುಂಬಾ ಕಠಿಣದಾಯಕವಾಗಿರಲಿದೆ. ಯಾವುದೇ ತಂಡ ಸಹ ಮುನ್ನಡೆ ಪಡೆದುಕೊಳ್ಳಬಹುದು. ಹಾಗಾಗಿ ಪ್ರತಿಯೊಂದು ಪಂದ್ಯವನ್ನು ಅತ್ಯಂತ ಎಚ್ಚರಿಕೆಯಿಂದ ಆಡಬೇಕಿದೆ. ತಂಡ ಫ್ರೆಶ್ ಬೌಲರ್ ಗಳನ್ನು ಹೊಂದಿದ್ದು, ಎಲ್ಲರು 50 ಓವರ್ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಐಪಿಎಲ್ ನಿಂದ ಒಳ್ಳೆಯ ತರಬೇತಿ ಮತ್ತು ಅನುಭವವನ್ನು ನಮ್ಮ ಆಟಗಾರರು ಪಡೆದಿದ್ದು ಲಾಭದಾಯಕವಾಗಿದೆ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *