ಧಾರವಾಡ: ಫೈನಾನ್ಸ್ಗೆ ಕಟ್ಟಬೇಕಿದ್ದ 3 ಲಕ್ಷ ರೂ.ಗೂ ಅಧಿಕ ಹಣವನ್ನು ಆನ್ಲೈನ್ ಗೇಮ್ಗೆ (Online Game) ಬಳಕೆ ಮಾಡಿ, ಬಳಿಕ ದುಡ್ಡು ವಾಪಸ್ ಕಟ್ಟಲಾಗದೇ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಧಾರವಾಡ (Dharwad) ತಾಲೂಕಿನ ಮಂಗಳಗಟ್ಟಿ ಗ್ರಾಮದಲ್ಲಿ ನಡೆದಿದೆ.
ಧಾರವಾಡ ತಾಲೂಕಿನ ಮಂಗಳಗಟ್ಟಿ ಮೂಲದ ಬಸವರಾಜ ಸಕ್ರಪ್ಪನ್ನವರ (28) ಆತ್ಮಹತ್ಯೆ ಮಾಡಿಕೊಂಡ ಯುವಕ. ಊರಿನಲ್ಲಿಯೇ ಫೈನಾನ್ಸ್ ಹಣವನ್ನ ಕಲೆಕ್ಷನ್ ಮಾಡುವ ಕೆಲಸ ಮಾಡುತ್ತಿದ್ದ. ಇದನ್ನೂ ಓದಿ:ಬಾಳೆಹೊನ್ನೂರಲ್ಲಿ ಕಾಡಾನೆ ದಾಳಿ – ಕಾರ್ಮಿಕನ ಸ್ಥಿತಿ ಗಂಭೀರ
ಆನ್ಲೈನ್ ಗೇಮ್ ಚಟಕ್ಕೆ ಬಿದ್ದು ಸಂಗ್ರಹಿಸಿದ್ದ ಫೈನಾನ್ಸ್ ಹಣವನ್ನು ಆಟಕ್ಕೆ ಬಳಸಿಕೊಂಡಿದ್ದ. ಹೀಗೆ ಬಳಸಿಕೊಂಡು 3 ಲಕ್ಷ ರೂ.ಗೂ ಅಧಿಕ ಹಣವನ್ನು ಕಳೆದುಕೊಂಡಿದ್ದ. ಫೈನಾನ್ಸ್ ಹಣವನ್ನು ವಾಪಸ್ ಕಟ್ಟಲಾಗದೇ ಮನನೊಂದು ಮರಕ್ಕೆ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಗರಗ (Garag) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಇದನ್ನೂ ಓದಿ: ದರ್ಶನ್ಗೆ ಜೈಲಿನಲ್ಲಿದ್ದರೂ ತಪ್ಪದ ಸಂಕಷ್ಟ – ಅತ್ಯಾಪ್ತನ ಹೇಳಿಕೆಯೇ ಮುಳುವಾಯ್ತಾ?

