ಹುಬ್ಬಳ್ಳಿ/ಧಾರವಾಡ: ಕೌಟುಂಬಿಕ ಕಲಹಕ್ಕೆ ಬೇಸತ್ತು ಹೆತ್ತ ಮಕ್ಕಳನ್ನೆ ತಾಯಿ ಕೊಲೆ ಮಾಡಿರುವ ಹೃದಯ ವಿದ್ರಾವಕ ಘಟನೆ ಹುಬ್ಬಳ್ಳಿಯ ಆಯೋಧ್ಯನಗರದಲ್ಲಿ ನಡೆದಿದೆ.
ರೋಹಿತ್ (6) ಮತ್ತು ರೋಹಿಣಿ (4) ತಾಯಿಯಿಂದಲೇ ಕೊಲೆಯಾದ ದುರ್ದೈವಿ ಮಕ್ಕಳು. ಆರೋಪಿ ತಾಯಿ ಪ್ರೇಮಾ ಪರುಶುರಾಮ ಹುಲಕೋಟಿ ಇಬ್ಬರು ಮಕ್ಕಳನ್ನು ವೇಲ್ ನಿಂದ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಪತಿ ಪರಶುರಾಮ ಕೆಲಸಕ್ಕೆ ಹೋದ ಸಮಯದಲ್ಲಿ ತಾಯಿ ಈ ಕೃತ್ಯ ಎಸಗಿದ್ದಾಳೆ.
ಏನಿದು ಪ್ರಕರಣ?
ಆರೋಪಿ ಪ್ರೇಮ ಮತ್ತು ಪರುಶುರಾಮ ಕಳೆದ 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ರೋಹಿತ್ ಮತ್ತು ರೋಹಿಣಿ ಇಬ್ಬರು ಮಕ್ಕಳಿದ್ದು, ಸಂಸಾರಿಕ ಜೀವನ ಚೆನ್ನಾಗಿ ನಡೆದುಕೊಂಡು ಹೋಗುತ್ತಿತ್ತು. ಪತಿ ಪರುಶರಾಮ್ ಗಾರೆ ಕೆಲಸ ಮಾಡುತ್ತಿದ್ದು, ಇತ್ತೀಚೆಗೆ ಕುಡಿತದ ಚಟಕ್ಕೆ ದಾಸನಾಗಿದ್ದನು. ಹೀಗಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದು, ಮಕ್ಕಳನ್ನು ಸಾಕಲು, ಮನೆಯ ನಿರ್ವಹಣೆ ಮಾಡಲು ಕೂಡ ಹಣ ಕೊಡುತ್ತಿರಲಿಲ್ಲ. ಹೀಗಾಗಿ ಮಕ್ಕಳು ತಮಗೆ ಹೊರೆಯಾಗಿದ್ದಾರೆ ಎಂದು ತಿಳಿದು ತಾಯಿ ಮಕ್ಕಳ ಕುತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ನಮ್ಮಿಬ್ಬರ ಸಂಸಾರದಲ್ಲಿ ಮಕ್ಕಳೇ ನಮಗೆ ಭಾರವಾಗಿದ್ದು, ಮಕ್ಕಳನ್ನು ಸಾಕಲು ಹಣ ಕೊಡುತ್ತಿರಲಿಲ್ಲ. ಪತಿ ಕುಡಿತ ಚಟಕ್ಕೆ ದಾಸನಾಗಿದ್ದನು. ಆದ್ದರಿಂದ ಇಂದು ಬೆಳಗ್ಗೆ ಕತ್ತು ಹಿಸುಕಿ ಕೊಂದಿರುವುದಾಗಿ ತಾಯಿ ವಿಚಾರಣೆ ವೇಳೆ ತಪ್ಪು ಒಪ್ಪಿಕೊಂಡಿದ್ದಾಳೆ.
ಸದ್ಯಕ್ಕೆ ಈ ಘಟನೆಯ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಹಳೇ ಹುಬ್ಬಳ್ಳಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿ ತಾಯಿ ಮತ್ತು ಪತಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv