ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಗ್ರಾಮೀಣ ಕ್ರೀಡಾಕೂಟದ ಉದ್ಘಾಟಿಸಿ ಬಳಿಕ ಕೆಸರು ಗದ್ದೆ ಓಟದಲ್ಲಿ ಭಾಗವಹಿಸಿ ಮನರಂಜನೆ ನೀಡಿದ್ದಾರೆ.
ಭಾನುವಾರ ಮೂಡಿಗೆರೆ ತಾಲೂಕಿನ ಬಡವನದಿಡ್ಡೆ ಗ್ರಾಮದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಬಳಿಕ ತಾನು ಓರ್ವ ಸ್ಫರ್ಧಾಳು ಆಗಿ ಕೆಸರು ಗದ್ದೆಯಲ್ಲಿ ಓಡಿದ್ದಾರೆ.
ಮಕ್ಕಳು ಹಾಗೂ ದೊಡ್ಡವರು ಇಬ್ಬರ ಜೊತೆಗೂ ಸ್ಪರ್ಧೆಗೆ ನಿಂತ ಕುಮಾರಸ್ವಾಮಿ ನಾನು ಜನರ ಶಾಸಕ ಎಂದು ಮಕ್ಕಳೊಂದಿಗೆ ಮಕ್ಕಳಾಗಿ ಕೆಸರು ಗದ್ದೆಯಲ್ಲಿ ಎದ್ದು, ಬಿದ್ದು, ಓಡಿ ಸಂಭ್ರಮಿಸಿದ್ದಾರೆ. ಶಾಸಕರ ಓಟ ಕಂಡ ಸ್ಥಳಿಯರು ಕೂಡ ಅವರ ಜೊತೆ ಓಡಿದ್ದಾರೆ.
ತಾನು ಶಾಸಕ ಎನ್ನುವ ಹಮ್ಮು-ಬಿಮ್ಮನ್ನು ಬಿಟ್ಟು ಓಡಿದ್ದನ್ನು ನೋಡಿದ ಜನ ಕುಮಾರಸ್ವಮಿಯವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews