ತಾಕತ್ ಇದ್ರೆ ಬಹಿರಂಗವಾಗಿ ನನ್ನ ಹೆಸರು ಹೇಳಿ ಟೀಕಿಸಿ- ಕಾಂಗ್ರೆಸ್ ಸಂಸದ ಸವಾಲ್

Public TV
1 Min Read
kolar MP KH Muniyappa

ಚಿಕ್ಕಬಳ್ಳಾಪುರ: ತಾಕತ್ ಇದ್ದರೆ ಬಹಿರಂಗವಾಗಿ ನನ್ನ ಹೆಸರು ಹೇಳಿ ಟೀಕೆ ಮಾಡಿ ಎಂದು ಕೋಲಾರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಕೆ ಎಚ್ ಮುನಿಯಪ್ಪ ತಮ್ಮ ವಿರೋಧಿಗಳಿಗೆ ಸವಾಲು ಹಾಕಿದ್ದಾರೆ.

ಜಿಲ್ಲೆಯ ಚಿಂತಾಮಣಿಯಲ್ಲಿ ಕಾಂಗ್ರೆಸ್ ಶಕ್ತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೀಕೆ ಮಾಡುವುದಾದರೆ ಬಹಿರಂಗವಾಗಿ ನನ್ನ ಹೆಸರೇಳಿ ಟೀಕೆ ಮಾಡಿ. ಆಗ ನಾನು ಅದಕ್ಕೆ ಉತ್ತರ ಕೊಡುತ್ತೇನೆ. ಆದರೆ ಹೊರಗೊಂದು, ಒಳಗೊಂದು ಹೆಸರು ಹೇಳದೆ ಟೀಕೆ ಮಾಡಿದರೆ ನಾನು ಮಾತಾಡಲ್ಲ ಎಂದು ಗುಡುಗಿದ್ದಾರೆ.

CKB CONGRESS

ಮನುಷ್ಯತ್ವ ಇದ್ದರೆ ಬಹಿರಂಗವಾಗಿ ಮಾತನಾಡಿ, ನಿಮ್ಮ ಟೀಕೆಗಳಿಗೆ ನಾನು ಪ್ರತ್ಯುತ್ತರ ನೀಡುತ್ತೇನೆ. ಮುಸುಕಿನಲ್ಲಿ ಗುದ್ದಾಡಬೇಡಿ ಹೊರಗೆ ಬನ್ನಿ ನಾನು ಎಂದೂ ತಪ್ಪು ಮಾಡಿಲ್ಲ. ನಾನು ತಪ್ಪು ಮಾಡಿದರೆ ಜನರೇ ನನಗೆ ತೀರ್ಪು ಕೊಡ್ತಾರೆ. ನಾನು ರೈತರ ಪರ, ಜನರ ಪರ, ಅಲ್ಪ ಸಂಖ್ಯಾತರ ಪರ ಕೆಲಸ ಮಾಡಿದ್ದೇನೆ. ನನ್ನ ಕ್ಷೇತ್ರದ ಎಲ್ಲಾ ಭಾಗಗಳಿಗೂ ಸಮಾನವಾಗಿ ಕೆಲಸ ಮಾಡಿದ್ದೇನೆ. ನಾನು ಸರಿಯಾಗಿ ಇರುವುದರಿಂದಲೇ ಜನರು ನನ್ನ ಪರ ಇದ್ದಾರೆ ಅಂತ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಸ್ವಪಕ್ಷದವರೇ ಆದ ಶ್ರೀನಿವಾಸಪುರ ಕ್ಷೇತ್ರದ ಶಾಸಕ, ಸ್ಪೀಕರ್ ರಮೇಶ್ ಕುಮಾರ್ ಹಾಗೂ ಚಿಂತಾಮಣಿ ಮಾಜಿ ಶಾಸಕ ಎಂ ಸಿ ಸುಧಾಕರ್ ಸೇರಿದಂತೆ ಕೆಲ ಸಂಘಟನೆಗಳ ವಿರೋಧಿಗಳಿಗೆ ಎಚ್ ಮುನಿಯಪ್ಪ ಟಾಂಗ್ ಕೊಟ್ಟಂತೆ ಭಾಸವಾಗಿತ್ತು. ಆದ್ರೆ ಈ ಬಗ್ಗೆ ಅವರು ಯಾರು ಎಂಬ ಕೇಳಿದ ಪ್ರಶ್ನೆಗೆ ಕೆ ಎಚ್ ಮುನಿಯಪ್ಪ ಪ್ರತಿಕ್ರಿಯಿಸಲು ನಿರಾಕರಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com

Share This Article