ಬೆಳ್ಳಂಬೆಳಗ್ಗೆ ಭೀಕರ ಅನಾಹುತ – ಲಾರಿ ಹರಿದು ತಾಯಿ-ಮಗಳು ದುರ್ಮರಣ

Public TV
0 Min Read
ACCIDENT 3

ಬೆಂಗಳೂರು: ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ. ಲಾರಿ ಹರಿದು ಇಬ್ಬರು ಮಹಿಳೆಯರು ಮೃತಪಟ್ಟ ಘಟನೆ ನಡೆದಿದೆ.

ಈ ಘಟನೆ ಬೆಂಗಳೂರಿನ ಬಾಣಸವಾಡಿ ಬಳಿಯ ಬಾಬುಸಾಬ್‍ಪಾಳ್ಯದಲ್ಲಿ ನಡೆದಿದೆ. ಘಟನೆಯಲ್ಲಿ ಮೃತಪಟ್ಟವರು ತಮಿಳುನಾಡು ಮೂಲದ ತಾಯಿ-ಮಗಳು ಎಂದು ಹೇಳಲಾಗುತ್ತಿದೆ.

ಮೃತರಿಬ್ಬರು ದೀಪಾವಳಿ ಹಬ್ಬ ಮಗಿಸಿ ತಮಿಳುನಾಡಿನಿಂದ ಬೆಂಗಳೂರಿಗೆ ವಾಪಾಸ್ಸಾಗಿ ಸುಮಾರು 6.30ರ ವೇಳೆಗೆ ಬಸ್ಸಿನಿಂದ ಇಳಿದು ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಪಾದಾಚಾರಿಗಳ ಮೇಲೆ ಲಾರಿಯೊಂದು ಹರಿದಿದೆ. ಪರಿಣಾಮ ಮಹಿಳೆಯರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಬಾಣಸವಾಡಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ.

BNG 1 6

BNG 2 7

BNG 3 7

BNG 8 3

BNG 9 2

BNG 4 6

BNG 5 7

BNG 6 5

BNG 7 4

BNG 10 2

BNG 11 2

BNG 12 2

BNG 13 1

BNG 14 1

BNG 15

Share This Article
Leave a Comment

Leave a Reply

Your email address will not be published. Required fields are marked *