ಬೆಂಗಳೂರು: ಬಿಜೆಪಿಯವರಿಗೆ (BJP) ಈ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಬಾರದು. ಹೇಗಾದರೂ ಮಾಡಿ ಇದನ್ನು ಹತ್ತಿಕ್ಕುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಪರಮೇಶ್ವರ್ (Parameshwar) ಸಿಟ್ಟು ಹೊರ ಹಾಕಿದ್ದಾರೆ.
ದಲಿತರ ಹಣ ಗ್ಯಾರಂಟಿಗೆ ಬಳಸಿದ ವಿಚಾರಕ್ಕೆ ಬಿಜೆಪಿ ಜನಾಂದೋಲನ ಮಾಡಲು ಮುಂದಾಗಿದ್ದಕ್ಕೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿಗಳನ್ನ ಬಡವರಿಗೆ ನೀಡಲಾಗುತ್ತಿದೆ. ಬಡವರಿಗೆ (Poor) ಹಣ ಕೊಡಲು ಇವರಿಗೆ ಮನಸ್ಸಿಲ್ಲ ಅಂದರೆ ಬಿಜೆಪಿಯ ಸಿದ್ಧಾಂತ ಬಡವರ ಪರ ಇಲ್ಲ ಎಂದಾಯಿತು. ಅದನ್ನು ಅವರು ಪಬ್ಲಿಕ್ ಆಗಿ ಹೇಳಲು ಹೊರಟಿದ್ದಾರೆ. ಜನ ಇದನ್ನೆಲ್ಲಾ ಗಮನಿಸುತ್ತಾರೆ ಎಂದರು.
ಬಡವರಿಗೆ ಕೊಡುವ ಹಣಕ್ಕೂ ನೀವು ಅಡ್ಡ ಬರುತ್ತೀರಿ. ಬಿಜೆಪಿ ಬಗ್ಗೆ ಜನ ಸಮುದಾಯ ಏನು ಯೋಚನೆ ಮಾಡುತ್ತದೆ? ದಲಿತರಿಗೆ (Dalits) ಮೀಸಲಿಟ್ಟ ಹಣವನ್ನು ದಲಿತರಿಗೆ ಕೊಡುತ್ತೇವೆ. ಶಕ್ತಿ ಯೋಜನೆಯಲ್ಲಿ ದಲಿತರು ಹೋಗಲ್ವಾ? ನಾನು ಅದನ್ನ ಸಮರ್ಥನೆ ಮಾಡಲು ಹೋಗುವುದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಕೋರ್ಟ್ ಹಾಲ್ನಲ್ಲಿ ಪವಿತ್ರಾ, ದರ್ಶನ್ ದೂರ ದೂರಾ – ಕಣ್ಣೀರಿಡುತ್ತ ತೆರಳಿದ ಗೆಳತಿ!
ಸರ್ಕಾರದಲ್ಲಿ ಇಂಥ ಯೋಜನೆಗಳು ಮಾಡುವಾಗ ಯೋಚನೆ ಮಾಡುತ್ತೇವೆ. ಬಡವರಿಗೆ ಕೊಡುವ ಕಾರ್ಯಕ್ರಮದಲ್ಲಿ ಒಂದಿಷ್ಟು ಬದಲಾವಣೆಗಳು ಆಗುತ್ತದೆ. ಅದನ್ನೇ ದೊಡ್ಡದು ಮಾಡುತ್ತಿದ್ದಾರೆ. ನಾವು ಏನು ಹಣ ಕೊಳ್ಳೆ ಹೊಡೆದಿದ್ದೇವಾ ಎಂದು ಆಕ್ರೋಶ ವ್ಯಕ್ತಪಡಿಸಿದರು.