ಮೋದಿ ಸರ್ಕಾರದ ಬಜೆಟ್‍ನಲ್ಲಿ ಸಿಗಲಿದೆಯಾ ಬಂಪರ್ ಆಫರ್?

Public TV
3 Min Read
arun

ಬೆಂಗಳೂರು: ಕೇಂದ್ರ ಬಜೆಟ್ ಮಂಡನೆಯಾಗಲು ಕ್ಷಣಗಣನೆ ಆರಂಭವಾಗಿದೆ. ಪ್ರಧಾನಿ ಮೋದಿ ಸರ್ಕಾರದ ಕಡೆಯ ಪೂರ್ಣ ಬಜೆಟ್ ಮೇಲೆ ಜನ ಸಾಮಾನ್ಯರ ನಿರೀಕ್ಷೆಗಳು ಹೆಚ್ಚಾಗಿವೆ. ಕಳೆದ ಮೂರು ಬಜೆಟ್ ಗಿಂತಲೂ ಈ ಬಜೆಟ್ ಪ್ರಾಮುಖ್ಯತೆ ಪಡೆದುಕೊಳ್ಳಲಿದ್ದು ಕಾಮನ್ ಮ್ಯಾನ್ ಗೆ ಹಾಗು ಚುನಾವಣಾ ಹೊಸ್ತಿರಲಿಲ್ಲಿರುವ ಕರ್ನಾಟಕ್ಕೆ ಏನು ಸಿಗಬಹುದು ಇಲ್ಲಿದೆ ಮಾಹಿತಿ.

ಬಜೆಟ್‍ನಲ್ಲಿ ಸಿಗಲಿದಿಯಾ ಬಂಪರ್ ಆಫರ್…?
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಪೂರ್ಣಾವಧಿಯ ನಾಲ್ಕನೇ ಬಜೆಟ್ ಇದು ಮುಂದಿನ ವರ್ಷ ಚುನಾವಣೆ ಹಿನ್ನೆಲೆ ಅದು ಕೇವಲ ಚುನಾವಣಾ ಬಜೆಟ್ ಆಗಲಿದೆ. ಹೀಗಾಗಿ ಈ ವರ್ಷದ ಬಜೆಟ್ ಮೇಲೆ ನಿರೀಕ್ಷೆಗಳ ಮಹಾಪೂರವೇ ವ್ಯಕ್ತವಾಗುತ್ತಿದೆ. ಪ್ರತಿಯೊಂದರಲ್ಲೂ ಹೊಸತನವನ್ನು ನಿರೀಕ್ಷೆ ಮಾಡುವ ಪ್ರಧಾನಿ ನರೇಂದ್ರ ಮೋದಿ ಈ ಭಾರಿ ಹಲವು ವಿಶೇಷತೆಗಳು ಬಜೆಟ್‍ನಲ್ಲಿವೆ ಎಂದು ಹೇಳಲಾಗಿದೆ. ಸ್ವತಃ ಅವರೇ ಹೇಳಿದಂತೆ ಗ್ರಾಮೀಣ ಭಾರತದ ಕೃಷಿಕರು, ಕಾರ್ಮಿಕ ವಲಯದ ಬಲವರ್ಧನೆ ಗೆ ಹೆಚ್ಚು ಗಮನಹರಿಸಲಾಗುವುದು. ಕಾಮನ್ ಮ್ಯಾನ್ ನಿರೀಕ್ಷೆ ಗಳನ್ನು ಪೂರ್ಣ ಮಾಡುವ ನಿಟ್ಟಿನಲ್ಲಿ ಆದಾಯ ತೆರಿಗೆ ನಿಯಮ ಸಡಿಲಿಕೆ ಹಾಗು ಆದಾಯ ತೆರಿಗೆ ಮಿತಿ ಹೆಚ್ಚಳ ಸಾಧ್ಯತೆ ಇದ್ದು ಉದ್ಯೋಗ ಸೃಷ್ಟಿಯಾಗುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಗಳನ್ನು ಕೇಂದ್ರ ಸರ್ಕಾರ ಇಡಲಿದೆ ಎಂದು ಭಾವಿಸಲಾಗಿದೆ. ಇದನ್ನೂ ಓದಿ: ಹಣಕಾಸು ಸಚಿವರು ಬಜೆಟ್‍ಗೂ ಮುನ್ನ ಈ ಸೂಟ್‍ಕೇಸ್ ತರೋದು ಯಾಕೆ?

budget Halwa

ಬಜೆಟ್ ನಲ್ಲಿ ಇರಬಹುದಾದ ಪ್ರಮುಖ ಅಂಶಗಳೇನು?
* ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಗೆ ಹೆಚ್ಚಿನ ಅನುದಾನ.
* ರೈತರ ಸಾಲ ಅಥಾವ ಬಡ್ಡಿ ಮನ್ನಾ ಬದಲಿಗೆ ಸಬ್ಸಡಿ ದರದಲ್ಲಿ ಪೂರಕ ವಸ್ತುಗಳ ಪೂರೈಕೆ ಹಾಗೂ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಒದಗಿಸುವ ಸಾಧ್ಯತೆ.
* ಸರ್ಕಾರ ನರೇಗಾದಂತ ಯೋಜನೆಗಳ ಮೂಲಕ ಗ್ರಾಮೀಣಾ ಭಾಗದ ನೌಕರರ ಕೂಲಿ ಹೆಚ್ಚಳಕ್ಕೆ ಪ್ರಯತ್ನಿಸಬಹುದು.
* ಜಿಎಸ್‍ಟಿ ವ್ಯಾಪ್ತಿಯಿಂದ ಮತ್ತಷ್ಟು ವಸ್ತುಗಳನ್ನು ಕೈ ಬಿಡುವ ಸಾಧ್ಯತೆ.
* ಉದ್ಯೋಗ ಸೃಷ್ಟಿ ವಿಫಲದಂತ ಆರೋಪ ಎದುರಿಸುತ್ತಿರುವ ಸರ್ಕಾರ ಐಟಿ ಕಾನೂನುಗಳುಗೆ ಬದಲಾವಣೆ ತಂದು ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಕಲ್ಪಿಸಬಹುದು.
* ಆದಾಯ ತೆರಿಗೆ ವಿಚಾರದಲ್ಲಿ ಭಾರಿ ನಿರೀಕ್ಷೆಗಳಿದ್ದು 2.5 ಲಕ್ಷದ ಮಿತಿಯಿಂದ ಮೂರು ಲಕ್ಷಕ್ಕೆ ಹೆಚ್ಚಳ ಮಾಡಬಹುದು ಮತ್ತು ಆದಾಯ ತೆರಿಗೆ ಸಲ್ಲಿಕೆ ನಿಯಮಗಳನ್ನು ಕೊಂಚ ಸಡಿಸುವ ಸಾಧ್ಯತೆ
* ದೇಶದ ಪ್ರತಿ ವ್ಯಕ್ತಿಗೂ ಐದು ಲಕ್ಷದ ವರೆಗಿನ ಏಕ ರೂಪದ ವಿಮೆ ಭಾಗ್ಯ ಕಲ್ಪಿಸಬಹುದು.
* ರೈಲ್ವೆ ವ್ಯವಸ್ಥೆ ಯಲ್ಲಿ ಹೊಸ ಯೋಜನೆ ಗಳನ್ನು ಘೋಷಿಸದೇ ಘೋಷಿತ ಯೋಜನೆಗಳಿಗೆ ಹಣ ಒದಗಿಸುವುದು ನಿಲ್ದಾಣಗಳನ್ನು ಉನ್ನತ ದರ್ಜೆಗೆ ಏರಿಸುವುದು.
* ಮೂಲಭೂತ ಸೌಕರ್ಯ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಪ್ರೋತ್ಸಾಹ ನೀಡುವುದು.
* 30% ನಷ್ಟಿರುವ ಕಾರ್ಪೋರೇಟ್ ತೆರಿಗೆಯನ್ನು 25% ಇಳಿಕೆ ಮಾಡಬಹುದು.
* ನೋಟ್ ಬ್ಯಾನ್ ಹಿನ್ನೆಲೆ ಹಣ ಬ್ಯಾಂಕುಗಳಲ್ಲಿ ಕೇಂದ್ರಕೃತವಾದ ಹಿನ್ನೆಲೆ? ಉಳಿತಾಯ ಹಾಗೂ ಠೇವಣಿಗಳ ಮೇಲೆ ಬಡ್ಡಿ ದರ ಇಳಿಕೆ ಮಾಡಿ ದೀರ್ಘಾವಧಿಯ ಸಾಲಗಳಿಗೆ ಒತ್ತು ನೀಡಬಹುದು.

jaitley budget bag 759

ಕಳೆದ ಬಾರಿ ಬಜೆಟ್‍ನಲ್ಲಿ ರಾಜ್ಯದ ರೈಲ್ವೆ ಯೋಜನೆಗಳಿಗೆ 800 ಕೋಟಿ ರೂ.ಗಳಷ್ಟು ಅನುದಾನ ಒದಗಿಸಿ, ವಿವಿಧ ಕಾಮಗಾರಿಗಳಿಗೆ ಬೇರೆ ಬೇರೆ ಮೂಲಗಳಿಂದ ಅನುದಾನ ಲಭ್ಯವಾಗುವಂತೆ ಮಾಡಲಾಗಿತ್ತು. ಈ ಬಾರಿಯ ಬಜೆಟ್‍ನಲ್ಲಿ ಅನುದಾನ ಡಬಲ್ ಆಗುವ ನಿರೀಕ್ಷೆಯಲ್ಲಿದ್ದೇವೆ. ರೈಲ್ವೆ ಯೋಜನೆಗಳಿಗೆ ಜಮೀನು, ಹಣದ ಸಹಭಾಗಿತ್ವ ನೀಡುತ್ತಿರುವ ಮೊದಲ ರಾಜ್ಯ ಕರ್ನಾಟಕ. ಹೀಗಾಗಿ, ಕೇಂದ್ರ ನಮ್ಮ ಬಗ್ಗೆ ವಿಶೇಷ ಮುತುವರ್ಜಿ ತೋರಬಹುದು ಅಂತಾ ನಿರೀಕ್ಷೆ ಮಾಡಲಾಗಿದೆ. ಒಟ್ನಲ್ಲಿ ಈ ಎಲ್ಲ ನಿರೀಕ್ಷೆಗಳ ಕುತೂಹಲಕ್ಕೆ ಇನ್ನು ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.

arun jaitley budget 2

Share This Article
Leave a Comment

Leave a Reply

Your email address will not be published. Required fields are marked *